ಸಾಲ ಮನ್ನಾದಿಂದ ಕರಾವಳಿಯ 80,000 ರೈತರಿಗೆ ಬಂಪರ್
Team Udayavani, Jul 6, 2018, 11:55 AM IST
ಮಂಗಳೂರು: ಬಜೆಟ್ನಲ್ಲಿ ಕರಾವಳಿಗೆ ಅನ್ಯಾಯವಾಗಿದೆ ಎಂಬ ಕೂಗಿನ ಮಧ್ಯೆಯೇ ರೈತರ ಕೃಷಿ ಸಾಲ ಮನ್ನಾ ಯೋಜನೆ ಘೋಷಣೆಯಿಂದ ದ. ಕನ್ನಡ ಹಾಗೂ ಉಡುಪಿ ಜಿಲ್ಲೆಯ ಸುಮಾರು 80,000 ರೈತರಿಗೆ ಲಾಭವಾಗುವ ನಿರೀಕ್ಷೆಯಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ದ. ಕನ್ನಡ ಜಿಲ್ಲೆಯ 64,030 ರೈತರ 285 ಕೋ.ರೂ. ಹಾಗೂ ಉಡುಪಿ ಜಿಲ್ಲೆಯ 18,820 ರೈತರ 79 ಕೋ.ರೂ. ಮನ್ನಾ ಮಾಡಲಾಗಿತ್ತು.
ಎಷ್ಟು ಸಾಲ?
2017-18ನೇ ಸಾಲಿನಲ್ಲಿ ದ. ಕನ್ನಡ ಹಾಗೂ ಉಡುಪಿ ಜಿಲ್ಲೆ ಸೇರಿ ಒಟ್ಟು 91,280 ರೈತರು ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗೆ ಒಟ್ಟು 1,194 ಕೋ.ರೂ. ಬೆಳೆಸಾಲ ಪಡೆದಿದ್ದಾರೆ.
ಕರಾವಳಿಯ 576 ರೈತರ ಸುಸ್ತಿ ಬಾಕಿ
* ಕರಾವಳಿ ಯಲ್ಲಿ ಬೆಳೆ ಸಾಲ ಪಡೆದು 576 ರೈತರು ಸುಸ್ತಿ ಬಾಕಿ ಹೊಂದಿದ್ದಾರೆ.
*ದ. ಕನ್ನಡ ಜಿಲ್ಲೆಯ 461 ರೈತರ 925 ಲಕ್ಷ ರೂ. ಅಸಲು ಹಾಗೂ 267 ಲಕ್ಷ ರೂ. ಬಡ್ಡಿ
*ಉಡುಪಿ ಜಿಲ್ಲೆಯ 115
*ರೈತರ 199 ಲಕ್ಷ ರೂ ಅಸಲು ಹಾಗೂ 54 ಲಕ್ಷ ರೂ. ಬಡ್ಡಿ
ಮರುಪಾವತಿ ಬಾಕಿ
* ದ. ಕನ್ನಡ ಜಿಲ್ಲೆಯ ಸಹಕಾರ ಬ್ಯಾಂಕ್ಗಳಲ್ಲಿ 2017-18ನೇ ಸಾಲಿನಲ್ಲಿ 68,924 ರೈತರಿಂದ ಮರುಪಾವತಿ ರೂಪದಲ್ಲಿ 943 ಕೋ.ರೂ. (ಮಾ.31ಕ್ಕೆ ) ಬೆಳೆಸಾಲ ಹೊರಬಾಕಿ ಇದೆ.
* ಉಡುಪಿ ಜಿಲ್ಲೆಯಲ್ಲಿ 22,932 ರೈತರ 261 ಕೋ.ರೂ. ಬೆಳೆ ಸಾಲ ಬಾಕಿಯಿದೆ.
* ಕರಾವಳಿಯಲ್ಲಿ ಒಟ್ಟು 91,856 ರೈತರ 1,205 ಕೋ.ರೂ. ಬೆಳೆಸಾಲ ಹೊರಬಾಕಿಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…