ಚಿಕ್ಕಬಳ್ಳಾಪುರ: ಕೊರೊನಾ ಲಸಿಕೆಗೆ ಕೊರತೆ ಇಲ್ಲ
Team Udayavani, May 6, 2021, 3:10 PM IST
ಚಿಕ್ಕಬಳ್ಳಾಪುರ: ಕೊರೊನಾ ಸೋಂಕು ನಿಯಂತ್ರಿಸಲುಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಯಶಸ್ವಿಯಾಗಿ ನಡೆಯುತ್ತಿದೆ. ಪ್ರಸ್ತುತ ಲಸಿಕೆ ದಾಸ್ತಾನು ಇದ್ದು, ವಿತರಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿದೆ.ಜಿಲ್ಲೆಯಲ್ಲಿ ಕೋವಿಡ್ ಲಸಿಕಾ ಕೇಂದ್ರ, ಪ್ರಾಥಮಿಕಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ.
ಜಿಲ್ಲೆಯಲ್ಲಿ 16 ಸಾವಿರ ಲಸಿಕೆ ದಾಸ್ತಾನು ಇದ್ದು, 8ವಾರ ಕಾದಿರುವವರಿಗೆ 61 ಪ್ರಾಥಮಿಕ ಆರೋಗ್ಯಕೇಂದ್ರ ದಲ್ಲಿ ಲಸಿಕೆ ಲಭ್ಯವಿದೆ. 71 ಕೇಂದ್ರಗಳಲ್ಲಿ ಲಸಿಕೆನೀಡ ಲಾಗುತ್ತಿದೆ. 2ನೇ ಡೋಸ್ ಪಡೆಯಲು ಕಳೆದ 8ವಾರಗಳಿಂದ ಕಾಯುತ್ತಿದ್ದವರಿಗೆ ಲಸಿಕೆ ನೀಡಲುಪ್ರಥಮ ಆದ್ಯತೆ ನೀಡಲಾಗುತ್ತಿದೆ.
ಮಾಹಿತಿ ನೀಡುವ ವ್ಯವಸ್ಥೆ: ಪ್ರಥಮ ಹಂತದಲ್ಲಿಲಸಿಕೆ ಪಡೆದುಕೊಂಡು 8 ವಾರದ ನಂತರ 2ನೇಡೋಸ್ಗೆ ಕಾಯುತ್ತಿದ್ದ ಜಿಲ್ಲೆಯ 4 ಸಾವಿರ ಜನರಿಗೆಮೇ 5 ರಿಂದ ಲಸಿಕೆ ನೀಡುವ ಕಾರ್ಯ ನಡೆಯುತ್ತಿದೆ. 8ವಾರ ಪೂರೈಕೆ ಮಾಡಿರುವ ಜನರಿಗೆ ಪ್ರಥಮ ಆದ್ಯತೆನೀಡಿ ನಂತರ 7 ಹಾಗೂ 6 ವಾರ ಆಗಿರುವ ನಾಗರಿಕರು ಲಸಿಕೆ ಪಡೆದುಕೊಳ್ಳಲು ಆಯಾ ಗ್ರಾಮಗಳಲ್ಲಿರುವ ಆಶಾ ಕಾರ್ಯಕರ್ತರ ಮೂಲಕ ಮಾಹಿತಿ ನೀಡುವವ್ಯವಸ್ಥೆ ಜಾರಿಗೊಳಿಸಲಾಗಿದೆ.
ಲಸಿಕೆ ಪಡೆಯಲು ಹಿಂದೇಟು: ಸರ್ಕಾರ ಕೊರೊನಾಸೋಂಕು ನಿಯಂತ್ರಿಸಲು ಮತ್ತು ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸಲು ಪ್ರಥಮ ಹಂತದಲ್ಲಿ 45,60 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ.ಆದರೂ, ಲಸಿಕೆ ಪಡೆಯಲು ಜನ ಮುಂದೆ ಬರುತ್ತಿಲ್ಲವೆಂಬ ದೂರು ಕೇಳಿ ಬಂದಿದೆ. ತಾಲೂಕು ಮಟ್ಟದಲ್ಲಿತಹಶೀಲ್ದಾರ್, ಇಒ, ನೋಡಲ್ ಅಧಿ ಕಾರಿಗಳುಸಾಮಾ ಜಿಕ, ರಾಜಕೀಯ ನಾಯಕರು ಮತ್ತುಧಾರ್ಮಿಕ ಮುಖಂಡರ ಮೂಲಕ ಲಸಿಕೆ ಪಡೆದುಕೊಳ್ಳಲು ಅರಿವು ಮೂಡಿಸಿದರು. ಜನರಲ್ಲಿ ಉತ್ಸಾಹಹಮಾತ್ರ ಕಡಿಮೆಯಾಗಿದೆ.
ಲಸಿಕೆ ಕುರಿತು ಅಪಪ್ರಚಾರ: ಲಸಿಕೆ ಪಡೆದುಕೊಳ್ಳುವವಿಚಾರದಲ್ಲಿ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ ಫಲದಿಂದಾಗಿ ಜನ ಅದನ್ನುನಂಬಿ ಲಸಿಕೆ ಹಾಕಿಕೊಳ್ಳಲು ಮುಂದೆ ಬರುತ್ತಿಲ್ಲ,ಕೆಲವು ಕಡೆ ಲಸಿಕೆ ಹಾಕಿಕೊಳ್ಳಲು ಮನವರಿಕೆ ಮಾಡಿಕೊಡಲು ತೆರಳುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರಿಗೆ ನಿಂದನೆ ಮಾಡಿರುವ ಘಟನೆಗಳು ನಡೆದಿದೆ.ಆಶಾ, ಅಂಗನವಾಡಿ ಕಾರ್ಯಕರ್ತರು ಸಣ್ಣಪುಟ್ಟವಿಷಯ ಗಳನ್ನು ಹಿರಿಯ ಅ ಧಿಕಾರಿಗಳಿಗೆ ಹೇಳದೇ ಮೌನವಾಗಿದ್ದಾರೆ.
ದಾಖಲಾತಿ ಅಭಿಯಾನ: ಜಿಲ್ಲೆಯಲ್ಲಿ ಲಸಿಕಾ ಅಭಿಯಾನವನ್ನು ಯಶಸ್ವಿಗೊಳಿಸಲು ಪಣತೊಟ್ಟಿರುವಜಿಲ್ಲಾ ಕಾರಿ ಆರ್.ಲತಾ ಮತ್ತು ಅವರ ತಂಡದಸದಸ್ಯರು ವ್ಯಾಪಕ ಪ್ರಚಾರ ಮತ್ತು ಅರಿವು ಮೂಡಿಸುತ್ತಿದ್ದಾರೆ ಅದರ ಜೊತೆಗೆ ಪ್ರತಿಯೊಬ್ಬ ಅಂಗನವಾಡಿಕಾರ್ಯಕರ್ತರು ಮತ್ತು ಅವರ ಜೊತೆಗೆ ಶಿಕ್ಷಕರಿಗೆ ಜವಾಬ್ದಾರಿ ಹಾಕಿ ಮನೆ ಮನೆಗೆ ತೆರಳಿ ಮನೆಯಲ್ಲಿಎಷ್ಟು ಜನರಿದ್ದಾರೆ 18 ರಿಂದ 45 ವರ್ಷ ವಯಸ್ಸಿನಎಷ್ಟು ಮಂದಿ ಇದ್ದಾರೆಯೆಂದು ಮಾಹಿತಿ ಕಲೆ ಹಾಕಿಎಷ್ಟು ಜನ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದುಮಾಹಿತಿ ಪಡೆಯಲು ಸರ್ವೇ ಕಾರ್ಯ ನಡೆಸುತ್ತಿದ್ದಾರೆ ಸರ್ವೇ ವೇಳೆಯಲ್ಲಿ ಕೆಲವರು ಲಸಿಕೆ ಪಡೆದುಕೊಂಡಿದ್ದೇವೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಮೈಸೂರು ಮತ್ತು ಬೆಳಗಾವಿ ಜಿಲ್ಲೆಯನಂತರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಲಸಿಕೆ ನೀಡುವಂತಹಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದ್ದುಹೀಗಾಗಿ ಲಸಿಕೆ ಸರಬರಾಜುನಲ್ಲಿ ಯಾವುದೇ ರೀತಿಯವ್ಯತ್ಯಯವಾಗುತ್ತಿಲ್ಲ ಜಿಲ್ಲೆಗೆ ಅಗತ್ಯವಾಗಿರುವ ಲಸಿಕೆಪೂರೈಕೆ ಆಗುತ್ತಿದೆ ಜಿಲ್ಲೆಯಲ್ಲಿ ಲಸಿಕೆ ಪಡೆದುಕೊಳ್ಳಲುನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸ್ಥಳೀಯಆಡಳಿತ ಮತ್ತು ಜಿಲ್ಲಾಡಳಿತ ಮೂಲಕ ವ್ಯಾಪಕವಾಗಿಅರಿವು ಮತ್ತು ಜಾಗೃತಿ ಮೂಡಿಸಲಾಗುತ್ತಿದೆ.
ಜಿಲ್ಲೆಯಲ್ಲಿ ಲಸಿಕಾ ಅಭಿಯಾನ ನಡೆಯುತ್ತಿದೆ. ಮೊದಲ ಡೋಸ್ ಪಡೆದಿರುವವರಿಗೆನಿಗ ದಿತ ಅವ ಧಿಯಲ್ಲಿ ಪಡೆದುಕೊಳ್ಳಲು ಸಲಹೆ ನೀಡುತ್ತಿದ್ದೇವೆ. ಜಿಲ್ಲೆಯ ಪ್ರತಿ ಪ್ರಾಥಮಿಕಆರೋಗ್ಯ ಕೇಂದ್ರ, ಲಸಿಕಾ ಕೇಂದ್ರಗಳಲ್ಲಿ 2ನೇ ಡೋಸ್ ನೀಡುತ್ತಿದ್ದೇವೆ. ಫ್ರಂಟ್ಲೆçನ್ ವರ್ಕರ್ಈಗಾಗಲೇ 2ನೇ ಡೋಸ್ ಪಡೆದುಕೊಂಡಿದ್ದಾರೆ. ಇನ್ನೂ 45 ವರ್ಷ ಮೇಲ್ಪಟ್ಟವರುಪಡೆದುಕೊಳ್ಳುತ್ತಿದ್ದಾರೆ. ಲಸಿಕೆಗೆ ಯಾವುದೇ ರೀತಿಯ ಕೊರತೆಯಿಲ್ಲ, ವ್ಯವಸ್ಥಿತವಾಗಿಕೊಡುತ್ತಿದ್ದೇವೆ. ಜಿಲ್ಲೆ ಲಸಿಕಾ ಅಭಿಯಾನದಲ್ಲಿ ರಾಜ್ಯದಲ್ಲೇ 3ನೇ ಸ್ಥಾನ ಪಡೆದಿದೆ.
ಆರ್.ಲತಾ, ಜಿಲ್ಲಾಧಿ ಕಾರಿ, ಚಿಕ್ಕಬಳ್ಳಾಪುರ.
ಎಂ.ಎ.ತಮೀಮ್ ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?