ಆಲಮಟ್ಟಿ ಎಂಟ್ರನ್ಸ್ ಪ್ಲಾಜಾಕ್ಕೆ “3ಡಿ’ ಮೆರುಗು
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೀಗೆ ಹಲವಾರು ಮಹನೀಯರ ಭಾವಚಿತ್ರಗಳು ಪ್ರದರ್ಶನಗೊಳ್ಳಲಿವೆ.
Team Udayavani, Aug 21, 2021, 5:49 PM IST
ಆಲಮಟ್ಟಿ: ಬರದ ನಾಡಿನ ಹಸಿರು ಕಾನನವಾಗಿ ಹಲವಾರು ವಿಶೇಷ ಉದ್ಯಾನಗಳಿಂದ ನಿತ್ಯ ಸಾವಿರಾರು ಪ್ರವಾಸಿಗರನ್ನು ಆಕರ್ಷಿಸುವ ಆಲಮಟ್ಟಿ ಪ್ರವಾಸಿ ತಾಣಕ್ಕೆ ಇನ್ನೊಂದು ಗರಿಯೆಂಬಂತೆ 3ಡಿ ಮ್ಯಾಪಿಂಗ್ ಸೇರ್ಪಡೆಗೊಂಡಿದೆ. ಪಟ್ಟಣದಲ್ಲಿ ರಾಕ್, ಗೋಪಾಲ ಕೃಷ್ಣ, ಚಿಲ್ಡ್ರನ್ ಪಾರ್ಕ್, ಸಿಲ್ವರ್ ಲೇಕ್, ಲವಕುಶ ಹಾಗೂ 77 ಎಕರೆ ಪ್ರದೇಶದಲ್ಲಿರುವ ಮೊಘಲ್, ಇಟಾಲಿಯನ್, ಫ್ರೆಂಚ್, ರೋಜ್ ಉದ್ಯಾನಗಳು ಮತ್ತು ನೂತನ ತಂತ್ರಜ್ಞಾನ ಹೊಂದಿರುವ ಸಂಗೀತ ನೃತ್ಯ ಕಾರಂಜಿ ಮತ್ತು ಲೇಷರ್ ಶೋಗಳ ಮತ್ತೂಂದು ಹೊಸ ಸೇರ್ಪಡೆಯಾಗಿ ದೇಶದಲ್ಲಿಯೇ ನಾಲ್ಕನೇ ಹಾಗೂ ರಾಜ್ಯದಲ್ಲಿ ಪ್ರಥಮವಾಗಿರುವ 3ಡಿ
ಮ್ಯಾಪಿಂಗ್ ಪ್ರದರ್ಶನ ಸೇರಿತು.
ಏನಿದು ತಂತ್ರಜ್ಞಾನ?: ಸಿನೇಮಾ ಥಿಯೇಟರಿನಲ್ಲಿ ಬಿಡುವಂತೆ ಇಲ್ಲಿಯೂ ಸ್ಕ್ರೀನ್ನಂತೆ ಬೃಹದ್ದಾಕಾರದ ಗೋಡೆ ಮೇಲೆ ಕಂಪ್ಯೂಟರ್ ನೆರವಿನಿಂದ ವಿಭಿನ್ನ ಬೆಳಕು ಸಂಯೋಜಿಸಿ ಛಾಯೆಗಳನ್ನು ಬಿಡಲಾಗುತ್ತಿದೆ.
ಎಲ್ಲಿದೆ?: 77ಎಕರೆ ಪ್ರದೇಶಕ್ಕೆ ಪ್ರವೇಶ ದ್ವಾರವಾಗಿರುವ ಎಂಟ್ರನ್ಸ್ ಪ್ಲಾಜಾವನ್ನು ಪ್ರವೇಶಿಸಿದರೆ ಸಾಕು ಎದುರಿಗೆ ಸಿಗುವುದೇ ಸುಂದರವಾದ ಜಲ ದೇವತೆಯ ಮೂರ್ತಿ. ಅದರ ಕೆಳ ಭಾಗದಲ್ಲಿ ಕಂಪ್ಯೂಟರಗಳೂ ಸೇರಿದಂತೆ 3ಡಿ ತಂತ್ರಜ್ಞಾನಕ್ಕೆ ಬಳಕೆಯಾಗುವ ಸಲಕರಣೆಗಳಿಗೆ ಹಾನಿಯಾಗದಂತೆ ವಿಶೇಷವಾಗಿ ರಚಿಸಿರುವ ಕಟ್ಟಡದಿಂದ ಜಲ ದೇವತೆಯ ಪಾದದಡಿಯಲ್ಲಿರುವ ಸಣ್ಣ ಸಣ್ಣ ಕಿಟಕಿಗಳ ಮೂಲಕ ಕಿರಣಗಳನ್ನು ಹರಿಸಲಾಗುತ್ತದೆ. ಸಂಗೀತ ನೃತ್ಯ ಕಾರಂಜಿ ಹಾಗೂ ಲೇಸರ್ ಶೋಗಳನ್ನು ವೀಕ್ಷಿಸಿ ಹೊರ ಬರುವ ವೇಳೆಯಲ್ಲಿ ಎಂಟ್ರನ್ಸ್ ಪ್ಲಾಜಾದ ಗೋಡೆಗಳ ಮೇಲೆ 3ಡಿ ತಂತ್ರಜ್ಞಾನ ದೃಶ್ಯಗಳ ಪ್ರದರ್ಶನವಾಗಲಿವೆ.
ಏನೇನಿವೆ?: ಈಗ ಪ್ರಾಯೋಗಿಕವಾಗಿ ಪ್ರದರ್ಶಿಸಲ್ಪಡುತ್ತಿರುವ 3ಡಿ ಮ್ಯಾಪಿಂಗ್ನಲ್ಲಿ ಆನೆ, ಸಿಂಹ, ಹುಲಿ, ಅರಣ್ಯಕ್ಕೆ ಬೆಂಕಿ ಬಿದ್ದಾಗ ವನ್ಯ ಜೀವಿಗಳ ಚಲನೆ, ಪರೋಕ್ಷವಾಗಿ ಪರಿಸರ ರಕ್ಷಣೆಯ ಮಹತ್ವ, ಸ್ವಾತಂತ್ರ್ಯ ಹೋರಾಟಗಾರರು, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ , ನೇತಾಜಿ ಸುಭಾಷ್ಚಂದ್ರ ಭೋಸ್, ಸರ್ದಾರ ವಲ್ಲಭಭಾಯಿ ಪಟೇಲ್, ಲಾಲ ಬಹಾದ್ದೂರ್ ಶಾಸ್ತ್ರಿ, ಕಿತ್ತೂರು ರಾಣಿ ಚನ್ನಮ್ಮ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೀಗೆ ಹಲವಾರು ಮಹನೀಯರ ಭಾವಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಲೋಕಾರ್ಪಣೆ: ಆ.21ರಂದು ಸಿಎಂ ಬಸವರಾಜ ಬೊಮ್ಮಾಯಿ ಕೃಷ್ಣೆಯ ಜಲನಿಧಿಗೆ ಗಂಗಾ ಪೂಜೆ ಹಾಗೂ ಬಾಗಿನ ಅರ್ಪಿಸಲು ಆಗಮಿಸುತ್ತಿದ್ದು, ಅದೇ ದಿನದಂದು ಸಿಎಂ ಲೋಕಾರ್ಪಣೆ ಮಾಡಲಿದ್ದಾರೆಂದು ಕೆಬಿಜೆನ್ನೆಲ್ ಮೂಲಗಳು ತಿಳಿಸಿವೆ.
ಕೃ.ಮೇ.ಯೋಜನೆ ಭಾಗವಾಗಿರುವ ಕೃಷ್ಣಾ ಭಾಗ್ಯ ಜಲ ನಿಗಮದ ವತಿಯಿಂದ ನಿರ್ಮಿಸಲಾಗಿರುವ 3ಡಿ ಮ್ಯಾಪಿಂಗ್ ಪ್ರೊಜೆಕ್ಟರ್ ಯೋಜನೆಗೆ ಸುಮಾರು
2.48 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಇದನ್ನು ಬೆಂಗಳೂರಿನ ವೇಧಾ ಇಲೇಕ್ಟ್ರಿಕಲ್ನವರು ನಿರ್ವಹಿಸುತ್ತಿದೆ. ಇದನ್ನು ಎರಡು ವರ್ಷಗಳ ಕಾಲ
ಅದೇ ಕಂಪನಿ ಅದೇ ಮೊತ್ತದಲ್ಲಿ ನಿರ್ವಹಿಸಲಿದೆ.
ಈಗಾಗಲೇ ಆಲಮಟ್ಟಿಯ ಬೃಹತ್ ಜಲಾಶಯ, ವಿವಿಧ ಉದ್ಯಾನಗಳನ್ನು ವೀಕ್ಷಿಸಲು ಒಂದು ದಿನ ಸಾಕಾಗುವುದಿಲ್ಲ. ನೂತನ ತಂತ್ರಜ್ಞಾನಗಳನ್ನು ಬಳಸಿ ಕೊಂಡು ಇಂಥ ಯೋಜನೆ ಹಾಕಿಕೊಳ್ಳುವುದರಿಂದ ಇನ್ನಷ್ಟು ಪ್ರವಾಸಿಗರನ್ನು ಸೆಳೆಯಬಹುದಾಗಿದೆ.
ಮಲ್ಲು ರಾಠೊಡ, ತಾಪಂ ಮಾಜಿ ಸದಸ್ಯ
ಬಿಜೆಎನ್ನೆಲ್ ವತಿಯಿಂದ ಪ್ರವಾಸಿಗರ ಗಮನ ಸೆಳೆಯಲು ಸಾಕಷ್ಟು ಪ್ರಮಾಣದಲ್ಲಿ ಯೋಜನೆ ಹಾಕಿಕೊಂಡು ಅನುಷ್ಠಾನ ಮಾಡುತ್ತಿರುವುದರಿಂದ
ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಕುಟುಂಬಗಳಿಗೆ ಆಶ್ರಯದಾತವಾಗಿದೆ.
ದೇವೇಂದ್ರ ಹಿರೇಮನಿ, ವ್ಯಾಪಾರಿ
*ಶಂಕರ ಜಲ್ಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Indi; ಕುಡಿಯುವ ನೀರಿಗಾಗಿ ಒತ್ತಾಯ; ಮೊಬೈಲ್ ಟವರ್ ಹತ್ತಿದ ಯುವಕ
ಪೊಲೀಸರ ಭರ್ಜರಿ ಕಾರ್ಯಾಚರಣೆ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 2.93 ಕೋಟಿ ಜಪ್ತಿ
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
KPTCL ಕಂಪೌಂಡ್ ಗೋಡೆ ಮೈಮೇಲೆ ಬಿದ್ದು ಕಾರ್ಮಿಕ ಸಾವು
BJP;ಯತ್ನಾಳ್ ಸೇರಿ ಯಾರೇ ಆಗಿದ್ದರೂ ಶಿಸ್ತು ಕ್ರಮ ಕೈಗೊಳ್ಳಬೇಕು: ಶಂಕರಗೌಡ
MUST WATCH
ಹೊಸ ಸೇರ್ಪಡೆ
Panaji; ಹೊಸ ದಾಖಲೆ ನಿರ್ಮಿಸಿದ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್
ರಾಷ್ಟ್ರೀಯ ನಾಟ್ಯೋತ್ಸವ; ದೇಶವೇ ಕೆರೆಮನೆಯತ್ತ ನೋಡುವಂತಾಗಿದ್ದು ಸಾಧನೆ
Thirthahalli ಅಂಗನವಾಡಿ ಮಿಲೆಟ್ ಲಡ್ಡು ಮಿಶ್ರಣದಲ್ಲಿ ಹುಳು ಪ್ರತ್ಯಕ್ಷ !
CCTV: ಬೆಳಗಾವಿಯಲ್ಲಿ ಹುಲಿ ಓಡಾಟದ ವಿಡಿಯೋ ವೈರಲ್… ಸುಳ್ಳು ಸುದ್ದಿ ಎಂದ ಅರಣ್ಯ ಇಲಾಖೆ
ಬ್ಯಾಡಗಿ: ಮೆಣಸಿನಕಾಯಿ ವಹಿವಾಟು ಸುಗಮ; ಪೊಲೀಸ್ ಭದ್ರತೆ