ಮೈದುಂಬಿದ ಉತ್ತರ ಪಿನಾಕಿನಿ
Team Udayavani, Oct 10, 2021, 3:22 PM IST
ಗೌರಿಬಿದನೂರು: ತಾಲೂಕಿನ ಬಹುತೇಕ ಕಡೆಗಳಲ್ಲಿ ಗುರುವಾರ ರಾತ್ರಿ ಹಾಗೂ ಶುಕ್ರವಾರ ಬೆಳಗ್ಗೆ ಉತ್ತಮ ಮಳೆ ಆಗಿದ್ದು, ಕೆರೆಗಳು ತುಂಬಿ ಕೋಡಿ ಹರಿದ ಕಾರಣ ಉತ್ತರ ಪಿನಾಕಿನಿ ನದಿಯು ಮೈದುಂಬಿ ಹರಿದಿದೆ. ಕಳೆದ ಒಂದು ತಿಂಗಳಿನಿಂದ ಮಳೆ ಇಲ್ಲದೆ ಪರಿತಪಿಸುತ್ತಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಗೌರಿಬಿದನೂರು ನಗರದಲ್ಲಿ 18.2 ಮಿ.ಮೀ., ಹೊಸೂರಿ ನಲ್ಲಿ 14.6 ಮಿ.ಮೀ., ಡಿ.ಪಾಳ್ಯದಲ್ಲಿ 85 ಮಿ.ಮೀ., ವಾಟದಹೊಸಹಳ್ಳಿಯಲ್ಲಿ 52.2 ಮಿ.ಮೀ., ಮಂಚೇನಹಳ್ಳಿಯಲ್ಲಿ 75 ಮಿ.ಮೀ., ತೊಂಡೇಬಾವಿಯಲ್ಲಿ 13 ಮಿ.ಮೀ. ಹಾಗೂ ತಿಪ್ಪಗಾನಹಳ್ಳಿ ಯಲ್ಲಿ 26.6 ಮಿ.ಮೀ. ಮಳೆಯಾಗಿದೆ.
ಇದನ್ನೂ ಓದಿ:- ರಷ್ಯಾದಲ್ಲಿ ವಿಮಾನ ದುರಂತ: 15 ಜನ ಸಾವು
ಮಂಚೇನಹಳ್ಳಿಯಲ್ಲಿ ಹೋಬಳಿ ವ್ಯಾಪ್ತಿಯ ದಂಡಿಗಾನಹಳ್ಳಿ ಹಾಗೂ ಮಂಚೇನಹಳ್ಳಿ ಕೆರೆ ಕೋಡಿ ಹರಿದಿದೆ. ಇದರಿಂದ ಹರಿದು ಹೊರಬರುವ ನೀರು ಉತ್ತರ ಪಿನಾಕಿನಿ ನದಿ ಸೇರಿದ ಪರಿಣಾಮವಾಗಿ ನದಿಯು ಮೈದುಂಬಿದೆ. ಮತ್ತೂಂದೆಡೆ ಕುಂಟೆಗಳು, ಚೆಕ್ ಡ್ಯಾಂಗಳು, ಇನ್ನಿತರ ತಗ್ಗು ಪ್ರದೇಶಗಳು ಮಳೆ ನೀರಿನಿಂದ ಆವೃತವಾಗಿವೆ.