ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು
Team Udayavani, Oct 22, 2021, 11:03 AM IST
ಚಿಕ್ಕಮಗಳೂರು: ಸಹಾಯ ಮಾಡಲು ಹೋಗಿ, ಕೊನೆಗೆ ತಾನೇ ಸಾಲಗಾರನಾದ ಆಟೋ ರಿಕ್ಷಾ ಚಾಲಕನ ಕಥೆಯಿದೆ. 100 ರೂ. ಬಾಡಿಗೆ ದೆಸೆಯಿಂದ ಆಟೋ ಚಾಲಕ ಸುಮಾರು ಆರು ಸಾವಿರ ರೂಪಾಯಿ ಕಳೆದುಕೊಂಡ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಆಟೋ ಚಾಲಕ ವಿನೋದ್ ಅವರು ಬಾಡಿಗೆಗೆಂದು ಮುಕ್ತ ವಿಶ್ವವಿದ್ಯಾಲಯಕ್ಕೆ ಬಂದಿದ್ದರು. ಆದರೆ ಈ ವೇಳೆ ಭಾರೀ ಮಳೆಯಿಂದಾಗಿ ಮುಕ್ತ ವಿಶ್ವವಿದ್ಯಾಲಯದ ಗೇಟ್ ಬಳಿಯ ಸೇತುವೆ ಕುಸಿದಿತ್ತು. ಹೀಗಾಗಿ ಪರೀಕ್ಷೆಗೆ ಬಂದಿದ್ದ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರು. ಬಾಡಿಗೆಗೆ ಬಂದಿದ್ದ ಆಟೋ ವಿಶ್ವವಿದ್ಯಾಲಯದ ಬಳಿಯೇ ಲಾಕ್ ಆಗಿದೆ.
ಇದನ್ನೂ ಓದಿ:ಕಟ್ಟಡ ಕುಸಿತ ಘಟನೆಗಳಿಂದ ಎಚ್ಚೆತ್ತ ಬಾಡಿಗೆದಾರರು
ಸ್ಥಳಕ್ಕೆ ಜಿಲ್ಲಾಧಿಕಾರಿಗಳು, ಅಗ್ನಿಶಾಮಕ ದಳ ಭೇಟಿ ನೀಡಿ ವಿದ್ಯಾರ್ಥಿಗಳ ರಕ್ಷಣೆ ಮಾಡಲಾಗಿದೆ. ಆದರೆ, ಆಟೋ ಚಾಲಕನನ್ನು ಜಿಲ್ಲಾಡಳಿತ ಮರೆತು ಬಿಟ್ಟಿದೆ.
ಸೇತುವೆ ಮತ್ತೆ ಸಿದ್ದವಾಗಲು ತಿಂಗಳುಗಳೇ ಬೇಕು, ಆಟೋ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದ ವಿನೋದ್ ಅಲ್ಲಿವರೆಗೂ ಜೀವನ ಹೇಗೆಂದು ಆತಂಕಕ್ಕೀಡಾಗಿದ್ದರು. ಆಟೋ ಸ್ಥಳಾಂತರಿಸಲು ಸಹಾಯ ಮಾಡುವುದಾಗಿ ವಿಶ್ವವಿದ್ಯಾಲಯ ಹೇಳಿತ್ತು. ಆದರೆ, ಕೊನೆಗೆ ಯಾರೂ ಸಹಾಯ ಮಾಡಲಿಲ್ಲ.
ಹೀಗಾಗಿ ದಾರಿ ಕಾಣದೆ ವಿನೋದ್ ಸಾಲ ಮಾಡಿ 6000 ಹಣ ನೀಡಿ ಕ್ರೇನ್ ಮೂಲಕ ಆಟೋವನ್ನ ಲಿಫ್ಟ್ ಮಾಡಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ