ವೆಂಗಳಾಪುರ ಶಾಲೆ ಮೇಲ್ಛಾವಣಿ ಕುಸಿತ
Team Udayavani, Nov 22, 2021, 4:32 PM IST
ಹೊಸದುರ್ಗ: ಕಳೆದ ಕೆಲವುದಿನಗಳಿಂದ ಸುರಿಯುತ್ತಿರುವಮಳೆಗೆ ತಾಲೂಕಿನ ಶ್ರೀರಾಂಪುರಹೋಬಳಿಯ ವೆಂಗಳಾಪುರ ಗ್ರಾಮದಸರಕಾರಿ ಹಿರಿಯ ಪ್ರಾಥಮಿಕಶಾಲಾ ಕೊಠಡಿಯ ಗೋಡೆ ಮತ್ತುಮೇಲ್ಛಾವಣಿ ಕುಸಿದು ಬಿದ್ದಿದೆ.
ಶಾಲಾ ಕಾಂಪೌಂಡ್ ಒಳಗೆಮಳೆ ನೀರು ಹೋಗಲು ಅವಕಾಶಕಲ್ಪಿಸದ್ದರಿಂದ ನೀರು ಗೋಡೆಯಸುತ್ತ ಸಂಗ್ರಹಗೊಂಡಿತ್ತು. ತೇವಾಂಶಜಾಸ್ತಿಯಾಗಿ ಗೋಡೆ ಕುಸಿದು ಬಿದ್ದಿದೆ.ಇದೇ ಸಮಯದಲ್ಲಿ ಮೇಲ್ಛಾವಣಿಯಹೆಂಚುಗಳು ಕೂಡ ಕೆಳಗೆ ಬಿದ್ದಿವೆ.ಪಕ್ಕದ ಕೊಠಡಿಗೂ ಹಾನಿಯಾಗಿದೆ.
ಬುಧವಾರ ರಾತ್ರಿ ಸಮಯದಲ್ಲಿಗೋಡೆ ಹಾಗೂ ಮೇಲ್ಛಾವಣಿಕುಸಿದು ಬಿದ್ದಿರುವುದರಿಂದವಿದ್ಯಾರ್ಥಿಗಳು ಅಪಾಯದಿಂದಪಾರಾಗಿದ್ದಾರೆ.ಮಳೆಯಿಂದ ಎರಡು ಕೊಠಡಿಗಳಗೋಡೆ ಕುಸಿತವಾಗಿರುವುದರಿಂದಶಾಲಾ ಆವರಣದ ಮರದಡಿಮೂರು ಮತ್ತು ನಾಲ್ಕನೇತರಗತಿ ಮಕ್ಕಳಿಗೆ ಪಾಠ ಪ್ರವಚನಮಾಡಲಾಯಿತು. ಶಾಲೆಯಲ್ಲಿಒಟ್ಟು ಏಳು ಕೊಠಡಿಗಳಿದ್ದು, ಎರಡುಕೊಠಡಿಗಳು ಹಾನಿಗೀಡಾಗಿವೆ.ಇನ್ನುಳಿದ ಐದು ಕೊಠಡಿಗಳಲ್ಲಿ ಒಂದರಲ್ಲಿ ಮಳೆ ನೀರು ನುಗ್ಗಿದೆ.ಹೀಗಾಗಿ ನಾಲ್ಕು ಕೊಠಡಿಗಳಲ್ಲಿತರಗತಿನಡೆಸಲಾಗುತ್ತಿದೆ.
ಮಕ್ಕಳತರಗತಿಗಳಿಗೆ ತೊಂದರೆಯಾಗಿದ್ದು,ಶಾಸಕರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಗ್ರಾಮಸ್ಥರುಒತ್ತಾಯಿಸಿದ್ದಾರೆ.ಮಳೆಯಿಂದ ಶಾಲೆಯಕೊಠಡಿಗಳ ಮೇಲ್ಛಾವಣಿ ಹಾಗೂಗೋಡೆ ಕುಸಿತವಾಗಿರುವಹಿನ್ನೆಲೆಯಲ್ಲಿ ಹಳೆಯ ಕೊಠಡಿಗಳುಹಾಗೂ ಅಪಾಯದ ಅಂಚಿನಲ್ಲಿರುವಕೊಠಡಿಗಲ್ಲಿ ತರಗತಿ ನಡೆಸಬಾರದು.ಬದಲಾಗಿ ಬೇರೆ ಕೊಠಡಿಗಳಲ್ಲಿತರಗತಿಗಳನ್ನು ನಡೆಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಎಲ್. ಜಯಪ್ಪತಾಲೂಕಿನ ಎಲ್ಲಾ ಶಾಲೆಗಳಮುಖ್ಯಶಿಕ್ಷಕರಿಗೆಸೂಚನೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!