ಮೆಕ್ಕೆ ಜೋಳಕ್ಕೆ ಶಾಪವಾದ ಅಕಾಲಿಕ ಮಳೆ
Team Udayavani, Dec 9, 2021, 2:25 PM IST
ಸಿರಿಗೆರೆ: ಕಟಾವಿಗೆ ಬಂದಿದ್ದ ಮೆಕ್ಕೆಜೋಳವನ್ನು ಕೊಯ್ಲು ಮಾಡುವ ಕನಸು ಕಂಡಿದ್ದ ಬೆಳೆಗಾರರು ಮಳೆ ಹೊಡೆತದಿಂದ ಕಂಗಾಲಾಗಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಪ್ರಮುಖ ಬೆಳೆಯೇಮೆಕ್ಕೆ ಜೋಳ. ಇದನ್ನು ಬೆಳೆದು ಸಾವಿರಾರು ಕುಟುಂಬಗಳು ಜೀವನ ನಿರ್ವಹಣೆ ಮಾಡುತ್ತಿವೆ. ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಕಟಾವು ಮಾಡಲಾಗದೆ ರೈತರು ಪರದಾಡುವಂತಾಗಿದೆ.
ಮಳೆಬಿಡುವು ಕೊಟ್ಟಿದ್ದರೆ ಒಕ್ಕಲು ಮಾಡಿ ಮೆಕ್ಕೆಜೋಳವನ್ನುರಕ್ಷಣೆ ಮಾಡಿಕೊಳ್ಳುತ್ತಿದ್ದರು. ಆದರೆ ಈ ವರ್ಷರೈತರಿಗೆ ಸರಿಯಾಗಿ ಮೆಕ್ಕೆಜೋಳ ಕೊಯ್ಲು ಮಾಡಲು ಆಗಿಯೇ ಇಲ್ಲ. ಇದರಿಂದಾಗಿ ಬೆಳೆದು ನಿಂತ ಜೋಳದಿನದಿಂದ ದಿನಕ್ಕೆ ಕುಸಿದು ನೆಲಕ್ಕೆ ಬೀಳುತ್ತಿವೆ. ಹಲವೆಡೆ ಜಮೀನುಗಳಲ್ಲಿ ಮಳೆ ನೀರು ನಿಂತು ಮೆಕ್ಕೆಜೋಳ ಇದ್ದಲ್ಲಿಯೇ ಮೊಳಕೆ ಬರುತ್ತಿದೆ.
ಒಂದರಿಂದ ಮೂರು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಬೆಳೆದುಬದುಕಿನ ಬಂಡಿ ಎಳೆಯುವ ರೈತರ ಬದುಕುಅತಂತ್ರ ಸ್ಥಿತಿಯಲ್ಲಿದೆ. ಇಸಾಮುದ್ರ ಗ್ರಾಮದಲ್ಲಿ ಶಾನುಬೋಗರಹಳ್ಳ ತುಂಬಿ ಹರಿಯುತ್ತಿದ್ದು ಅಂದಾಜು 300 ಎಕರೆ ಹೊಲಗಳಿಗೆ ನೀರು ನುಗ್ಗಿದೆ.
ಮುಂಗಾರು ಬೆಳೆಯಾದ ಮೆಕ್ಕೆಜೋಳ ಮುರಿಯುವ ಹಂತದಲ್ಲಿದ್ದ ಹೊಲಗಳಲ್ಲಿ ನೀರು ನುಗ್ಗಿದ ಪರಿಣಾಮ ಮೊಳಕೆ ಬರಲು ಆರಂಭಿಸಿದೆ. ಪ್ರತಿ ಎಕರೆಗೆ ಸುಮಾರು 15 ಸಾವಿರ ರೂ.ಗಳನ್ನು ರೈತರು ಖರ್ಚು ಮಾಡಿದ್ದಾರೆ. ಗೊಬ್ಬರ,ಬೀಜ, ಔಷದೋಪಚಾರ ಮಾಡಲು ಸಾಲ ಮಾಡಿಕೊಂಡಿದ್ದಾರೆ.
ಈಗ ಬೆಳೆಯನ್ನು ಕಟಾವು ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರೂ ಅವರಿಗೆತಾವು ಖರ್ಚು ಮಾಡಿದ ಹಣವೂ ಬರುವುದಿಲ್ಲ.ಇದುವರೆಗೆ ಪ್ರತಿ ಎಕರೆಯಲ್ಲಿನ ಜೋಳದ ತೆನೆಯನ್ನು ಕಟಾವು ಮಾಡಲು 2000 ರಿಂದ 2200 ರೂ.ಗಳ ತನಕ ಬೆಲೆ ನಿಗದಿಪಡಿಸಿದ್ದ ಕೂಲಿಕಾರರೂ ಡಿಮ್ಯಾಂಡ್ ಹೆಚ್ಚಿಸಿದ್ದಾರೆ. ಈ ಬಾರಿ ಪ್ರತಿ ಎಕರೆಗೆ 3000ರಿಂದ3200 ರೂ. ತನಕ ಬೆಲೆ ನಿಗದಿ ಮಾಡಿರುವುದರಿಂದ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ.
ರಾಜ ಸಿರಿಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ
Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Priyanka Gandhi; ದೇಶದ ನಿರುದ್ಯೋಗ ಪ್ರಮಾಣ 45 ವರ್ಷದಲ್ಲೇ ಗರಿಷ್ಠ