ವಿವೇಕಾನಂದ ತತ್ವದಿಂದ ಭಾರತ ಸಮೃದ್ಧ
Team Udayavani, Jan 15, 2022, 1:18 PM IST
ಬೀದರ: ಸ್ವಾಮಿ ವಿವೇಕಾನಂದರ ತತ್ವಗಳ ಪಾಲನೆಯಿಂದ ಸಮೃದ್ಧ ಭಾರತ ಕಟ್ಟಲು ಸಾಧ್ಯವಿದೆ ಎಂದು ಜ್ಞಾನ ಸಂಗಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದೀಪಕ ಮನ್ನಳ್ಳಿ ಅಭಿಪ್ರಾಯಪಟ್ಟರು.
ತಾಲೂಕಿನ ಮನ್ನಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ವಿವೇಕಾನಂದ ಜಯಂತಿ ಹಾಗೂ ರಾಷ್ಟ್ರೀಯ ಯುವ ಸಪ್ತಾಹ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಯುವಕರು ಮನಸ್ಸು ಮಾಡಿದರೆ ಏನು ಮಾಡಬಹುದು ಎಂಬುದನ್ನು ಸ್ವಾಮಿ ವಿವೇಕಾನಂದರು ತೋರಿಸಿದ್ದರು ಎಂದು ತಿಳಿಸಿದರು.
ಮನ್ನಳ್ಳಿಯ ಜ್ಞಾನ ಜ್ಯೋತಿ ಭವನದ ಸಂಚಾಲಕಿ ಮೀನಾ ಬಹೆನ್ಜಿ ಮಾತನಾಡಿ, ವಿವೇಕಾನಂದರ ಬದುಕು ಯುವಕರಿಗೆ ದಾರಿ ದೀಪವಾಗಿದೆ ಎಂದರು. ಬೀದರ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಗುರುದೇವಿ ಬಹೆನ್ಜಿ ಮಾತನಾಡಿದರು.
ಪ್ರಾಚಾರ್ಯ ಪ್ರೊ| ವಿನಾಯಕ ಕೊತಮಿರ ಅಧ್ಯಕ್ಷತೆ ವಹಿಸಿದ್ದರು. ಎನ್ಎಸ್ ಎಸ್ ಅ ಧಿಕಾರಿ ಡಾ| ಹೇಮಾವತಿ ಪಾಟೀಲ, ಸೈಯದ್ ಮಕದುಮ್ ಅಹಮ್ಮದ್, ಸತ್ಯಶೀಲ, ಅಯೂಬ್ ಅಹಮ್ಮದ್, ಮಹಮ್ಮದ್ ಮುಸ್ತಫಾ ಇದ್ದರು. ಡಾ| ಸಂಜೀವಕುಮಾರ ತಾಂದಳೆ ಸ್ವಾಗತಿಸಿದರು. ಪ್ರೊ| ಮಹೇಶಕುಮಾರ ಆರ್. ನಿರೂಪಿಸಿದರು. ಊರ್ವಶಿ ಕೋಡ್ಲಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ