ಬಿಜೆಪಿ ಗೆದ್ದ ಸಂಭ್ರಮ: ರಿಕ್ಷಾದಲ್ಲಿ ಉಚಿತ ಸೇವೆ ನೀಡಿದ ಅಭಿಮಾನಿ
Team Udayavani, May 20, 2018, 11:26 AM IST
ಪಕ್ಷಿಕೆರೆ : ಪಕ್ಷಿಕೆರೆ ರಿಕ್ಷಾ ಪಾರ್ಕಿನಲ್ಲಿ ಸೀತಾರಾಮ ಪಂಜ ಅವರು ತಮ್ಮ ರಿಕ್ಷಾದಲ್ಲಿ ಶನಿವಾರ ಪ್ರಯಾಣಿಕರಿಗೆ ಉಚಿತ ಸೇವೆ ನೀಡಿ ದರು. ಮೂಲ್ಕಿ- ಮೂಡ ಬಿದಿರೆಯಲ್ಲಿ ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್ ಜಯಗಳಿಸಿದ ಹಿನ್ನೆಲೆಯಲ್ಲಿ ಬಿಜೆಪಿ ಅಭಿಮಾನಿ ಸೀತಾರಾಮ ಪಂಜ ಅವರು ಈ ಸೇವೆ ನೀಡಿದ್ದಾರೆ. ಕಳೆದ ಬಾರಿ ಕಸ್ತೂರಿ ಪಂಜ ಅವರು ಜಿಲ್ಲಾ ಪಂಚಾಯತ್ಗೆ ಜಯಗಳಿಸಿದ ಹಿನ್ನೆಲೆಯಲ್ಲಿಯೂ ಅವರು ತಮ್ಮ ರಿಕ್ಷಾದಲ್ಲಿ ಒಂದು ದಿನ ಉಚಿತ ಸೇವೆ ನೀಡಿದ್ದರು.
ಸೀತಾರಾಮ ಪಂಜ ಅವರಿಗೆ ಒಂದು ದಿನಕ್ಕೆ ಸುಮಾರು 1,200 ರೂ. ಬಾಡಿಗೆ ಬರುತ್ತದೆ. ಆದರೆ ಶನಿವಾರ ಮಾತ್ರ ಅವರು ಯಾರಿಂದಲೂ ಬಾಡಿಗೆ ಪಡೆದಿಲ್ಲ. ಪಕ್ಷಿಕೆರೆ ಪಾರ್ಕ್ನಿಂದ 5 ಕಿ.ಮೀ. ವ್ಯಾಪ್ತಿಯಲ್ಲಿ ಉಚಿತ ಸೇವೆ ನೀಡಿದ್ದಾರೆ. ಸರತಿಯಲ್ಲಿ ರಿಕ್ಷಾ ಪಾರ್ಕಿನಲ್ಲಿ ಇದ್ದಾಗ ಸರದಿಯಲ್ಲಿ ಬಂದವರಿಗೆ ಉಚಿತ ಸೇವೆ ನೀಡಿದರು. ಸುಮಾರು 600 ರೂ. ಡೀಸೆಲ್ ಹಾಕಿದ್ದೇನೆ ಎನ್ನುತ್ತಾರೆ ಸೀತಾರಾಮ ಪಂಜ.