ಸೇವಾ ಭದ್ರತೆಗೆ ಒತ್ತಾಯಿಸಿ ಮನವಿ
Team Udayavani, Oct 10, 2020, 5:53 PM IST
ಸಂಡೂರು: 18 ವರ್ಷಗಳಿಂದ ಸರ್ಕಾರದ ಯಾವುದೇ ವೇತನ ಹಾಗೂ ಸೇವಾ ಭದ್ರತೆ ಇಲ್ಲದೆ ಪೋಡಿ ಮುಕ್ತ ಕೆರೆ ಹೀಗೆ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತಿದ್ದೇವೆ.ಅದರೆ ನಮ್ಮನ್ನು ಸ್ವಾಮಿತ್ವ ಯೋಜನೆ ಅಡಿಯಲ್ಲಿ ಬಳಸಿಕೊಳ್ಳಲು ಆದೇಶಿಸಿದ್ದು ಅದನ್ನು ಕೈಬಿಟ್ಟು ನಮಗೆ ಸೇವಾ ಭದ್ರತೆಯನ್ನು ಕೊಡಬೇಕೆಂದು ಖಾಸಗಿ ಪರವಾನಿಗೆ ಪಡೆದ ಭೂಮಾಪಕರ ಮುಖಂಡಎನ್. ಹನುಮಂತಪ್ಪ ಮನವಿ ಮಾಡಿದರು.
ಅವರು ತಹಶೀಲ್ದಾರ್ ಎಚ್. ಜೆ. ರಶ್ಮಿಯವರಿಗೆ ಮನವಿ ಸಲ್ಲಿಸಿ ಮಾತನಾಡಿ, ಆಯುಕ್ತರು ಪರವಾನಗೆ ಪಡೆದ ಭೂಮಾಪಕರನ್ನು ಬಳಸಿಕೊಂಡು ಸ್ವಾಮಿತ್ಯಯೋಜನೆಯನ್ನು ನಿರ್ವಹಿಸಬೇಕು ಎಂದು ಅದೇಶಿಸಿದ್ದಾರೆ. ಆದರೆ ಇದರಲ್ಲಿ ಯಾವುದೇ ಸೇವಾ ಭದ್ರತೆಯಾಗಲಿ ವೇತನವಾಗಲಿ,ಸಲಕರಣೆಗಳಾಗಲಿ ಮತ್ತು ಜವಾನರನ್ನು ಕೊಡದೇ ಬಳಸಿಕೊಳ್ಳಲು ತಿಳಿಸಿದ್ದು ಇದರಿಂದ ಇಡಿ ಕುಟುಂಬಗಳು ಸಂಕಷ್ಟಕ್ಕೆ ಸಿಲುಕುತ್ತವೆ. ಆದ್ದರಿಂದ ಸರ್ಕಾರದಿಂದ ಹಣಬಿಡುಗಡೆಯೂ ಅಗುವುದು ದುಸ್ತರವಾಗುತ್ತಿದೆ. ಆದ್ದರಿಂದ ಈ ಸ್ವಾಮಿತ್ವ ಯೋಜನೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಕೈಬಿಡಬೇಕು. 11 ಈ ಅಡಿಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುವ ಮೂಲಕ ಭೂಮಾಪಕರಿಗೆ ಸರಿಯಾದ ತರಬೇತಿ ಮತ್ತು ಸಲಕರಣೆ, ಜವಾನರನ್ನು ನೀಡುವ ಮೂಲಕ ಕೆಲಸಕ್ಕೆ ಸರಿಯಾದವೇತವನ್ನು ನೀಡಬೇಕು, ಇಲ್ಲವಾದಲ್ಲಿ ನಮ್ಮ ಕುಟುಂಬಗಳ ನಿರ್ವಹಣೆ ಈಗಾಗಲೇ ದುಸ್ತರವಾಗಿದೆ. ಆದರೆ ಈ ಯೋಜನೆಯಲ್ಲಿ ಮುಂದುವರೆದರೆ ಇನ್ನೂ ಕಷ್ಟವಾಗುತ್ತದೆ. ಆದ್ದರಿಂದ ಸ್ವಾಮಿತ್ಯ ಯೋಜನೆ ಅಡಯಲ್ಲಿಪರವಾನಗಿ ಭೂಮಾಪಕರನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪರವಾನಗಿ ಪಡೆದ ಭೂಮಾಪಕರಾದ ಎಚ್.ಎಂ. ಶಿವಮೂರ್ತಿ, ಯು. ರಾಘವೇಂದ್ರ, ಎ.ಎನ್. ಕೆಂಚಲಿಂಗಪ್ಪ, ಜಿ.ಎಂ.ಕುವೆಂಪು, ಕೆ. ಗಂಗಾಧರ ಹಾಗೂಎನ್. ಹನುಮಂತಪ್ಪ ಇವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಸಭೆ ಟಿಕೆಟ್ ಮೂಲಕ ಅಜ್ಞಾತವಾಸದಿಂದ ಹೊರ ಬಂದಂತಾಗಿದೆ: ಶ್ರೀರಾಮುಲು
ರಾಮೇಶ್ವರಂ ಕೆಫೆ ಪ್ರಕರಣ: ಬಳ್ಳಾರಿಯಲ್ಲಿ NIA ಅಧಿಕಾರಿಗಳ ಶೋಧ, ಓರ್ವ ವಶಕ್ಕೆ
Bellary; “ಬ್ರದರ್ಸ್’ ವಿಧಾನಸೌಧಕ್ಕೇ ಬಾಂಬ್ ಇಡ್ತಾರೆ: ಶ್ರೀರಾಮುಲು
Bellary; ಕಾಂಗ್ರೆಸ್ ಗ್ಯಾರಂಟಿ ಬಳಿಕ ಮೋದಿ ಗ್ಯಾರಂಟಿ ಬಂದಿದೆ: ಸಚಿವ ನಾಗೇಂದ್ರ ವಾಗ್ದಾಳಿ
Rameshwaram Cafe Case; ಬಾಂಬರ್ ವೇಷ ತೊಡಿಸಿ ಪತ್ತೆ ಹಚ್ಚಲು ಶತಪ್ರಯತ್ನ
MUST WATCH
ಹೊಸ ಸೇರ್ಪಡೆ
ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ
Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ
Telangana: ಜಾರ್ಖಂಡ್ ಗವರ್ನರ್ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ
Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ
ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ