2 ದೋಣಿ ಅವಘಡ: 21 ಮಂದಿಯ ರಕ್ಷಣೆ
Team Udayavani, Sep 15, 2019, 5:00 AM IST
ಮಂಗಳೂರು/ಕಾಪು: ಕಾಪು ಮತ್ತು ಉಚ್ಚಿಲ ಸಮೀಪ ಸಮುದ್ರದಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಮೀನುಗಾರಿಕಾ ದೋಣಿ ಮುಳುಗಡೆ ಪ್ರಕರಣಗಳಲ್ಲಿ 21 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.
ಬಶೀರ್ ದಾವೂದ್ ನೆಕ್ಕಿಲಾಡಿ ಅವರಿಗೆ ಸೇರಿದ “ಎಸ್.ಎಂ. ಫಿಶರೀಸ್’ ಬೋಟ್ ಶುಕ್ರವಾರ ಬೆಳಗ್ಗೆ ಮಂಗಳೂರು ಹಳೆ ಬಂದರಿನಿಂದ ಹೊರಟು ಮೀನುಗಾರಿಕೆಗೆ ಹೊರಟಿದ್ದು, ಅಪರಾಹ್ನ 3.30ರ ವೇಳೆಗೆ ಕಾಪು ಸಮೀಪ ತಲುಪಿದಾಗ ಆಕಸ್ಮಿಕವಾಗಿ ದೋಣಿಯ ಒಳಗೆ ನೀರು ನುಗ್ಗಿತು. ಅದರಲ್ಲಿದ್ದ 9 ಮೀನುಗಾರರು ಸಮೀಪದ ಇನ್ನೊಂದು ದೋಣಿಯವರ ನೆರವು ಪಡೆದು ಅಪಾಯದಿಂದ ಪಾರಾದರು.
ಎಸ್.ಎಂ. ಫಿಶರೀಸ್ ಬೋಟ್ ನೀರಿನಲ್ಲಿ ಮುಳುಗಿದೆ ಎಂದು ಮಾಲಕ ಬಶೀರ್ ದಾವೂದ್ ನೆಕ್ಕಿಲಾಡಿ ಅವರು ಮಂಗಳೂರು ಟ್ರಾಲ್ ಬೋಟ್ ಯೂನಿಯನ್ಗೆ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 30 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.
ಇನ್ನೊಂದು ಪ್ರಕರಣ
ಕಾಪು: ಉಚ್ಚಿಲದ ಅಶೋಕ್ ಪುತ್ರನ್ ಅವರಿಗೆ ಸೇರಿದ್ದ ಕರಿಯ ಜೋಡಿ ಹೆಸರಿನ ದೋಣಿ ಶುಕ್ರವಾರ ಮೀನುಗಾರಿಕೆಗೆ ತೆರಳಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಅಪಘಾತಕ್ಕೀಡಾಯಿತು. ಅದರಲ್ಲಿದ್ದ 12 ಮೀನುಗಾರರನ್ನು ಸಮೀಪದಲ್ಲೇ ಮೀನುಗಾರಿಕೆ ನಡೆಸುತ್ತಿದ್ದ ಶಿವಪ್ರಸಾದ್ ಬೋಟ್ನವರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ. ಅಪಘಾತಕ್ಕೀಡಾದ ದೋಣಿಯನ್ನು ಮಲ್ಪೆ ಬಂದರಿಗೆ ಕೊಂಡೊಯ್ಯಲಾಗಿದೆ.
ಹಿಂದಿನ ದಿನವೂ ಅಪಘಾತ
ಗುರುವಾರ ಕಂತಲೆ ಬಲೆಯ ಮೀನುಗಾರಿಕೆಗೆ ತೆರಳಿದ್ದ ಐತಪ್ಪ ಸುವರ್ಣ ಅವರಿಗೆ ಸೇರಿದ್ದ ಮೀನುಗಾರಿಕಾ ದೋಣಿ ದಡಕ್ಕೆ ವಾಪಾಸು ಬರುತ್ತಿರುವಾಗ ಅಪಘಾತಕ್ಕೀಡಾಗಿದ್ದು ದೋಣಿಯಲ್ಲಿದ್ದ ಮೀನು ಸಮುದ್ರ ಪಾಲಾಗಿದೆ. ಆದರೆ ಯಾವುದೇ ಅಪಾಯವುಂಟಾಗಿಲ್ಲ ಎಂದು ತಿಳಿದುಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ