ಅನ್ನ-ಅರಿವು ನೀಡುವುದೇ ನಿಜ ಧರ್ಮ


Team Udayavani, Aug 29, 2021, 2:06 PM IST

chithrdurga news

ಹೊಸದುರ್ಗ: ಧರ್ಮ ಕೇವಲ ಪೂಜಾದಿಕ್ರಿಯೆಗಳಲ್ಲಿಲ್ಲ. ಮಾನವ ಧರ್ಮವೇ ಶರಣ ಧರ್ಮಎಂದು ಡಾ| ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಶ್ರೀ ತರಳಬಾಳು ಜಗದ್ಗುರು ಶಾಖಾ ಮಠಆಯೋಜಿಸಿರುವ “ಮತ್ತೆ ಕಲ್ಯಾಣ’ ಅಂತರ್ಜಾಲ ಉಪನ್ಯಾಸ ಮಾಲಿಕೆಯ 28ನೇ ದಿನದ ಕಾರ್ಯಕ್ರಮದಲ್ಲಿಶ್ರೀಗಳು ಆಶೀರ್ವಚನ ನೀಡಿದರು. ಸ್ಥಾವರದೇವರುಗಳಿಗೆ ನೈವೇದ್ಯ ಮಾಡಿದ್ದು ಪ್ರಸಾದವಲ್ಲ,ಉಣ್ಣದ ಲಿಂಗಕ್ಕೆ ಬೊನವ ಹಿಡಿದು ಉಣ್ಣುವ ಜಂಗಮಬಂದರೆ ಮುಂದೆ ಕಳುಹಿಸುವುದು ಧರ್ಮವಲ್ಲ. ಅನ್ನ,ನೀರು, ಬಟ್ಟೆ, ಅರಿವುಗಳನ್ನು ಕೊಡುವುದೇ ನಿಜವಾದಧರ್ಮ ಎಂದರು.

ವಚನ ಧರ್ಮ ಶಾಂತಿ, ಸಮಾನತೆ, ಸಹಬಾಳ್ವೆ,ಸ್ವಾತಂತ್ರ್ಯದ ಬಗ್ಗೆ ಹೇಳುತ್ತದೆ. 12ನೇ ಶತಮಾನದಲ್ಲಿಬಸವಣ್ಣನವರ ನೇತೃತ್ವದಲ್ಲಿ ‌ ಜರುಗಿದ ಸಮಾಜೋದ್ಧಾರ್ಮಿಕ ಚಳವಳಿಯ ಪ್ರಭಾವಕೇವಲ ಕರ್ನಾಟಕಕ್ಕಷ್ಟೇ ಅಲ್ಲ, ಭಾರತದ ಹೊರಗೂಹೋಗಿರುವ ನಿದರ್ಶನಗಳಿವೆ. ಇದಕ್ಕೆ ಕಾರಣಕಲ್ಯಾಣದಲ್ಲಿನ ಧಾರ್ಮಿಕ ಸಂಸತ್‌ “ಅನುಭವಮಂಟಪ’ದಲ್ಲಿ ರೂಪುಗೊಂಡ ಸಾರ್ವತ್ರಿಕ,ಸಾರ್ವಕಾಲಿಕ ತತ್ವಗಳು. ಈ ತತ್ವ, ಸಿದ್ಧಾಂತಗಳಿಗೆಮಾರುಹೋಗಿ ಕಲ್ಯಾಣಕ್ಕೆ ಬಂದಧರ್ಮಾಸಕ್ತರಲ್ಲಿ ಮರುಳಶಂಕರದೇವರೂಒಬ್ಬರು.

ಇವರು ಅಂದಿನ ಗಾಂಧಾರ, ಇಂದಿನ ಅಪಘಾನಿಸ್ತಾನದಿಂದ ಬಂದವರು. ಕಲ್ಯಾಣದಜಂಗಮರಿಂದ ಅನುಭವ ಮಂಟಪ ಮತ್ತು ಮಹಾಮನೆಯಲ್ಲಿನ ಪ್ರಸಾದದ ಮಹತ್ವ ತಿಳಿದು ಬಂದಿದ್ದರು.

ಇವರು ಗುಪ್ತ ಭಕ್ತರು ಹಾಗೂ ಪರಮಪ್ರಸಾದಿಗಳು. ಭಕ್ತಿ ಆಡಂಬರದ ಸರಕಾಗದೆಗುಪ್ತವಾಗಿರಬೇಕೆಂದು ಬಯಸಿ ಅದರಂತೆ ಜೀವನನಡೆಸಿದವರು. 12 ವರ್ಷಗಳ ಕಾಲ ಅನುಭವಮಂಟಪ ಮತ್ತು ಮಹಾಮನೆಯಲ್ಲಿ ಮೌನಿಯಾಗಿ,ಎಲೆಮರೆಯ ಕಾಯಂತೆ ಸೇವೆ ಮಾಡಿದವರು.ಮಹಾಮನೆಯಲ್ಲಿ ಪ್ರಸಾದ ತಯಾರಿಸುವ, ಪ್ರಸಾದಸೇವಿಸಿದ ಎಲೆಗಳನ್ನು ಎತ್ತುವ, ಪಾತ್ರೆಗಳನ್ನುತೊಳೆಯುವ ಕಾಯಕ ಮಾಡುತ್ತಿದ್ದರು.ಅಲ್ಲಮಪ್ರಭುದೇವರು ಕಲ್ಯಾಣಕ್ಕೆ ಬಂದಾಗಮಹಾಮನೆಯ ಪ್ರಸಾದ ಕುಂಡದಲ್ಲಿದ್ದ ಗುಪ್ತಭಕ್ತಿಯಮರುಳ ಶಂಕರದೇವರು ಬೆಳಕಿಗೆ ಬರುವರು.

ಅದುವರೆಗೂ ಬಸವಣ್ಣನವರನ್ನೂ ಸೇರಿದಂತೆಯಾರಿಗೂ ಅವರ ಪರಿಚಯವಾಗಿರಲಿಲ್ಲ. ಗೋರಕ್ಷ,ಸಿದ್ಧರಾಮ, ಮುಂತಾದವರ ಬಳಿ ಪ್ರಭುದೇವರುಹೋಗಿ ಅವರ ದೋಷಗಳನ್ನು ತಿದ್ದಿ ಆಧ್ಯಾತ್ಮಿಕ ವಿಕಾಸಕ್ಕೆನೆರವಾದರು. ಆದರೆ ಮರುಳಶಂಕರ ದೇವರಲ್ಲಿಗೆಅಲ್ಲಮಪ್ರಭು ಬಂದು ನಿಜ ಪದವಿಯನ್ನು ನೀಡಿದ್ದುಅವರ ಆಧ್ಯಾತ್ಮಿಕ ಉನ್ನತಿಯ ದ್ಯೋತಕವಾಗಿದೆ ಎಂದು ಬಣ್ಣಿಸಿದರು.

ಉಪನ್ಯಾಸ ಮಾಲಿಕೆಯಲ್ಲಿ “ಮರುಳಶಂಕರದೇವ’ಕುರಿತಂತೆ ಲೇಖಕ, ಉಪನ್ಯಾಸಕ ಬೆಂಗಳೂರಿನ ಡಾ|ರುದ್ರೇಶ್‌ಅದರಂಗಿಮಾತನಾಡಿ.ಪ್ರಸ್ತುತಜಾಗತಿಕವಾಗಿದೊಡ್ಡ ವಿಪ್ಲವ ಅಪಘಾನಿಸ್ತಾನದಲ್ಲಿ ನಡೆಯುತ್ತಿದೆ.ಇದು ಅಲ್ಲಿನ ತಾಲಿಬಾನಿಗಳು ಎಸಗುತ್ತಿರುವ ಕುಕೃತ್ಯ.ಪ್ರಜಾಪ್ರಭುತ್ವ ಸರಕಾರವನ್ನು ಹಿಂಸಾತ್ಮಕಾಗಿ ತೊಡೆದುಹಾಕಿ, ಪ್ರಜೆಗಳ ಹಕ್ಕುಗಳನ್ನು ದಮನ ಮಾಡುತ್ತಿದ್ದಾರೆ.ಅಲ್ಲಿನ ನಾಗರೀಕರು ಬೇರೆ ದೇಶಗಳಿಗೆ ವಲಸೆಹೋಗಿ ನಿರಾಶ್ರಿತರಾಗುತ್ತಿದ್ದಾರೆ.

ಹಿಂಸೆ, ಕ್ರೌರ್ಯಮೆರೆಯುತ್ತಿದೆ. ಇಂಥ ಅಪಘಾನಿಸ್ತಾನದ ಮೊದಲಹೆಸರು ಗಾಂಧಾರ. ಅಲ್ಲಿಂದ ಬಸವಣ್ಣನ ಕಲ್ಯಾಣಕ್ಕೆಬಂದವರು ಮರುಳಶಂಕರ ದೇವರು. ಇವರಿಗೆಅನುಭವಮಂಟಪದಲ್ಲಿ ನಡೆಯುತ್ತಿರುವಸಮಾಜೋದ್ಧಾರ್ಮಿಕ ಚಟುವಟಿಕೆಗಳನ್ನುನೋಡಬೇಕು, ಶರಣರೊಂದಿಗೆ ಚಿಂತನ-ಮಂಥನನಡೆಸಬೇಕೆಂಬ ಮಹತ್ವಾಕಾಂಕ್ಷೆ ಇತ್ತು ಎಂದುತಿಳಿಸಿದರು.

ಕುಡೂÉರಿನ ಸಾನಿಕ ಉಪ್ಪರಿಗೆ ಸ್ವಾಗತಿಸಿದರು.ಶಿವಸಂಚಾರದ ಕೆ. ಜ್ಯೋತಿ, ಕೆ. ದಾûಾಯಣಿ,ಎಚ್‌.ಎಸ್‌. ನಾಗರಾಜ್‌ ವಚನಗೀತೆ ಹಾಡಿದರು.ಶಿವಮೊಗ್ಗದ ಸಹಚೇತನ ನಾಟ್ಯಾಲಯ ಕೇಂದ್ರದಕಲಾವಿದರು ವಚನ ನೃತ್ಯ ಪ್ರದರ್ಶಿಸಿದರು.

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ: ಪ್ರಿಯಾಂಕಾ ಕಿಡಿ

Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

ಕಾಂಗ್ರೆಸ್‌ ಸುಳ್ಳನ್ನು ಜನ ನಂಬಲ್ಲ: ಗೋವಿಂದ ಕಾರಜೋಳ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.