Team Udayavani, Feb 5, 2021, 2:55 PM IST
ಚಿಕ್ಕಬಳ್ಳಾಪುರ: ತೀವ್ರ ಕುತೂಹಲ ಕೆರಳಿಸಿರುವ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ವಕೀಲ ದಾವೂದ್ ಅವರ ಪುತ್ರ ಮುದಾಸೀರ್ 1,197 ಮತ ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಆನ್ಲೈನ್ ಮೂಲಕ ನಡೆದ ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಸಮಿತಿಯ ಸದಸ್ಯರು ಮತದಾನ ಮಾಡಿದ್ದು, ಒಟ್ಟು 1,607ರಲ್ಲಿ 100 ಮತದಾರರು ಮತದಾನ ಮಾಡಿಲ್ಲ. ಇನ್ನೂ 73 ಮತದಾರರ ಮತ ತಿರಸ್ಕೃತಗೊಂಡಿತ್ತು. ಒಟ್ಟಾರೆ 1,197 ಮತ ಪಡೆದ ಮುದಾಸೀರ್ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿದ್ದು, ಮೊತ್ತೂಂದೆಡೆ 174 ಮತ ಪಡೆದ ಹಾರೂನ್ ರಶೀದ್ ಪಾಷ ಅವರು ಉಪಾಧ್ಯಕ್ಷರಾಗಿ ಮತ್ತು 63 ಮತ ಪಡೆದ ಮಹೇಂದ್ರ ಅವರು ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಇದನ್ನೂ ಓದಿ :ಶೃಂಗೇರಿಯ ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ತನಿಖಾಧಿಕಾರಿ ಸಸ್ಪೆಂಡ್
ಜಿಲ್ಲಾ ಕಾಂಗ್ರೆಸ್ ಸಮಿತಿ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಪ್ರಸ್ತುತ ಚಿಕ್ಕಬಳ್ಳಾಪುರ ಭೂ ಅಭಿವೃದ್ಧಿ ಬ್ಯಾಂಕ್ನ ನಿರ್ದೇಶಕರಾಗಿರುವ ವಕೀಲ ದಾವೂದ್ ಅವರ ಪುತ್ರ ಮುದಾಸೀರ್ ಯುವ ಕಾಂಗ್ರೆಸ್ ಸಮಿತಿಯಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ ಮುದಾಸೀರ್, ತಮ್ಮ ತಂದೆಯ ಮತ್ತು ಜಿಲ್ಲೆಯ ಕಾಂಗ್ರೆಸ್ ಮುಖಂಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಮಾಡಲು ದೃಢಸಂಕಲ್ಪ ಮಾಡಿದ್ದಾರೆ.