ಆರು ತಾಲೂಕಿನ ಪತ್ರಕರ್ತರಿಗೆ ವಿಮೆ ಸೌಲಭ್ಯ
Team Udayavani, Dec 19, 2021, 7:29 PM IST
ಹೊಸಪೇಟೆ: ವಿಜಯನಗರ ಜಿಲ್ಲೆಯ ಆರುತಾಲೂಕಿನ ಪತ್ರಕರ್ತರಿಗೆ ಆರೋಗ್ಯ ವಿಮೆಸೌಲಭ್ಯವನ್ನು ಒದಗಿಸಿಕೊಡುವೆ. ಒಂದು ವರ್ಷದಪ್ರಿಮಿಯಂ ಸ್ವಂತ ಹಣದಲ್ಲಿ ಭರಿಸುವೆ ಎಂದುಪ್ರವಾಸೋದ್ಯಮ ಹಾಗೂ ಪರಿಸರ ಸಚಿವ ಆನಂದ್ಸಿಂಗ್ ಹೇಳಿದರು.
ನಗರದ ಹೋಟೆಲ್ ಪ್ರಿಯದರ್ಶಿನಿ ಪ್ರೈಡ್ನಲ್ಲಿಶನಿವಾರ ನಡೆದ ಕರ್ನಾಟಕ ಕಾರ್ಯನಿರತಪತ್ರಕರ್ತರ ಸಂಘದ ವಿಜಯನಗರ ಜಿಲ್ಲಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಧಾನಿಪತ್ರಕರ್ತರಿಗೆ ಹೋಲಿಸಿದರೆ ಜಿಲ್ಲಾ ಹಾಗೂಗ್ರಾಮೀಣ ಭಾಗದ ಪತ್ರಕರ್ತರು ಸಮರ್ಪಕಸೌಲಭ್ಯವಿಲ್ಲದಿದ್ದರೂ ಸಾಮಾಜಿಕ ಕಾಳಜಿಯೊಂದಿಗೆವರದಿ ಮಾಡುತ್ತಾರೆ. ಕೊರೊನಾ ಸಂಕಷ್ಟದಲ್ಲೂಉತ್ತಮ ವರದಿ ಮಾಡುತ್ತಿದ್ದಾರೆ. ಹಾಗಾಗಿವೈಯಕ್ತಿಕವಾಗಿ ಆರೋಗ್ಯ ವಿಮೆ ಸೌಲಭ್ಯ ಒದಗಿಸುವೆ ಎಂದರು.
ವಿಜಯನಗರ ಜಿಲ್ಲೆಗಾಗಿ ಈ ಭಾಗದಲ್ಲಿದಶಕಗಳಿಂದ ಹೋರಾಟ ನಡೆದಿತ್ತು. ಅದಕ್ಕೆನಾನು ಧ್ವನಿಗೂಡಿಸಿರುವೆ. ಹಾಗಾಗಿ ಆಗಿನ ಸಿಎಂಯಡಿಯೂರಪ್ಪನವರು ಆರ್ಥಿಕ ಸಂಕಷ್ಟದನಡುವೆಯೂ ಜಿಲ್ಲೆ ಮಾಡಿದ್ದಾರೆ. ಅವರಿಗೆವಿಜಯನಗರ ಜಿಲ್ಲೆಯ ಆರೂ ತಾಲೂಕಿನ ಜನರುಚಿರಋಣಿಯಾಗಿದ್ದಾರೆ ಎಂದರು.
ಪತ್ರಿಕಾರಂಗಸಂವಿಧಾನದ ನಾಲ್ಕನೆ ಅಂಗವಾಗಿದೆ ಎಂದುಎಲ್ಲ ರಾಜಕಾರಣಿಗಳು, ಜನಪ್ರತಿನಿಧಿಗಳು ಈಬಗ್ಗೆ ಮಾತನಾಡುತ್ತಾರೆ. ಆದರೆ ಪತ್ರಕರ್ತರುಅನುಭವಿಸುತ್ತಿರುವ ಸಂಕಷ್ಟಕ್ಕೆ ಯಾರೂ ಸ್ಪಂದನೆಮಾಡುತ್ತಿಲ್ಲ. ಪತ್ರಕರ್ತರಿಗೆ ಎಲ್ಲ ಸೌಲಭ್ಯದೊರೆಯಬೇಕು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ
Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್
Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ