ಗುಂಪಲಡ್ಕ-ಸರೊಳಿಮೂಲೆ ರಸ್ತೆ ಅಭಿವೃದ್ಧಿ ಅನಿವಾರ್ಯ


Team Udayavani, May 23, 2018, 1:30 PM IST

23-may-10.jpg

ವಿಟ್ಲ : ವಿಟ್ಲಕಸಬಾ, ವಿಟ್ಲ ಮುಟ್ನೂರು, ಕೇಪು, ಪುಣಚ ಗ್ರಾಮಗಳನ್ನು ಸಂಪರ್ಕಿಸುವ ಒಳ ರಸ್ತೆಗೆ ಕಾಯಕಲ್ಪವಾಗ ಬೇಕಾಗಿದೆ. ಗುಂಪಲಡ್ಕದಿಂದ ಸರೊಳಿಮೂಲೆ ವರೆಗಿನ ಸುಮಾರು 4 ಕಿ.ಮೀ. ದೂರದ ಈ ರಸ್ತೆಯ ಮುಕ್ಕಾಲುಭಾಗ ಸಂಪೂರ್ಣ ಹದಗೆಟ್ಟಿದೆ. ಇದನ್ನು ಅಭಿವೃದ್ಧಿಪಡಿಸ ಬೇಕೆಂದು ಈ ಭಾಗದ ಜನತೆ ಆಗ್ರಹಿಸಿದ್ದಾರೆ.

ಎಲ್ಲಿದೆ ಈ ರಸ್ತೆ ?
ವಿಟ್ಲ ಗ್ರಾಮದ ಉಕ್ಕುಡ ದರ್ಬೆಯಿಂದ ಕೇಪು-ಪುಣಚ-ಪುತ್ತೂರು ರಸ್ತೆಯಲ್ಲಿ 2 ಕಿ.ಮೀ. ದೂರದಲ್ಲಿ ಎಡಕ್ಕೆ ತಿರುಗಬೇಕು. ಅದೇ ಗುಂಪಲಡ್ಕ. ಇಲ್ಲಿ ಮೇಲಕ್ಕೇರಿದ ಈ ರಸ್ತೆ ಸರೊಳಿಮೂಲೆಯ ತನಕ ಸಾಗುತ್ತದೆ. ಗುಂಪಲಡ್ಕದಲ್ಲಿ ಸ್ವಲ್ಪ ಭಾಗ ವಿಟ್ಲಕಸಬಾ ಗ್ರಾಮಕ್ಕೆ ಸಂಬಂಧಪಟ್ಟಿದೆ. ಬಳಿಕ ಕೇಪು ಗ್ರಾಮದಲ್ಲಿ ಹಾದುಹೋಗುತ್ತದೆ. ವಿಟ್ಲ ಗ್ರಾಮದ ಚಂದಳಿಕೆ – ವಿಟ್ಲಮುಟ್ನೂರು ಗ್ರಾಮದ ಮಾಡತ್ತಡ್ಕ ಮತ್ತು ಪುಣಚ ಗ್ರಾಮದ ಅಜ್ಜಿನಡ್ಜ ಸಂಪರ್ಕ ರಸ್ತೆಗೆ ದಡ್ಡಲಡ್ಕ ಎಂಬಲ್ಲಿ ಗುಂಪಲಡ್ಕ-ಸರೊಳಿಮೂಲೆ ರಸ್ತೆ ಸೇರಿಕೊಳ್ಳುತ್ತದೆ. ಇದು ಜಿಲ್ಲಾ ಪಂಚಾಯತ್‌ ರಸ್ತೆ. ಕೇವಲ ನಾಲ್ಕು ಕಿ.ಮೀ. ದೂರದ ರಸ್ತೆಯಾಗಿದ್ದರೂ ಇತರ ಗ್ರಾಮಗಳಿಗೆ ಸುಲಭ ಸಂಪರ್ಕ ಮಾರ್ಗವಾಗಿರುವುದರಿಂದ ಅಭಿವೃದ್ಧಿ ಯಾಗಬೇಕಾಗಿರುವುದು ಅನಿವಾರ್ಯ.

ಉಪಯುಕ್ತ ಯಾರಿಗೆ ?
ಈ ರಸ್ತೆ ವಿಟ್ಲ ಮತ್ತು ಕೇಪು ಗ್ರಾಮದ ಜನತೆಗೆ ಹೆಚ್ಚು ಪ್ರಯೋಜನ ಸಿಗುವುದಿಲ್ಲ. ಆದರೆ ಈ ಭಾಗದಿಂದ ಬೇರೆ ಗ್ರಾಮಗಳನ್ನು ಸಂಪರ್ಕಿಸುವುದಕ್ಕೆ ಈ ರಸ್ತೆಯನ್ನು ಅವಲಂಬಿಸುವವರಿದ್ದಾರೆ.

ಪ.ಜಾ. ಮತ್ತು ಪ.ಪಂ.ದ ಅನೇಕ ಕುಟುಂಬಗಳೂ ಈ ರಸ್ತೆಯನ್ನೇ ಅವಲಂಬಿಸಬೇಕು. ವಿಟ್ಲಮುಟ್ನೂರು ಗ್ರಾಮದ ಜನತೆಗೆ ಅತೀ ಉಪಯುಕ್ತ. ನೂರಾರು ಮನೆಗಳಿಗೆ ಅವಶ್ಯವಾಗಿರುವ ಈ ರಸ್ತೆಯ ಮೂಲಕ ಆಲಂಗಾರು ಮೂಕಾಂಬಿಕಾ ದೇವಸ್ಥಾನ ಮತ್ತು ಇತರ ಧಾರ್ಮಿಕ ಕೇಂದ್ರಗಳನ್ನು ಹತ್ತಿರದಿಂದ ತಲುಪುವುದಕ್ಕೆ ಸಾಧ್ಯವಿದೆ. ಈ ರಸ್ತೆಯ ಹಿಂದೆ ಮತ್ತು ಮುಂದೆ ಉತ್ತಮ ಅಭಿವೃದ್ಧಿ ಕಾಮಗಾರಿಗಳು ನಡೆದಿವೆ. ಆದರೆ ರಸ್ತೆ ಪೂರ್ತಿ ಅಭಿವೃದ್ಧಿಯಾಗಲೇಬೇಕಾಗಿದೆ.

ಅನುದಾನ ಬಂದಿದೆಯೇ?
ಪಕ್ಷ ಬೇಧವಿಲ್ಲದೆ ಬಿಜೆಪಿ ಮತ್ತು ಕಾಂಗ್ರೆಸ್‌ ಶಾಸಕರ ಅವಧಿಯಲ್ಲಿ ಈ ರಸ್ತೆಗೆ ಅನುದಾನ ಬಂದಿದೆ. ಜಿ.ಪಂ. ರಸ್ತೆಗೆ ಅನುದಾನ ಹೆಚ್ಚಿರುವುದಿಲ್ಲ. ಅರ್ಧಂಬರ್ಧ ಅನುದಾನ ಸಿಕ್ಕಿರುವುದರಿಂದ ಅಲ್ಲಲ್ಲಿ ಅಭಿವೃದ್ಧಿಯಾಗಿದೆ. ನೂರಿನ್ನೂರು ಮೀಟರ್‌ ದೂರ ಕಾಂಕ್ರೀಟ್‌ ರಸ್ತೆಯೂ ನಿರ್ಮಾಣವಾಗಿದೆ. ಈ ರಸ್ತೆ ಸುಸಜ್ಜಿತವಾಗಿ, ಸರ್ವಋತು ರಸ್ತೆಯನ್ನಾಗಿಸಬೇಕೆಂದು ಇಲ್ಲಿನ ಜನತೆ ಆಗ್ರಹಿಸಿದ್ದಾರೆ. ಕಳೆದ 8 ವರ್ಷಗಳಲ್ಲಿ ಈ ರಸ್ತೆಗೆ ಸುಮಾರು 58 ಲಕ್ಷ ರೂ. ಅನುದಾನ ಬಂದಿದೆ. ಆದರೆ ಅದು ಸಾಲದೆ, ರಸ್ತೆ ಪೂರ್ತಿಯಾಗಬೇಕಾದರೆ ಸುಮಾರು 1 ಕೋಟಿ ರೂ. ಬೃಹತ್‌ ಯೋಜನೆ ಅತೀ ಅಗತ್ಯ.

ಇನ್ನಷ್ಟು ಅನುದಾನಕ್ಕೆ ಪ್ರಯತ್ನ 
ಈ ರಸ್ತೆಗೆ ಪ್ರಥಮವಾಗಿ 5 ಲಕ್ಷ ರೂ. ಅನುದಾನ ಬಂದಿತ್ತು. ಬಳಿಕ ಶೋಭಾ ಕರಂದ್ಲಾಜೆ ಅವರು ಗ್ರಾಮೀಣಾಭಿವೃದ್ಧಿ
ಸಚಿವರಾಗಿದ್ದಾಗ 20 ಲಕ್ಷ ರೂ. ಅನುದಾನ, ಸಂಸದ ನಳಿನ್‌ ಅವರ 5 ಲಕ್ಷ ರೂ. ಅನುದಾನ, ಮಲ್ಲಿಕಾಪ್ರಸಾದ್‌ ಶಾಸಕತ್ವದ ಅವಧಿಯಲ್ಲಿ 10 ಲಕ್ಷ ರೂ. ಮತ್ತು ಶಕುಂತಳಾ ಟಿ. ಶೆಟ್ಟಿ ಅವರ ಮೂಲಕ ಪ.ಪಂ./ಪ.ಜಾ. ರಸ್ತೆ ಕಾಂಕ್ರೀಟ್‌ ಕಾಮಗಾರಿಗಾಗಿ ಲೋಕೋಪಯೋಗಿ ಇಲಾಖೆ ಮೂಲಕ 17 ಲಕ್ಷ ರೂ. ಅನುದಾನ ಬಂದಿದೆ. ಇನ್ನಷ್ಟು ಅನುದಾನಕ್ಕೆ ಪ್ರಯತ್ನವಾಗುತ್ತಿದೆ. ಆ ರಸ್ತೆ ಅಭಿವೃದ್ಧಿಯಾಗಬೇಕೆಂಬ ಬೇಡಿಕೆಯೂ ಇದೆ.
– ಮಹಾಬಲೇಶ್ವರ ಭಟ್‌ ಆಲಂಗಾರು
ಗ್ರಾ.ಪಂ. ಸದಸ್ಯರು

 ಉದಯಶಂಕರ್‌ ನೀರ್ಪಾಜೆ 

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.