ಕೈ ಅಭ್ಯರ್ಥಿಯಾಗಿ ಕೊಂಡಯ್ಯ ಕಣಕ್ಕೆ
Team Udayavani, Nov 23, 2021, 3:35 PM IST
ಬಳ್ಳಾರಿ: ಸ್ಥಳೀಯ ಸಂಸ್ಥೆಗಳಿಂದ ನಡೆಯುವ ವಿಧಾನಪರಿಷತ್ ಚುನಾವಣೆಯ ಬಳ್ಳಾರಿ ಮತಕ್ಷೇತ್ರದಕಾಂಗ್ರೆಸ್ ಟಿಕೆಟ್ನ್ನು ಕೊನೆಗೂ ಪಡೆಯುವಲ್ಲಿಹಾಲಿ ಸದಸ್ಯ ಕೆ.ಸಿ. ಕೊಂಡಯ್ಯ ಯಶಸ್ವಿಯಾಗಿದ್ದು, ಕೊನೆಯ ದಿನವಾದ ನ.23 ರಂದು ಮಂಗಳವಾರ ನಾಮಪತ್ರ ಸಲ್ಲಿಸಲಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್ ಟಿಕೆಟ್ಗಾಗಿ ತೀವ್ರಪೈಪೋಟಿ ಏರ್ಪಟ್ಟಿತ್ತು. ಈ ಹಿಂದೆ ಪಕ್ಷದ ಹಿರಿಯಮುಖಂಡರು ನೀಡಿದ್ದ ಭರವಸೆಯಿಂದ ಈ ಬಾರಿಎಂಎಲ್ಸಿ ಟಿಕೆಟ್ನ್ನು ದಲಿತ ಸಮುದಾಯಕ್ಕೆಕೊಡಿಸಬೇಕು ಎಂದು ಜಿಪಂ ಸದಸ್ಯ ಮುಂಡ್ರಿಗಿನಾಗರಾಜ್ ಪಟ್ಟು ಹಿಡಿದಿದ್ದರು.
ಜತೆಗೆ ಕುರುಬಸಮುದಾಯವೂ ಟಿಕೆಟ್ ಕೋರಿ ಮಾಜಿ ಎಂಎಲ್ಸಿಕೆ.ಎಸ್.ಎಲ್. ಸ್ವಾಮಿ ಅವರಿಂದ ಅರ್ಜಿ ಸಲ್ಲಿಸಿತ್ತು.ಕೊಂಡಯ್ಯನವರು ಹಿಂದೆ ಸರಿದರೆ ಎಂಎಲ್ಸಿಟಿಕೆಟ್ ನನಗೆ ಕೊಡುವಂತೆ ಮಾಜಿ ಶಾಸಕ ಅನಿಲ್ಲಾಡ್ ಅವರು ಪಕ್ಷದ ವರಿಷ್ಠರ ಮುಂದೆ ಅಹವಾಲು ಸಲ್ಲಿಸಿದ್ದರು.
ಇದರಿಂದ ಟಿಕೆಟ್ಗಾಗಿ ಪೈಪೋಟಿಏರ್ಪಟ್ಟಿದ್ದು, ಈ ಕಗ್ಗಟ್ಟು ಕೆಪಿಸಿಸಿ ವರಿಷ್ಠರಿಗೂತಲೆನೋವಾಗಿ ಪರಿಣಮಿಸಿದ್ದ ಹಿನ್ನೆಲೆಯಲ್ಲಿಅಂತಿಮವಾಗಿ ಟಿಕೆಟ್ ಹಂಚಿಕೆಯು ದೆಹಲಿವರಿಷ್ಠರ ಬಳಿಗೆ ತೆರಳಿದ್ದು, ಎಲ್ಲ ರೀತಿಯ ಹಗ್ಗಜಗ್ಗಾಟಗಳು ನಡೆದ ಬಳಿಕ ಅಂತಿಮವಾಗಿ ವಿಧಾನಪರಿಷತ್ ಹಾಲಿ ಸದಸ್ಯ ಕೆ.ಸಿ.ಕೊಂಡಯ್ಯ ಅವರಹೆಸರನ್ನು ಫೈನಲ್ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿಕೆ.ಸಿ. ಕೊಂಡಯ್ಯನವರು ಎರಡನೇ ಬಾರಿಗೆ ವಿಧಾನಪರಿಷತ್ ಚುನಾವಣೆಯಲ್ಲಿ ಸ್ಪ ರ್ಧಿಸಲು ಎಲ್ಲರೀತಿಯ ಸಿದ್ಧತೆ ಮಾಡಿಕೊಂಡಿದ್ದಾರೆ.ನಾಮಪತ್ರ ಸಲ್ಲಿಸಲು ಕೊನೆ ದಿನವಾದ ನ.23ರಂದು ಬಳ್ಳಾರಿ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿನಾಮಪತ್ರ ಸಲ್ಲಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿಮುನ್ನಾದಿನವಾದ ಸೋಮವಾರ ಕೆಪಿಸಿಸಿ ಅಧ್ಯಕ್ಷಡಿ.ಕೆ. ಶಿವಕುಮಾರ್ ಅವರಿಂದ ಬಿ. ಫಾರಂನ್ನುಅಭ್ಯರ್ಥಿ ಕೆ.ಸಿ. ಕೊಂಡಯ್ಯನವರು ಸ್ವೀಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ