ಮಂಗಳೂರಿಗೆ “ಅಮ್ಮ’ ಆಗಮನ
Team Udayavani, Mar 8, 2019, 1:00 AM IST
ಮಂಗಳೂರು: ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಅವರು ಗುರುವಾರ ಮಂಗಳೂರು ಬೋಳೂರಿನ ಅಮೃತಾನಂದಮಯಿ ಮಠಕ್ಕೆ ಆಗಮಿಸಿದ್ದು, ಸಂಜೆ ಅವರು ಸತ್ಸಂಗದಲ್ಲಿ ಭಾಗವಹಿಸಿ ಆಶೀರ್ವಚಿಸಿದರು.
ಅಮೃತ ವಿದ್ಯಾಲಯಂ ಮೈದಾನದಲ್ಲಿ ಮಾ.8 ಮತ್ತು ಮಾ. 9ರಂದು ಅವರು ಅಮೃತ ಸಂಗಮ- 2019ರಲ್ಲಿ ಪಾಲ್ಗೊಳ್ಳಲಿದ್ದಾರೆ. ಎರಡೂ ದಿನ ಪ್ರವಚನ, ಸತ್ಸಂಗ, ಭಜನೆ, ಧ್ಯಾನ, ಮಾನಸ ಪೂಜೆ ಮತ್ತು ಎಲ್ಲರಿಗೂ ಅಮ್ಮನವರ ಅನುಗ್ರಹ ದರ್ಶನವಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಅಮ್ಮನವರು ಮಠಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಬೋಳೂರಿನ ಮಾತಾ ಅಮೃತಾನಂದಮಯಿ ಮಠದ ಮಂಗಳಾಮೃತ ಚೈತನ್ಯ, ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಅಧ್ಯಕ್ಷ ಪ್ರಸಾದ್ರಾಜ್ ಕಾಂಚನ್, ಡಾ| ಜೀವರಾಜ್ ಸೊರಕೆ, ಡಾ| ಸನತ್ ಹೆಗ್ಡೆ, ಶ್ರುತಿ ಹೆಗ್ಡೆ, ವಾಮನ್ ಕಾಮತ್, ಸಂತೋಷ್ ಅಮೀನ್ ಸ್ವಾಗತಿಸಿದರು.