ರೋಗಿಗಳಿಗೆ ನೀಡುವ ಹಾಲು ಮತ್ತು ಬ್ರೆಡ್ ಕದ್ದ ಗುತ್ತಿಗೆದಾರ!
Team Udayavani, Oct 15, 2021, 3:54 PM IST
ಚಿಂತಾಮಣಿ : ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳು ಬೇಗ ಗುಣಮುಖರಾಗಲೆಂದು ಆಹಾರ, ಹಾಲು, ಬ್ರೆಡ್ ಮತ್ತು ಮೊಟ್ಟೆ ನೀಡುತ್ತಿದ್ದರೆ ಗುತ್ತಿಗೆದಾರರು ಸರ್ಕಾರ ನಿಗಧಿ ಮಾಡಿರುವುದರಲ್ಲಿ ಕಡಿತಮಾಡಿ ರೋಗಿಗಳ ಊಟ ಕದಿಯುತ್ತಿರುವುದು ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.
ಹೌದು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ನೀಡುವ ಊಟದಲ್ಲಿ ಕಡಿತ ಮಾಡಿ ಗುತ್ತಿಗೆದಾರರು ಅನುದಾನವನ್ನು ನುಂಗ್ಗಿ ನೀರು ಕುಡಿಯುತ್ತಿರುವುದು ಬಯಲಾಗಿದೆ.
ಪ್ರತಿ ದಿನ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಬೆಳಿಗ್ಗೆ ಅರ್ಧ ಲೀಟರ್ ನಂದಿನಿ ಹಾಲು, 300 ಗ್ರಾಂ ಬ್ರೆಡ್ ಕೊಡಬೇಕು ಆದರೆ ರೋಗಿಗಳ ಕಣ್ಣು ತಪ್ಪಿಸಿದ ಗುತ್ತಿಗೆದಾರರು 100 ರಿಂದ 200 ಎಂ.ಎಲ್ ಆಹಾ ಹಾಲು, 150 ರಿಂದ 230 ಗ್ರಾಂ ಬ್ರೆಡ್ ಮಾತ್ರ ವಿತರಣೆ ಮಾಡುತ್ತಿರುವುದು ಬಯಲಾಗಿದೆ.
ಸರ್ಕಾರ ನಂದಿನಿ ಹಾಲು ನಿಗದಿ ಮಾಡಿದ್ದರೆ ಗುತ್ತಿಗೆದಾರ ಆಹಾ ಕ್ರೀಮ್ ಮಿಲ್ಕ್ ಎಂಬ ಹಾಲು ವಿತರಣೆ ಮಾಡುತ್ತಿದ್ದಾರೆ.
ಅಷ್ಟೇ ಅಲ್ಲದೆ ಮದ್ಯಾಹ್ನ ಮತ್ತು ರಾತ್ರಿ ನೀಡುವ ಅನ್ನ ಸಾಂಬಾರ್ ಕೂಡ ಗುಣಮಟ್ಟವಿಲ್ಲವೆಂದು ಮೊಟ್ಟೆಯಲ್ಲಿ ನೀರು ಸೋರುವುದು, ಬರಿ ಸೊಪ್ಪು ಸಾರು ಹಾಗೂ ಒಂದೆರಡು ತರಕಾರಿಗಳಿರುವ ಸಾಂಬರ್ ಮಾತ್ರ ನೀಡುತ್ತಿದ್ದಾರೆ, ಅಷ್ಟೆ ಅಲ್ಲದೆ ಕೊಳೆತ ಬದನೆಕಾಯಿ, ಸೋರೆಕಾಯಿಗಳನ್ನು ಹಾಕಿ ಸಾಂಬರ್ ಮಾಡುತ್ತಾರೆ, ಅರ್ದಂ ಬರ್ದ ಬೆಂದ ಅನ್ನ ನೀಡುತ್ತಾರೆಂದು ರೋಗಿಗಳು ಮತ್ತು ಸಂಬಂಧಿಕರು ವರದಿಕಾಗಾರರ ಬಳಿ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ:ದಿನದಲ್ಲಿ ಎರಡು ಬಾರಿ ಮಾಯವಾಗುವ ಶಿವಾಲಯ! ಏನಿದರ ವಿಶೇಷತೆ?
ಇನ್ನು ಆಸ್ಪತ್ರೆಯಲ್ಲಿ ಇಷ್ಟೇಲ್ಲಾ ನಡೆಯುತ್ತಿದ್ದರೂ ಅದಕ್ಕೂ ನಮಗೂ ಏನು ಸಂಬಂಧವಿಲ್ಲವೆಂದು ಆಸ್ಪತ್ರೆಯ ಆಡಳಿತ ಆಧಿಕಾರಿಗಳು, ವೈದ್ಯರು ಹಾಗೂ ಸಿಬ್ಬಂದಿಗಳು ಕಣ್ಣು ಮುಚ್ಚಿ ಕುಳಿತಿರುವುದನ್ನು ನೋಡಿದರೆ ಅಧಿಕಾರಿಗಳು ಗುತ್ತಿಗೆದಾರ ಜೊತೆ ಸೇರಿ ರೋಗಿಗಳಿಗೆ ನೀಡುವ ಆಹಾರದಲ್ಲಿ ಲೂಟಿ ಮಾಡುತ್ತಿರುವುದು ಮೆಲ್ನೊಟಕ್ಕೆ ತಿಳಿಯುವಂತಾಗಿದೆ.
ಮಾನವಿಯತೆಯೇ ಇಲ್ಲವೆ : ಇನ್ನು ಸರ್ಕಾರಿ ಆಸ್ಪತ್ರೆಗೆ ಬರುವರೆಲ್ಲಾ ಬಹುತೇಕರು ಬಡವರು ಗ್ರಾಮೀಣ ಭಾಗದ ಜನರೇ ಆಗಿರುತ್ತಾರೆ ಅದರಲ್ಲೂ ಅಪೌಷ್ಟಿಕತೆಯಿಂದ ಕೂಡಿದವರೆ ಆಗಿರುತ್ತಾರೆ ಇಂತಹ ರೋಗಿಗಳಿಗೆ ಮತ್ತು ಬಾಣಂತಿಯರಿಗೆ ಗುಣಮಟ್ಟದ ಆಹಾರ ನೀಡಿ ರೋಗಿಗಳಿಗೆ ಪೌಷ್ಠಿಕಾಂಶಗಳನ್ನು ವೃದ್ದಿಸಬೇಕಾದ ವೈದ್ಯರು ಮತ್ತು ಗುತ್ತಿಗೆದಾರರು ಮಾನವಿಯತೆ ಇಲ್ಲದೆ ಬಡ ರೋಗಿಗಳಿಗೆ ನೀಡುವ ಆಹಾರದಲ್ಲಿ ಲೂಟಿಮಾಡುತ್ತಿರುವುದು ರೋಗಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಸಚಿವರ ಕ್ಷೇತ್ರದಲ್ಲೆ ಲೂಟಿ : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಚಿವರಾದ ಡಾ” ಕೆ.ಸುಧಾಕರ ತವರಿನ ಚಿಂತಾಮಣಿ ಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಈ ರೀತಿ ರೋಗಿಗಳ ಆಹಾರ ಕಿತ್ತು ತಿನ್ನುತಿರುವುದು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯ ದೋರಣೆಗೆ ಸಾಕ್ಷಿಯಾಗಿದೆ.
ಅದು ಅಲ್ಲದೆ ಪ್ರತಿದಿನ ಚಿಂತಾಮಣಿ ಯ ನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು 40 ರಿಂದ 50 ಜನ ನೊಂದಣಿಯಾಗಿರುತ್ತಾರೆ.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರು ಸುಮಾರು 25 ರಿಂದ 30 ಜನ ನೊಂದಣಿಯಾಗಿದ್ದರೆ ಜನರಲ್ ವಾರ್ಡನಲ್ಲಿ 10 ರಿಂದ 15 ಜನ ನೊಂದಣಿ ಯಾಗಿರುತ್ತಾರೆ ಇಷ್ಟೇಲ್ಲಾ ರೋಗಿಗಳಿಗೆ ನೀಡಬೇಕಾದ ಆಹಾರದಲ್ಲಿ ಕಡಿತಮಾಡುವ ಗುತ್ತಿಗೆದಾರರು ಅಧಿಕಾರಿಗಳೊಂದಿಗೆ ಸೇರಿಕೊಂಡು ರೋಗಿಗಳ ಸಂಖ್ಯೆಯಲ್ಲಿ ಏರುಪೇರು ಮಾಡಿ ಅನುದಾನವನ್ನು ಲಪಟಾಯಿಸುತ್ತಿದ್ದಾರೆ.
ಇನ್ನು ಕ್ಯಾಂಟೀನ್ ಗುತ್ತಿಗೆದಾರರ ಸತ್ಯನಾರಾಯಣ ಚಾರಿ ಎಂಬುವರನ್ನು ಈ ಕುರಿತು ಕೇಳಿದಾಗ ಚಿಂತಾಮಣಿ ಆಸ್ಪತ್ರೆಯ ಕ್ಯಾಂಟಿನ್ ಜವಾಬ್ದಾರಿಯನ್ನು ವಿಜಯ್ ಕುಮಾರ್ ಎಂಬುವರಿಗೆ ವಹಿಸಿದ್ದೇನೆ ಅಲ್ಲಿನ ಅವ್ಯವಹಾರದ ಬಗ್ಗೆ ತಿಳಿದು ಬಂದಿಲ್ಲ ಕೂಡಲೇ ಬೇಟಿ ನೀಡಿ ಪರಿಶೀಲನೆಮಾಡುವುದಾಗಿ ತಿಳಿಸುತ್ತಾರೆ.
ರೋಗಿಗಳಿಗೆ ನೀಡುವ ಆಹಾರದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರು ಅಧಿಕಾರಿಗಳು ಕುರುಡ ಜಾಣರಂತೆ ವರ್ತಿಸುತ್ತಿರುವುದು ಖೇದಕರ ಸಂಗತಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ