ಶಿವಕುಮಾರ್ಗೆ ಶ್ರೀರಾಮುಲು ಸವಾಲು
Team Udayavani, Oct 14, 2018, 6:45 AM IST
ಹೊಸಪೇಟೆ: ಬಳ್ಳಾರಿಗೆ ಯಾವುದೇ ನಾಯಕರು ಬರಲಿ, ಅವರನ್ನು ಎದುರಿಸುವ ಶಕ್ತಿ ನನಗೆ ಇದೆ. ಈ ಉಪಚುನಾವಣೆಯಲ್ಲಿ ಮಣ್ಣಿನ ಮಗಳು (ಜೆ.ಶಾಂತ) ಗೆಲ್ಲುತ್ತಾಳ್ಳೋ,ಕನಕಪುರದ ಡಿಕೆಶಿ ಗೆಲ್ಲುತ್ತಾರೋ ನೋಡೋಣ ಎಂದು ಶಾಸಕ ಬಿ.ಶ್ರೀರಾಮುಲು ಸವಾಲು ಹಾಕಿದ್ದಾರೆ.
ನಗರದಲ್ಲಿ ಮಾತನಾಡಿ, ಬಳ್ಳಾರಿಗೆ ಎಂತಹ ನಾಯಕರೇ ಬರಲಿ, ಎದುರಿಸುವಷ್ಟು ಶಕ್ತಿ ನನಗಿದೆ. ಡಿ.ಕೆ.ಶಿವಕುಮಾರ್
ಅವರಿಗೇನು ಎರಡು ಕೊಂಬುಗಳಿವೆಯೇ?ಕನಕಪುರದ ಡಿಕೆಶಿ ಗೆಲ್ಲುತ್ತಾರೋ, ಬಳ್ಳಾರಿ ಮನೆ ಮಗಳು ಶಾಂತಾ ಗೆಲ್ಲುತ್ತಾರೋ
ನೋಡೋಣ ಎಂದರು. ಕಳೆದ ಉಪಚುನಾವಣೆಯಲ್ಲಿ ಡಿಕೆಶಿ ಕುತಂತ್ರ ಮಾಡಿ ಗೆದ್ದಿದ್ದಾರೆ. ಅವರ ಭವಿಷ್ಯ ಅವರಿಗೇ ಗೊತ್ತಾಗಿಲ್ಲ. ಯಾವಾಗ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ. ಹಣ ಇದೆ ಎಂಬ ಅಹಂನಿಂದ ಅವರು ಮೆರೆಯುತ್ತಿದ್ದಾರೆ. ದೇವರು ನನ್ನ ಪಾಲಿಗೆ ಕಣ್ಣು ತೆರೆದರೆ, ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೇರು ಸಮೇತ ಕಿತ್ತೆಸೆಯುವ ತಾಕತ್ತಿದೆ ಎಂದು ಗುಡುಗಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.