ನಿರುಪಯುಕ್ತ ಬಯೋಮೆಟ್ರಿಕ್
•ಅಂತರ್ಜಾಲ ಸೌಲಭ್ಯವಿಲ್ಲ •ಹಣ ಖರ್ಚಾದರೂ ಸಿಗದ ಲಾಭ
Team Udayavani, Jun 18, 2019, 10:49 AM IST
ಸಿರುಗುಪ್ಪ: ಕುರುವಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿರುವ ನಿರುಪಯುಕ್ತ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಯಂತ್ರ.
ಸಿರುಗುಪ್ಪ: ತಾಲೂಕಿನ ಕರೂರು, ಸಿರಿಗೇರಿ, ತಾಳೂರು, ರಾವಿಹಾಳ್, ಬಾಗೇವಾಡಿ ಕುರುವಳ್ಳಿ, ಹಚ್ಚೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ಹಾಜರಾತಿ ನಿರ್ವಹಣೆಗಾಗಿ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಯಂತ್ರವನ್ನು 2017 ಡಿಸೆಂಬರ್ ತಿಂಗಳಲ್ಲಿ ಅಳವಡಿಸಿದ್ದರೂ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಕಾರ್ಯ ನಿರ್ವಹಿಸುತ್ತಿಲ್ಲ.
ಈ ಯಂತ್ರಗಳನ್ನು ಬೆಂಗಳೂರು ಮೂಲದ ಪವನ್ ಎಂಟರ್ ಪ್ರೈಸಸ್ ಕಂಪನಿಯಿಂದ ಪೂರೈಕೆ ಮಾಡಿದ್ದಾರೆ. ರೂ.25,370 ಕೊಟ್ಟು 8 ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರದಿಂದ ಖರೀದಿಸಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಲ್ಲಿಯವರೆಗೆ ಕೆಲವು ಆರೋಗ್ಯ ಕೇಂದ್ರದಲ್ಲಿ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಯಂತ್ರ ಅಳವಡಿಸಲಾಗಿದ್ದು, ಅವು ಕಾರ್ಯನಿರ್ವಹಿಸುತ್ತಿಲ್ಲ, ಇನ್ನು ಕೆಲವು ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸದೆ ಅಧಿಕಾರಿಗಳ ಕಪಾಟಿನಲ್ಲಿ ಭದ್ರವಾಗಿವೆ.
ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಕಾರ್ಯನಿರ್ವಹಿಸಬೇಕು ಎನ್ನುವ ಉದ್ದೇಶದಿಂದ ಸಿಬ್ಬಂದಿ ಹಾಜರಾತಿ ನಿರ್ವಹಣೆಗಾಗಿ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಯಂತ್ರಕ್ಕಾಗಿ ಸರ್ಕಾರ ಸಾವಿರಾರು ರೂ. ಖರ್ಚು ಮಾಡಿದೆ.
ಬಾಗೇವಾಡಿ, ಕುರುವಳ್ಳಿಯಲ್ಲಿ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಯಂತ್ರವನ್ನು ಅಳವಡಿಸಿದ್ದರೂ ಅವು ಯಾವುದೇ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಈ ಯಂತ್ರಕ್ಕೆ ಇಂಟರ್ನೆಟ್ ಸಂಪರ್ಕ ಕಲ್ಪಿಸಿಲ್ಲ. ಇದರಿಂದಾಗಿ ಈ ಯಂತ್ರ ಇಲ್ಲಿ ಯಾವುದೇ ರೀತಿಯಲ್ಲಿ ಕೆಲಸ ಮಾಡುತ್ತಿಲ್ಲವೆಂದು ಇಲ್ಲಿ ಕಾರ್ಯನಿರ್ವಹಿಸುವ ವೈದ್ಯರು ತಿಳಿಸಿದ್ದಾರೆ.
ಹಚ್ಚೊಳ್ಳಿ, ಕರೂರು, ತಾಳೂರು, ಸಿರಿಗೇರಿ, ರಾರಾವಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮತ್ತು ತೆಕ್ಕಲಕೋಟೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಯಂತ್ರ ಅಳವಡಿಸಿಲ್ಲ.
ಆದರೆ ಈ ಬಗ್ಗೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಪ್ರಶ್ನೆ ಮಾಡಿದರೆ ನಮಗೆ ಒಂದು ವರ್ಷದ ಹಿಂದೆ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಯಂತ್ರ ಅಳವಡಿಸುವಂತೆ ಅಂದಿನ ಜಿಲ್ಲಾ ಆರೋಗ್ಯಾಧಿಕಾರಿ ರಮೇಶ್ಬಾಬು ತಿಳಿಸಿದ್ದರಿಂದ ಈ ಬಯೋಮೆಟ್ರಿಕ್ ಯಂತ್ರ ಖರೀದಿಸಲಾಗಿತ್ತು.
ಫೇಸ್ ರೀಡಿಂಗ್ ಬಯೋಮೆಟ್ರಿಕ್ ಯಂತ್ರವನ್ನು ಪೂರೈಕೆ ಮಾಡಿದ್ದಾರೆ. ಆದರೆ ಈ ಯಂತ್ರವನ್ನು ಯಾವ ರೀತಿಯಲ್ಲಿ ಬಳಸಬೇಕು ಎನ್ನುವ ಬಗ್ಗೆ 2 ದಿನ ತರಬೇತಿ ನೀಡುವುದಾಗಿ ತಿಳಿಸಿದ್ದರು. ಆದರೆ ಇಲ್ಲಿಯವರೆಗೆ ಈ ಯಂತ್ರವನ್ನು ಯಾವ ರೀತಿ ಬಳಸಬೇಕೆನ್ನುವ ತರಬೇತಿಯನ್ನು ಫೇಸ್ ರೀಡಿಂಗ್ ಯಂತ್ರ ಪೂರೈಸಿದವರು ನೀಡಿಲ್ಲ. ಆದ್ದರಿಂದ ಸದ್ಯ ಫೇಸ್ ರೀಡಿಂಗ್ ಬಯೋಮೆಟ್ರಿಕ್ ಯಂತ್ರದ ಬಳಕೆ ಮಾಡುತ್ತಿಲ್ಲವೆಂದು ಎಲ್ಲಾ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಇಲಾಖೆಯ ವೈದ್ಯರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪ್ರಜ್ವಲ್ ಪ್ರಕರಣ ತನಿಖೆಯಲ್ಲಿದ್ದರೂ ಬಿಜೆಪಿಯಿಂದ ರಾಜಕೀಯ:ಸಚಿವ ಬಿ. ನಾಗೇಂದ್ರ
Lok Sabha Elections ಬಿಜೆಪಿ ಗೆಲ್ಲುವ 400 ಸ್ಥಾನಗಳಲ್ಲಿ ನಾನೂ ಒಬ್ಬ: ಶ್ರೀರಾಮುಲು
ಹುಚ್ಚು ರಾಜಕಾರಣಕ್ಕೆ ಸಿದ್ದು ದೊಡ್ಡ ಬೆಲೆ ತೆರಬೇಕಾದೀತು: ಡಿವಿಎಸ್
Bellary; ಸಿದ್ದರಾಮಯ್ಯ ಹುಚ್ಚು ರಾಜಕಾರಣಕ್ಕೆ ದೊಡ್ಡ ಬೆಲೆ ತೆರಬೇಕಾಗುತ್ತದೆ: ಸದಾನಂದ ಗೌಡ
Bellary; ದಲಿತಕೇರಿಯಲ್ಲಿ ಒಡಾಡಿ ಶ್ರೀರಾಮುಲು ಪರ ಮತಯಾಚನೆ ಮಾಡಿದ ಯದುವೀರ್ ಒಡೆಯರ್
MUST WATCH
ಹೊಸ ಸೇರ್ಪಡೆ
Fishing ಕಾಲಿಗೆ ಮೀನಿನ ಬಲೆ ಸಿಲುಕಿ ಸಮುದ್ರಕ್ಕೆ ಬಿದ್ದ ಮೀನುಗಾರ; ಆಸ್ಪತ್ರೆಗೆ ದಾಖಲು
ಧಾರವಾಡದ ಐಐಐಟಿ ನಿರ್ದೇಶಕರಾಗಿ ಪ್ರೊ.ಮಹಾದೇವ ಪ್ರಸನ್ನ ನೇಮಕ
Panaji; ಮೇ 11 ರಿಂದ ಗೋವಾದಲ್ಲಿ ಕೆಲವೆಡೆ ತುಂತುರು ಮಳೆ ಸಾಧ್ಯತೆ
ಶಿವಮೊಗ್ಗ: ಹಾಡಹಗಲೇ ನಡುರಸ್ತೆಯಲ್ಲಿ ಇಬ್ಬರು ರೌಡಿಶೀಟರ್ ಗಳ ಭೀಕರ ಹತ್ಯೆ, ಬಿಗುವಿನ ವಾತಾವರಣ
Sangeeth Sivan: ಮಾಲಿವುಡ್, ಬಾಲಿವುಡ್ನ ಖ್ಯಾತ ನಿರ್ದೇಶಕ ಸಂಗೀತ್ ಶಿವನ್ ನಿಧನ