ಕೆನರಾ ಎಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ
Team Udayavani, Jun 30, 2017, 3:45 AM IST
ಮಂಗಳೂರು: ವಿದ್ಯಾರ್ಥಿಗಳು ಶೈಕ್ಷಣಿಕ ಬದುಕಿನ ಬಳಿಕ ರಾಷ್ಟ್ರದ ಉಜ್ವಲ ಭವಿಷ್ಯದ ಕುರಿತು ಕನಸು ಕಾಣಬೇಕು. ಅವುಗಳ ಅನುಷ್ಠಾನದ ನಿಟ್ಟಿನಲ್ಲಿಯೂ ತೊಡಗಿಕೊಳ್ಳಬೇಕು ಎಂದು ಮಂಗಳೂರು ಭಾರತ್ ಗ್ರೂಪ್ಸ್ನ ನಿರ್ದೇಶಕ ಸುಧೀರ್ ಎಂ. ಪೈ ಹೇಳಿದರು.
ಅವರು ನಗರದ ಕೊಡಿಯಾಲ್ಬೈಲ್ ಟಿ.ಎಂ.ರಮಣ ಪೈ ಸಭಾಂಗಣದಲ್ಲಿ ನಡೆದ ಕೆನರಾ ಎಂಜಿನಿಯರಿಂಗ್ ಕಾಲೇಜಿನ 13ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಇಂದು ದೇಶದಲ್ಲಿ ಅವಕಾಶಗಳು ಹೆಚ್ಚಿರುವ ಜತೆಗೆ ಅಭಿವೃದ್ಧಿಯ ವೇಗವೂ ಗಮನಾರ್ಹವಾಗಿದೆ. ಯುವಕರು ಸ್ವ ಉದ್ಯಮಗಳಿಂದ ರಾಷ್ಟ್ರದ ಅಗತ್ಯತೆ ಅರಿತು ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕ ಸಂಚಿಕೆ ಸುರಭಿಯನ್ನು ಅನಾ ವರಣಗೊಳಿಸಿದರು. ಕೆನರಾ ಹೈಸ್ಕೂಲ್ ಅಸೋಸಿಯೇಶನ್ ಅಧ್ಯಕ್ಷ ಎಸ್.ಎಸ್.ಕಾಮತ್ ಅಧ್ಯಕ್ಷತೆ ವಹಿಸಿ ದ್ದರು. ಉಪಾಧ್ಯಕ್ಷ ಎಂ.ಅಣ್ಣಪ್ಪ ಪೈ, ಕಾರ್ಯದರ್ಶಿ ಎಂ.ರಂಗನಾಥ ಭಟ್, ಆಡಳಿತ ಮಂಡಳಿ ಸದಸ್ಯರಾದ ಪಂಚಮಾಲ್ ಗೋಪಾಲಕೃಷ್ಣ ಶೆಣೈ, ಕೊಚ್ಚಿಕಾರ್ ಸುಧಾಕರ ಪೈ, ಗೋಪಾಲ ಕೃಷ್ಣ ಶೆಣೈ, ಎಂ.ಗಣೇಶ್ ಕಾಮತ್, ಬಸ್ತಿ ಪುರುಷೋತ್ತಮ ಶೆಣೈ, ಕಸ್ತೂರಿ ಶ್ರೀಕಾಂತ ಪೈ, ಸುರೇಶ್ ಕಾಮತ್, ಡಾ| ಉಮಾನಂದ ಮಲ್ಯ, ಆಡಳಿತ ಕೌನ್ಸಿಲ್ ಸದಸ್ಯರಾದ ಎಂ.ಬಿ.ಪಡಿಯಾರ್, ರಮೇಶ್ ಕಾಮತ್, ಗೋಪಾಲ ರಾವ್, ಕಾಲೇಜಿನ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಕಾಲೇಜಿನ ಸಂಚಾಲಕ ಎಂ.ಪದ್ಮ ನಾಭ ಪೈ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರಾಂಶುಪಾಲ ಡಾ| ಗಣೇಶ್ ವಿ.ಭಟ್ ಸ್ವಾಗತಿಸಿದರು. ಡಾ| ವೆಂಕಟೇಶ ಎನ್. ಅತಿಥಿಯನ್ನು ಪರಿಚಯಿಸಿದರು. ಉಷಾ ದಿವಾ ಕಾರ್ಲ ವಂದಿಸಿದರು. ಅಕ್ಷತಾ ಭಟ್ ನಿರ್ವಹಿಸಿದರು.