ಸಚಿವ ಈಶ್ವರಪ್ಪ ರಾಜೀನಾಮೆಗೆ ಯುವ ಕಾಂಗ್ರೆಸ್ ಆಗ್ರಹ
Team Udayavani, Feb 18, 2022, 3:16 PM IST
ಚಿತ್ರದುರ್ಗ: ಸಚಿವ ಕೆ.ಎಸ್. ಈಶ್ವರಪ್ಪ ಅವರರಾಜೀನಾಮೆಗೆ ಒತ್ತಾಯಿಸಿ ಯುವ ಕಾಂಗ್ರೆಸ್ಕಾರ್ಯಕರ್ತರು ಗುರುವಾರ ನಗರದಲ್ಲಿಪ್ರತಿಭಟಿಸಿದರು.ಪ್ರವಾಸಿ ಮಂದಿರದಿಂದ ಜಿಲ್ಲಾ ಧಿಕಾರಿಕಚೇರಿವರೆಗೆ ಪ್ರತಿಭಟನಾ ಮೆರವಣಿಗೆಯಲ್ಲಿಆಗಮಿಸಿದ ಯುವ ಕಾಂಗ್ರೆಸ್ಕಾರ್ಯಕರ್ತರು, ಸಚಿವ ಈಶ್ವರಪ್ಪ ವಿರುದ್ಧಧಿಕ್ಕಾರ ಕೂಗಿದರು.
ಸದನದಲ್ಲಿ ಈಶ್ವರಪ್ಪಆಡಿರುವ ಮಾತುಗಳನ್ನು ಹಿಂಪಡೆಯಬೇಕು.ಕೂಡಲೇ ಅವರನ್ನು ರಾಷ್ಟ್ರದ್ರೋಹದಅಡಿಯಲ್ಲಿ ಬಂ ಧಿಸಿ ಜೈಲಿಗೆ ಕಳಿಸಬೇಕು.ಸಚಿವ ಸ್ಥಾನದಿಂದ ಕಿತ್ತು ಹಾಕಬೇಕು ಎಂದುಆಗ್ರಹಿಸಿದರು.ಕೆಂಪುಕೋಟೆ ಮೇಲೆ ಕೇಸರಿ ಧ್ವಜಹಾರಿಸುವ ಕುರಿತು ಅವರು ಆಡಿರುವಮಾತುಗಳು ದೇಶದ್ರೋಹಕ್ಕೆ ಸಮ. ಕೇಸರಿಧ್ವಜ ರಾಷ್ಟ್ರಧ್ವಜವಾಗಬಹುದು ಎನ್ನುವ ಅವರಹೇಳಿಕೆ ಸರಿಯಲ್ಲ.
ಇದೇ ವೇಳೆ ಸದನದಲ್ಲಿಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬಗ್ಗೆಯೂಈಶ್ವರಪ್ಪ ನಾಲಗೆ ಹರಿಬಿಟ್ಟಿದ್ದಾರೆ. ಇಂತಹವ್ಯಕ್ತಿಗಳು ಸದನದಲ್ಲಿರಲು ಯೋಗ್ಯರಲ್ಲಎಂದು ಆಕ್ರೋಶ ವ್ಯಕ್ತಪಡಿಸಿದರು.ಯುವ ಕಾಂಗ್ರೆಸ್ ಕಾರ್ಯಕರ್ತರನ್ನುಪೊಲೀಸರು ಒನಕೆ ಓಬವ್ವ ವೃತ್ತದಲ್ಲಿಬಂಧಿ ಸಿ ಕರೆದೊಯ್ದರು. ಯುವ ಕಾಂಗ್ರೆಸ್ಅಧ್ಯಕ್ಷ ಉಲ್ಲಾಸ್ ಕಾರಂತ್ ಪ್ರತಿಭಟನೆಯನೇತೃತ್ವ ವಹಿಸಿದ್ದರು.
ರಾಜ್ಯ ಕಾರ್ಯದರ್ಶಿಮಹಮ್ಮದ್ ರμ, ಜಿಲ್ಲಾ ಉಪಾಧ್ಯಕ್ಷ ವಸೀಂ,ಪ್ರಧಾನ ಕಾರ್ಯದರ್ಶಿ ಶಶಿಕಿರಣ್, ಕಿರಣ್ಯಾದವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಹರೀಶ್, ಮಹಮ್ಮದ್ ಆಜಂ, ಮುಬಾರಕ್,ಯಶವಂತ ಗೌಡ, ಬಾಬು, ಸಿದ್ದೇಶ್, ಮಧುಗೌಡ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ