ಚಾರ್ವಾಕ: ರಸ್ತೆ ಬದಿಯುದ್ದಕ್ಕೂ ಸಾಲು ಗಿಡಗಳ ನಾಟಿ
Team Udayavani, Jul 12, 2019, 5:53 AM IST
ಕಾಣಿಯೂರು: ಮಾನವ ಪ್ರಕೃತಿಯ ವಿರುದ್ಧವಾಗಿ ನಡೆದು ಕೊಂಡಿದ್ದೇ ಈ ಬಾರಿ ಬಿಸಿಲಿನ ಬೇಗೆಗೆ ಪ್ರಮುಖ ಕಾರಣ ಎಂದು ಅರಿಯದೇ ಇದ್ದವರು ಯಾರೂ ಇಲ್ಲ. ಮರಗಳನ್ನು ಕಡಿದು ಕಾಂಕ್ರೀಟ್ ಕಟ್ಟಡ ಹಾಗೂ ರಸ್ತೆಗಳನ್ನು ನಿರ್ಮಿಸುತ್ತಿರುವುದೇ ಮಳೆ ಕೊರತೆಗೆ ಕಾರಣ.
ಈ ಪರಿಸ್ಥಿತಿ ಹೀಗೆಯೇ ಮುಂದುವರಿ ದರೆ ನೀರಿಗೆ ಬರ ಉಂಟಾಗಲಿದೆ, ಅಂತರ್ಜಲವೂ ಇಳಿಯಲಿದೆ. ಹಸುರೀಕರಣಕ್ಕೆ ಒತ್ತು ನೀಡದಿದ್ದರೆ ಮುಂದಿನ ತಲೆಮಾರು ಇನ್ನಷ್ಟು ತೊಂದರೆ ಅನುಭವಿಸುವುದು ನಿಶ್ಚಿತ. ವಾಯು ಮಾಲಿನ್ಯವೂ ಮಿತಿ ಮೀರುತ್ತದೆ. ಇದನ್ನು ತಡೆಗಟ್ಟಲು ಇರುವ ಏಕೈಕ ಉಪಾಯವೆಂದರೆ ಗಿಡಗಳ ನಾಟಿ ಎಂದರಿತ ಕಾಣಿಯೂರು ಗ್ರಾ.ಪಂ. ಆಡಳಿತ ರಸ್ತೆಯ ಬದಿಯಲ್ಲಿ ಸಾಲು ಗಿಡಗಳನ್ನು ನೆಟ್ಟು ಪೋಷಣೆಗೆ ಮುಂದಾಗಿದೆ.
ಸಾಲು ಮರಗಳನ್ನು ಬೆಳೆಸಿ ತಿಮ್ಮಕ್ಕ ಜಗತ್ತಿಗೆ ಮಾದರಿಯಾಗಿದ್ದಾರೆ. ಅವರಿಂದ ಪ್ರೇರಣೆ ಪಡೆದ ಕಾಣಿಯೂರು ಗ್ರಾ.ಪಂ., ಚಾರ್ವಾಕ ಗ್ರಾಮಸ್ಥರ ಸಹಕಾರದಲ್ಲಿ ರಸ್ತೆಯ ಬದಿಗಳಲ್ಲಿ ಸಾಲಾಗಿ ಗಿಡಗಳನ್ನು ನಾಟಿ ಮಾಡಿದೆ.
ನೀರಿಂಗಿಸುವ ಯೋಜನೆಯಿದೆ
– ಪ್ರವೀಣ್ ಚೆನ್ನಾವರ