ಸೋಂಕಿತರ ನೆರವಿಗೆ ಉಚಿತ ವಾಹನ ಸೇವೆ
Team Udayavani, May 7, 2021, 4:20 PM IST
ಚಿಂತಾಮಣಿ: ತಾಲೂಕಿನ ಕೊರೊನಾಸೋಂಕಿತರಿಗೆ ನೆರವಾಗಲೆಂದು ಧರ್ಮಸ್ಥಳಗ್ರಾಮೀಣಾಭಿವೃದ್ಧಿ ಯೋಜನೆಯಿಂದ ನೀಡಿದತುರ್ತು ವಾಹನಕ್ಕೆ ಸಂಯುಕ್ತ ಜಿಲ್ಲಾ ನಿರ್ದೇಶಕ ಸಿ.ಎಸ್.ಪ್ರಶಾಂತ್ ಬುಧವಾರ ಚಾಲನೆ ನೀಡಿದರು.
ಈ ವೇಳೆ ಮಾತನಾಡಿ, ಧರ್ಮಸ್ಥಳಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರಆದೇಶದ ಮೇರೆಗೆ ಎಲ್ಲಾ ತಾಲೂಕು ಕೇಂದ್ರಗಳಲ್ಲಿತಲಾ ಎರಡರಂತೆ 350 ವಾಹನಗಳ ವ್ಯವಸ್ಥೆಮಾಡಿದ್ದು, ಚಿಂತಾಮಣಿ ತಾಲೂಕಿನಲ್ಲಿ ನಮ್ಮಸಂಸ್ಥೆಯ ವಾಹನವು ಕೊರೊನಾ ಸೋಂಕಿತರಿಗೆಲಭ್ಯಇರುತ್ತದೆ ಎಂದು ತಿಳಿಸಿದರು.
ಸಂಸ್ಥೆಯಿಂದ ನೀಡುವ ವಾಹನವುಪ್ರಮುಖವಾಗಿ ಸಾಮಾನ್ಯ ವರ್ಗದವರಿಗೆಮೀಸಲಾಗಿದ್ದು, ಸೇವೆ ಉಚಿತವಾಗಿದೆ. ಒಂದುವೇಳೆ ಕರೆ ಬರುವ ಸಮಯದಲ್ಲಿ ವಾಹನವು ಬೇರೆರೋಗಿಗಳ ಸೇವೆಯಲ್ಲಿ ತೊಡಗಿದ್ದರೆ, ಆದ್ಯತೆನೆಲೆಯಲ್ಲಿ ಮೊದಲು ಕರೆ ಬಂದವರಿಗೆ ಸೇವೆಲಭ್ಯವಿರುತ್ತದೆ ಎಂದು ಹೇಳಿದರು.
ಈ ವ್ಯವಸ್ಥೆಯು ರೋಗಿಯ ಪ್ರಯಾಣಕ್ಕೆಲಭ್ಯವಿದೆಯೇ ಹೊರೆತು, ಇದರಲ್ಲಿ ಆ್ಯಂಬುಲೆನ್ಸ್ಸೌಲಭ್ಯ ಇರುವುದಿಲ್ಲ, ತಾಲೂಕಿನಲ್ಲಿ ವಾಹನದಸೌಲಭ್ಯಕ್ಕಾಗಿ ಕ್ಷೇತ್ರಯೋಜನಾಧಿಕಾರಿ ಕೆ.ಶಾರಿಕದೂ.ಸಂ:9880048077, 8762534120ಸಂಪರ್ಕಿಸಬಹುದೆಂದು ತಿಳಿಸಿದರು.ತಾಲೂಕು ಆರೋಗ್ಯಾಧಿಕಾರಿ ಸ್ವಾತಿ, ಕ್ಷೇತ್ರಯೋಜನಾಧಿಕಾರಿಗಳಾದ ಶಾರಿಕ, ಚಾಲಕರಾದಮಂಜುನಾಥ್, ರಾಜೇಶ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ