ಉರಿಯುವ ಬೆಂಕಿಗೆ ತುಪ್ಪ; ‘ಸುಸಂಸ್ಕೃತರು’ BJP ಸರ್ಕಾರದಲ್ಲಿರ್ಬೇಕು!
Team Udayavani, May 3, 2017, 12:40 PM IST
ದಾವಣಗೆರೆ : ರಾಜ್ಯ ಬಿಜೆಪಿಯಲ್ಲಿ ಗೊಂದಲಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ಕೆ.ಎಸ್.ಈಶ್ವರಪ್ಪ ಅವರು ಬುಧವಾರ ‘ಸುಸಂಸ್ಕೃತರ ಬಿಜೆಪಿ ಸರ್ಕಾರ ಬರಬೇಕೆನ್ನುವುದು ನಮ್ಮ ಉದ್ದೇಶ’ ಎಂದು ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಬಿಜೆಪಿಯಲ್ಲಿ ಗೊಂದಲಗಳಿರುವುದು ನಿಜ. ಯಾಕೆ ಇದೆ ಎನ್ನುವುದನ್ನು ನಾನು ಹೇಳುತ್ತೇನೆ ಮುಂದಿನ ಬಾರಿ ಸರ್ಕಾರ ಬರುವುದು ಭಾರತೀಯ ಜನತಾ ಪಕ್ಷದ್ದೇ. ನಮ್ಮ ಪಕ್ಷದ ಸಿದ್ಧಾಂತ, ವಿಚಾರ ಅರ್ಥ ಮಾಡಿಕೊಂಡವರಿಗೆ ಟಿಕೆಟ್ ಸಿಗಬೇಕು. ಅವರು ಎಂಎಲ್ಎ ಆಗಬೇಕು,ಸಚಿವರಾಗಬೇಕು, ಅದು ಸುಸಂಸ್ಕೃತರ ಸರ್ಕಾರವಾಗಬೇಕು ಎನ್ನುವುದಕ್ಕಾಗಿ ನಮ್ಮ ಹೋರಾಟ’ ಎಂದರು.
‘ಕಳೆದ ಬಾರಿ ಬಿಜೆ ಸರ್ಕಾರ ಬಂದಿತ್ತು ಆದರೆ ರೆಸಾರ್ಟ್ ರಾಜಕೀಯ ಸೇರಿದಂತೆ ಕೆಲ ವಿಚಾರಗಳಿಂದಾಗಿ ಯಾರೂ ಮಾಡದಿದ್ದಂತಹ ಅಭಿವೃದ್ದಿ ಕಾರ್ಯ ಮಾಡಿದ ಹೊರತಾಗಿಯೂ ಒಳ್ಳೆಯ ಸರ್ಕಾರ ಎಂಬ ಹೆಸರು ಗಳಿಸಲಿಲ್ಲ. ಹೀಗಾಗಿ ಈ ಬಾರಿ ಸರಿಯಾದ ಸಂಘಟಿತ ವ್ಯಕ್ತಿಗಳ ಸರ್ಕಾರ ಬರಬೇಕು ಎನ್ನುವುದು ನಮ್ಮ ಉದ್ದೇಶ’ ಎಂದಿದ್ದಾರೆ.
ನಿನ್ನೆಯಷ್ಟೆ ಈಶ್ವರಪ್ಪ ಅವರು ಮುಂದಿನ ಸರ್ಕಾರ ಬಿಜೆಪಿಯದ್ದು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗುವುದು ಖಚಿತ ಎಂದಿದ್ದರು.
ಇದೀಗ ಪಕ್ಷದಲ್ಲಿ ಯಾರು ಸುಸಂಸ್ಕೃತರು ಎನ್ನುವ ಪ್ರಶ್ನೆ ಮೂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
3 ದಿನ ರೇವಣ್ಣ ಭೇಟಿಗಿಲ್ಲ ಅವಕಾಶ; ಮಾಜಿ ಸಚಿವರಿಗೆ ಈಗ ಬೆನ್ನು ನೋವು
ಪತ್ರಕರ್ತರ ಜತೆ ದೇವರಾಜೇಗೌಡ ಮಾತನಾಡಿದ ಆಡಿಯೋ ಬಹಿರಂಗ
ನೀತಿ ಸಂಹಿತೆ ಸಡಿಲಿಕೆ: ಆಯೋಗಕ್ಕೆ ಪತ್ರ ಬರೆದು ರಾಜ್ಯ ಸರಕಾರ ಮನವಿ
Siddaramaiah ಚುನಾವಣ ಪ್ರಚಾರ: 14 ಲಕ್ಷ ಜನರನ್ನು ಉದ್ದೇಶಿಸಿ ಸಿಎಂ ಮಾತು
D.K. Shivakumar ಲೋಕದ ಡೊಂಕು ನೀವೇಕೆ ತಿದ್ದುವಿರಿ, ನಿಮ್ಮ ಮನೆಯನ್ನು ಸರಿ ಮಾಡಿಕೊಳ್ಳಿ