ಮೈದುಂಬಿ ನಳನಳಿಸುತ್ತಿದೆ ವಿಜಯಪುರ ಸೈನಿಕ್ ಸ್ಕೂಲ್ ಕೆರೆ
Team Udayavani, Nov 24, 2018, 12:04 PM IST
ವಿಜಯಪುರ: ಕೆರೆ ತುಂಬಿಸುವ ಯೋಜನೆ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿರುವ ವಿಜಯಪುರ ಜಿಲ್ಲೆ ಇದೀಗ ರಕ್ಷಣಾ ಇಲಾಖೆ ವ್ಯಾಪ್ತಿಯ ನಗರದ ಸೈನಿಕ್ ಸ್ಕೂಲ್ನಲ್ಲಿ ನೂತನವಾಗಿ ಕೆರೆಯನ್ನು ನಿರ್ಮಿಸಿದ್ದು ಆ ಕೆರೆಗೆ ಕೃಷ್ಣಾ ನದಿ ನೀರು ತುಂಬಿಸುತ್ತಿರುವ ಮೂಲಕ ಮತ್ತೂಮ್ಮೆ ನಾಡಿನ ಗಮನ ಸೆಳೆದಿದೆ.
ವಿಜಯಪುರದಲ್ಲಿ 1963ರಲ್ಲಿ ಅಥಣಿ ರಸ್ತೆಯಲ್ಲಿ 406 ಎಕರೆ ವಿಸ್ತೀರ್ಣದ ಸೈನಿಕ್ ಶಾಲೆ ಆವರಣ ಮಡ್ಡಿ ಭೂಮಿಯ ಒಣಪ್ರದೇಶ. ಇಲ್ಲಿ ನೀರಿನ ಸೌಲಭ್ಯ ಕಡಿಮೆ. ಹೀಗಾಗಿ ಸೇವೆ ಸಲ್ಲಿಸಿರುವ ಎಲ್ಲ ಪ್ರಾಚಾರ್ಯರು ಸೈನಿಕ್ ಸ್ಕೂಲ್ ಪ್ರದೇಶವನ್ನು ಹಸರೀಕರಣ ಮಾಡಲು ಅಪಾರ ಶ್ರಮ ವಹಿಸಿ 15 ಸಾವಿರ ಗಿಡಗಳನ್ನು ಇಲ್ಲಿ ಪೋಷಿಸಿಕೊಂಡು ಬರಲಾಗಿದೆ.
ಪ್ರಾಚಾರ್ಯ ತಮೊಜಿತ ಬಿಸ್ಪಾಸ್ ಕೊರಿಕೆ ಮೇರೆಗೆ 2016ರಲ್ಲಿ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲರು ಇಲ್ಲಿನ ಹೂಳು ತುಂಬಿ ಮುಚ್ಚಿ ಹೋಗಿದ್ದ ಆದಿಲ್ಶಾಹಿ ಕಾಲದ 6 ಬಾವಡಿಗಳನ್ನು ಪುನರುಜ್ಜೀವನಗೊಳಿಸಿದ್ದು, ಈಗ ಈ ಬಾವಿಗಳು ಮರಭೂಮಿಯಲ್ಲಿ ಓಯಾಸಿಸ್ ಎಂಬಂತೆ ಸೈನಿಕ್ ಸ್ಕೂಲ್ನ ಮಡ್ಡಿ ಪ್ರದೇಶದಲ್ಲಿ ಜೀವ ಸೆಲೆಯಾಗಿದೆ. ಅದರಿಂದ ಪ್ರೇರಣೆಗೊಂಡ ಸಿಬ್ಬಂದಿ ಟಕ್ಕೆ ಪ್ರದೇಶಕ್ಕೆ ಹೊಂದಿಕೊಂಡ ತಮ್ಮ ಆವರಣದಲ್ಲಿ ಸಣ್ಣ ಕೆರೆ ನಿರ್ಮಿಸಲು ನಿವೇಶನ ಸೂಕ್ತವಾಗಿದ್ದು, ತಾವೇ ಮುತುವರ್ಜಿ ವಹಿಸಿ, ಅನುದಾನ ನೀಡಿ ಕೆರೆ ನಿರ್ಮಿಸಬೇಕು ಎಂದರು.
ಅವರ ಮನವಿಯನ್ನು ಗಂಭೀರವಾಗಿ ಪರಿಗಣಿಸಿದ ಅಂದಿನ ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಮಹಾನಗರ ಪಾಲಿಕೆಯಿಂದ 30 ಲಕ್ಷ ರೂ. ಅನುದಾನ ಒದಗಿಸಿ 2 ಎಕರೆ ಪ್ರದೇಶದಲ್ಲಿ ಕೆರೆ ನಿರ್ಮಿಸಿದ್ದಲ್ಲದೆ, ತಾವಾಗಿಯೇ ಒಂದು ಹೆಜ್ಜೆ ಮುಂದೆ ಹೋಗಿ ಸೈನಿಕ್ ಸ್ಕೂಲ್ ಬದಿಯ ರಿಂಗ್ರೋಡ್ಗೆ ಹೊಂದಿಕೊಂಡಂತೆ ಐತಿಹಾಸಿಕ ಬೇಗಂ ತಲಾಬ್, ಭೂತನಾಳ ಕೆರೆಗಳನ್ನು ಕೃಷ್ಣಾ ನದಿಯಿಂದ ತುಂಬಿಸುವ ಪೈಪ್ಲೈನ್ನಿಂದ ಸೈನಿಕ್ ಸ್ಕೂಲ್ ನೂತನ ಕೆರೆಗೂ ಜೋಡಣೆ ಮಾಡಿದರ ಪರಿಣಾಮ ಇಂದಿನಿಂದ ಇಲ್ಲಿನ ಕೆರೆ ತುಂಬುತ್ತಿದೆ.
ಸೈನಿಕ್ ಸ್ಕೂಲ್ ಪ್ರದೇಶ ರಕ್ಷಣಾ ಇಲಾಖೆ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಇದು ಸಂರಕ್ಷಿತ ಪ್ರದೇಶವಾಗಿದೆ. ಇಲ್ಲಿ ಪಾದಚಾರಿಗಳ, ವಾಹನಗಳ ಹಾವಳಿ ಇಲ್ಲದೆ ಇರುವುದರಿಂದ ಇಲ್ಲಿ ಹೇರಳವಾಗಿ ನವಿಲು, ಕೊಕ್ಕರೆ, ಪಕ್ಷಿ ಸಂಕುಲಗಳ ಸಂಖ್ಯೆ ಹೆಚ್ಚು. ಈ ಕೆರೆ ತುಂಬುವುದರಿಂದ ಕೇವಲ ಸೈನಿಕ್ ಸ್ಕೂಲ್ ಆವರಣವಲ್ಲದೇ ಸುತ್ತಿಲಿನ ಖಾಜಾಅಮೀನ್ ದರ್ಗಾ, ಟಕ್ಕೆ, ಟ್ರೇಜರಿ ಕಾಲೋನಿಗಳಲ್ಲಿ ಬೋರ್ವೆಲ್ಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗುವದು. ಸ್ಕೂಲ್ ವ್ಯಾಪ್ತಿಯಲ್ಲಿರುವ 50 ಎಕರೆ ಪ್ರದೇಶದಲ್ಲಿರುವ ತೋಟಕ್ಕೆ ವಿಫುಲವಾಗಿ ನೀರು ದೊರೆಯುವುದಲ್ಲದೆ, ಇಡಿ ಪ್ರದೇಶ ಹಸಿರಿನಿಂದ ಕಂಗೊಳಿಸಲು ಸಹಕಾರಿಯಾಗಲಿದೆ ಎಂದು ಆಡಳಿತಾಧಿಕಾರಿ ಮುರಳಿಧರನ್ ತಿಳಿಸಿದ್ದಾರೆ.
ಈ ಕುರಿತು ಹರ್ಷ ವ್ಯಕ್ತಪಡಿಸಿರುವ ಮಾಜಿ ಜಲ ಸಂಪನ್ಮೂಲ ಸಚಿವ, ಶಾಸಕ ಎಂ.ಬಿ. ಪಾಟೀಲ ಸೈನಿಕ್ ಸ್ಕೂಲ್ ಅಧಿಕಾರಿಗಳ ಕೋರಿಕೆ ಮೇರೆಗೆ ಈ ಹಿಂದೆ ಆದಿಲ್ಶಾಹಿ ಕಾಲದ ಇಲ್ಲಿನ 6 ಬಾವಡಿಗಳನ್ನು ಹೂಳು ತೆಗೆದು, ಸುತ್ತಲೂ ಫಿನಿಶಿಂಗ್ ಅಳವಡಿಸಲಾಗಿತ್ತು.
ನಂತರ ನಾನೇ ಮಹಾನಗರ ಪಾಲಿಕೆ ಅನುದಾನ ಒದಗಿಸಿ, ಕೆರೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೆ. ಅಲ್ಲದೆ ಆ ಕೆರೆಗೆ ಭೂತನಾಳ ಕೆರೆ ತುಂಬಿಸುವ ಪೈಪ್ಲೈನ್ಗೆ ಜೊಡಣೆ ಮಾಡಿ ತುಂಬಲು ಯೋಜನೆ ಮಾಡಿದ್ದು, ಇಂದು ಕಾರ್ಯರೂಪಕ್ಕೆ ಬಂದಿದೆ. ಇದರಿಂದ ಸೈನಿಕ್ ಸ್ಕೂಲ್ ಆವರಣ ವಿಶೇಷ ಕಳೆ ಹೊಂದಲಿದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್