ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ಇಲ್ಲ
Team Udayavani, Aug 30, 2021, 4:04 PM IST
ಚಿಕ್ಕಬಳ್ಳಾಪುರ: ಈ ಬಾರಿಯೂ ಗೌರಿ ಗಣೇಶಹಬ್ಬದ ಮೇಲೆ ಕೊರೊನಾ ಕಾರ್ಮೋಡ ಕವಿದಿದೆ.ಈಗಾಗಲೇ ರಾಜ್ಯ ಸರ್ಕಾರ ಸಾರ್ವಜನಿಕ ಗಣೇಶೋತ್ಸವ ನಿಷೇಧಿಸಿದೆ. ಅದಕ್ಕೆ ಹಿಂದೂಪರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಅನುಮತಿ ನೀಡಬೇಕೆಂದು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಒತ್ತಾಯಿಸಿವೆ.
ಆದರೆ, ಸರ್ಕಾರದಿಂದ ಇದುವರೆಗೆ ಯಾವುದೇರೀತಿಯ ಪರಿಷ್ಕೃತ ಆದೇಶ ಬಂದಿಲ್ಲ. ಮತ್ತೂಂದಡೆಜಿಲ್ಲಾಡಳಿತ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಲು ಜನರಲ್ಲಿ ವ್ಯಾಪಕವಾಗಿಜಾಗೃತಿ ಮೂಡಿಸುವಂತಹ ಕೆಲಸ ಮಾಡುತ್ತಿದೆ.
ಈ ಬಾರಿ ಬೀದಿಗಳಲ್ಲಿಗಣೇಶ ಮೂರ್ತಿ ಪ್ರತಿಷ್ಠಾಪಿಸಲು ಸರ್ಕಾರ ನಿಷೇಧಹೇರಿರುವ ಕಾರಣ, ದೊಡ್ಡಗಣೇಶನ ಮೂರ್ತಿಗಳಿಗೆ ಬೇಡಿಕೆಇಲ್ಲ. ಹೀಗಾಗಿ ಮಾರಾಟಗಾರರು ದೊಡ್ಡ ಗಣೇಶಮೂರ್ತಿಗಳ ಮಾರಾಟಮಾಡುವುದನ್ನುಕೈಬಿಟ್ಟಿದ್ದಾರೆ.ಪರಿಸರಕ್ಕೆ ಧಕ್ಕೆ ಆಗುವಂತಹ ಪಿಒಪಿ ಗಣೇಶನಮೂರ್ತಿ ಮಾರಾಟ ನಿಷೇಧ ಮುಂದುವರಿದಿದೆ.
ಪರಸರ ಸ್ನೇಹಿ ಗಣೇಶೋತ್ಸವದ ಬಗ್ಗೆ ಅರಿವು:ಧಾರ್ಮಿಕ ಕಾರ್ಯಗಳನ್ನು ಕೋವಿಡ್ -19ಮಾರ್ಗಸೂಚಿ ಪಾಲಿಸಲು ಕಡ್ಡಾಯವಾಗಿ ಸೂಚನೆನೀಡುವ ಜೊತೆಗೆ ಜಿಲ್ಲೆಯಲ್ಲಿ ಪರಿಸರ ಸ್ನೇಹಿಗಣೇಶೋತ್ಸವ ಮಾಡಲು ಜಿಲ್ಲಾಡಳಿತದಿಂದ ಅರಿವುಮೂಡಿಸಲಾಗುತ್ತಿದೆ.
ವಿಶೇಷವಾಗಿ ಪರಿಸರ ಇಲಾಖೆಯ ಮೂಲಕ ಅರಿಶಿಣ ಗಣೇಶೋತ್ಸವದ ಕುರಿತು ಅರಿವು ಮೂಡಿಸುವ ಜೊತೆಗೆ ಅದನ್ನುಬಳಕೆ ಮಾಡಿಕೊಂಡು ಪರಿಸರ ಸಂರಕ್ಷಣೆ ಮಾಡಲುಮುಂದಾಗಿದ್ದಾರೆ.
ಅರಿಶಿಣ ಮೂರ್ತಿ ರೂಪಿಸಿ ದಾಖಲೆ ನಿರ್ಮಿಸಲು ಸಿದ್ಧತೆ
10 ಲಕ್ಷ ಅರಿಶಿಣ ಗಣೇಶನ ಮೂರ್ತಿಯನ್ನು ರೂಪಿಸಿ, ದಾಖಲೆ ಮಾಡಲು ಈಗಾಗಲೇ ಇಲಾಖೆಯಿಂದಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ.ಈಸಂಬಂಧ ಪರಿಸರ ಸಚಿವರು ಸಹ ಮಾಹಿತಿ ನೀಡಿದ್ದಾರೆ.ಅದಕ್ಕಾಗಿ ಒಂದುವೆಬ್ ಲಿಂಕ್ ಸಹ ನೀಡಲಾಗಿದೆ. ಹಬ್ಬದದಿನದಂದುಅದನ್ನು ಬಳಸಿ ವಿಶ್ವದಾಖಲೆ ಮಾಡಲುಯೋಜನೆ ರೂಪಿಸಿದ್ದೇವೆ ಎಂದು ಚಿಕ್ಕಬಳ್ಳಾಪುರ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ವಿಜಯಲಕ್ಷ್ಮಿ ಹೇಳಿದರು.
ಜಿಲ್ಲೆಯಲ್ಲಿ ಹಾಲಿನ ಪ್ಯಾಕೇಟ್ ಮೇಲೆ ಅರಿಶಿಣ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸುವಂತೆಅರಿವು ಮೂಡಿಸುತ್ತಿದ್ದೇವೆ. ಅದರ ಜೊತೆಗೆ ನೀರಿನ ಕ್ಯಾನ್, ಬಾಟಲ್ಗಳ ಮೇಲೆ ಸ್ಟಿಕರ್ ಅಂಟಿಸಲು ಸೂಚನೆನೀಡಿದ್ದೇವೆ. ಹಾಗೆಯೇ, ಕರೆಂಟ್ ಬಿಲ್ಗಳ ಮೂಲಕ, ಜವಳಿ ಗಾರ್ಮೆಂಟ್ಸ್ ಮತ್ತು ಕಾರ್ಖಾನೆಗಳಲ್ಲಿಸೋಮವಾರದಿಂದ ಜಾಗೃತಿ ಮೂಡಿಸುವಕೆಲಸ ಮಾಡುತ್ತೇವೆ ಎಂದು ವಿವರಿಸಿದರು.
ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ