ಕೋವಿಡ್ ಅವಧಿಯಲ್ಲಿ ಬಾಲ್ಯ ವಿವಾಹ ಹೆಚ್ಚಳ
Team Udayavani, Jun 4, 2021, 5:39 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕುಹೆಚ್ಚಿದ್ದಂತೆ ಬಾಲ್ಯ ವಿವಾಹಕ್ಕೆ ಸಂಬಂಧಿಸಿದದೂರುಗಳು ಸಾಕಷ್ಟು ಕೇಳಿ ಬರುತ್ತಿವೆ. ಕದ್ದು ಮುಚ್ಚಿ20 ಬಾಲ್ಯ ವಿವಾಹ ನಡೆಸಲು ಪ್ರಯತ್ನಿಸಲಾಗಿದೆ ಎಂಬ ದೂರು ಕೇಳಿಬಂದಿದ್ದು, ಅದರಲ್ಲಿ ಬಾಲಕಿಯೊಬ್ಬರ ವಿವಾಹ ನಡೆದು ಹೋಗಿದೆ.
ಜಿಲ್ಲೆಯ ಆಂಧ್ರ ಗಡಿಗೆ ಹೊಂದಿಕೊಂಡಬಾಗೇಪಲ್ಲಿ, ಗೌರಿಬಿದನೂರು ತಾಲೂಕಿನಲ್ಲಿ ಬಾಲ್ಯವಿವಾಹ ದೂರು ಕೇಳಿಬಂದಿದೆ. ಗುಡಿಬಂಡೆತಾಲೂಕಿನಲ್ಲಿ ಬಾಲಕಿಯ ವಿವಾಹ ನಡೆಸಲಾಗಿದ್ದು,ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣಇಲಾಖೆ ಹಾಗೂ ಮಕ್ಕಳ ರಕ್ಷಣಾ ಘಟಕದ ಮೂಲಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಾಲಾ-ಕಾಲೇಜು ಇಲ್ಲದೆ ಅನುಕೂಲ: ಶಾಲಾಕಾಲೇಜುಗಳಿದ್ದರೇ ವಿದ್ಯಾರ್ಥಿನಿಯರು ವ್ಯಾಸಂಗಕ್ಕೆತೆರಳುತ್ತಿದ್ದರು. ಆದರೆ, ಈಗ ಕೊರೊನಾ ಲಾಕ್ಡೌನ್ನಿಂದ ಹೊರಗಡೆಹೋಗುವಂತಿಲ್ಲ. ಇಂತಹ ಸಮಯದಲ್ಲಿ ಕುಟುಂಬದ ಹಿರಿಯರ ಒತ್ತಡ, ಮದುವೆ ಖರ್ಚು ಉಳಿಯುತ್ತದೆ ಎಂಬ ಆಸೆಗೆ ಬಿದ್ದು ಪೋಷಕರು, ವಯಸ್ಸು ನೋಡದೆ ವಿವಾಹ ಮಾಡುತ್ತಿದ್ದಾರೆ.
ಇದುಕಾನೂನು ರೀತಿ ಶಿಕ್ಷಾರ್ಹಅಪರಾಧ ಎಂದು ಗೊತ್ತಿದ್ದರೂ ಬಾಲ್ಯ ವಿವಾಹ ನಡೆಸಲುಮುಂದಾಗಿರುವುದು ವಿಪರ್ಯಾಸ.ಬಾಲ್ಯವಿವಾಹನಡೆಯುವುದುಅಥವಾ ಬಾಲ್ಯ ವಿವಾಹನಡೆಸಲು ತಯಾರಿ ಮಾಡಿಕೊಳ್ಳುವುದು ಗೊತ್ತಾದ ತಕ್ಷಣ ಯಾರು ಬೇಕಾದರೂ ಲಿಖೀತ ಅಥವಾ ತಮ್ಮ ಹೆಸರನ್ನುತಿಳಿಸದೆ ದೂರವಾಣಿ ಕರೆಮಾಡಿ ವಿಷಯ ತಿಳಿಸಬಹುದು.ಮಕ್ಕಳ ಸಹಾಯವಾಣಿ 1098ಗೆ ಉಚಿತ ದೂರವಾಣಿ ಕರೆ ಮಾಡಬಹುದು,
ಹತ್ತಿರದಪೊಲೀಸ್ ಠಾಣೆಗೆ ಮಾಹಿತಿನೀಡಬಹುದು, ಪಿಡಿಒ,ಗ್ರಾಮ ಲೆಕ್ಕಾಧಿಕಾರಿ, ಶಾಲಾ ಮುಖ್ಯೋಪಾಧ್ಯಾಯರು ,ತಹಶೀಲ್ದಾರರು, ತಾಪಂ ಇಒ,ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಬಿಇಒ,ಪಿಎಸ್ಐ, ಡೀಸಿ, ಎಸ್ಪಿ, ಸಿಇಒ,ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಇತರರಿಗೆ ದೂರು ಸಲ್ಲಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ