ನಾಲ್ಕು ದಶಕಗಳ ಹಿಂದಿನ ಕನಸು ನನಸಾಯಿತು


Team Udayavani, Feb 28, 2019, 5:29 AM IST

28-february-3.jpg

ಮೂಲ್ಕಿ : ನಾಲ್ಕು ದಶಕಗಳ ಮೂಲ್ಕಿಯ ಜನತೆಯ ಕನಸು ನನಸಾಯಿತು. ಬಹು ನಿರೀಕ್ಷೆಯ ಮೂಲ್ಕಿ ತಾಲೂಕು ಪ್ರಸ್ತಾವನೆಯು ಸೋಮವಾರ ಮುಖ್ಯಮತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಅಧ್ಯಕ್ಷತೆಯ ಸಂಪುಟ ಸಭೆಯಲ್ಲಿ ಮಾನ್ಯತೆಗೊಂಡು, ತಾಲೂಕು ಆಗಿ ಘೋಷಣೆಯಾಗಿ ಜನರ ಬೇಡಿಕೆಯನ್ನು ಸರಕಾರ ಪುರಸ್ಕರಿಸಿರುವುದರಿಂದ ಮೂಲ್ಕಿ ಸರ್ವಪಕ್ಷಗಳ ನಾಯಕರು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

ಸರಕಾರದ ಸಮಿತಿಗಳ ವರದಿ
ಉಡುಪಿ ಜಿಲ್ಲೆ ಆಗುವ ಮೊದಲೇ ಈಗಿನ ಉಡುಪಿ ಜಿಲ್ಲೆಯ ಕೆಲವು ವ್ಯಾಪ್ತಿಯ ಹಲವಾರು ಪ್ರದೇಶವನ್ನು ಸೇರಿಸಿಕೊಂಡು ಮೂಲ್ಕಿ ತಾಲೂಕು ರಚನೆ ನ್ಯಾಯ ಸಮ್ಮತವಾಗಿದೆ ಎಂಬ ಬಗ್ಗೆ ಹುಂಡೇಕಾರ್‌, ಗದ್ದಿ ಗೌಡರ್‌ ಮತ್ತು ವಾಸುದೇವ ರಾವ್‌ ಮೊದಲಾದವರ ಅಧ್ಯಕ್ಷತೆಯನ್ನೊಳಗೊಂಡ ಸಮಿತಿ ಮೂಲ್ಕಿಗೆ ಆಗಮಿಸಿ, ಇಲ್ಲಿನ ಜನರ ಜತೆಗೆ ಚರ್ಚೆ ನಡೆಸಿ ತಯಾರಿಸಿದ ಪೂರಕ ವರದಿಗಳು ಸರಕಾರಕ್ಕೆ ಸಲ್ಲಿಕೆಯಾಗಿತ್ತು.

ಜಮೀನು ಕಾದಿರಿಸಲಾಗಿದೆ
ಗೇರುಕಟ್ಟೆಯ ಬಳಿ ಮೂಲ್ಕಿ ತಾಲೂಕು ಕಚೇರಿಗಾಗಿಯೇ ಸುಮಾರು ಎರಡು ಎಕ್ರೆಯಷ್ಟು ಜಮೀನನ್ನು ಕೂಡ ಕಾದಿರಿಸಿರುವುದು ದಾಖಲೆಗಳಲ್ಲಿವೆ. ತಾಲೂಕಿಗಾಗಿ ಕಾದಿರಿಸಿದ ಆಂಶಿಕ ಜಮೀನನ್ನು ಒಂದು ಸಮುದಾಯದ ಉಪಯೋಗಕ್ಕಾಗಿ ಸಮುದಾಯ ಭವನ ನಿರ್ಮಿಸಲು ಸರಕಾರ ಕೊಟ್ಟಿದೆ ಎಂಬ ಸುದ್ದಿಯೂ ಕೇಳಿಬರುತ್ತಿದೆ.

ಹೋರಾಟದಲ್ಲಿ ಹಲವರ ಪ್ರಯತ್ನ
ಮೂಲ್ಕಿ ತಾಲೂಕು ಆಗುವ ಅರ್ಹತೆಯ ಬಗ್ಗೆ ದಿ| ಜಿ.ಎಂ. ಶೆಟ್ಟಿ ಅವರು ಹಲವಾರು ಲೇಖನಗಳನ್ನು ನಿರಂತರವಾಗಿ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ಹರಿಕೃಷ್ಣ ಪುನರೂರು ಅವರ ನೇತೃತ್ವದಲ್ಲಿ ಮೂಲ್ಕಿಯ ಅನೇಕ ಹಿರಿಯರು ಹೋರಾಟ ನಡೆಸಿ ಧರಣಿ ಸತ್ಯಾಗ್ರಹವನ್ನು ಮಾಡಿ ಅಭಯಚಂದ್ರ ಅವರ ನಿಯೋಗದ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಮಾಜಿ ಸಚಿವರಾದ ಕೆ. ಅಮರನಾಥ ಶೆಟ್ಟಿ, ಕೆ. ಅಭಯಚಂದ್ರ, ಶಾಸಕ ಉಮಾನಾಥ ಕೋಟ್ಯಾನ್‌ ಮತ್ತು ಮೂಲ್ಕಿಯ ಹಲವಾರು ಮುಖಂಡರು ಮೂಲ್ಕಿ ತಾಲೂಕು ಆಗಬೇಕೆಂಬ ಹೋರಾಟಕ್ಕೆ ಸಾಥ್‌ ನೀಡಿದ್ದರಲ್ಲದೆ ಹಲವಾರು ಪ್ರಯತ್ನಗಳನ್ನು ನಡೆಸಿದ್ದರು.

ಸತತ ನಾಲ್ಕು ದಶಕಗಳ ಮೂಲ್ಕಿ ಜನತೆಯ ಹಾಗೂ ವಿವಿಧ ಪಕ್ಷಗಳ ನಾಯಕರು ಮಾಡಿರುವ ಪ್ರಯತ್ನಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ, ಕಂದಾಯ ಸಚಿವರಾದ ಆರ್‌.ವಿ. ದೇಶಪಾಂಡೆ ಅವರು ನ್ಯಾಯ ಒದಗಿಸಿ ಜನರ ಭಾವನೆಗಳನ್ನು ಗೌರವಿಸಿದ್ದಾರೆ. ಇದಕ್ಕಾಗಿ ಮೂಲ್ಕಿಯ ಸಾರ್ವಜನಿಕರು ಹಾಗೂ ಸರ್ವ ಪಕ್ಷಗಳ ನಾಯಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಮೂಲ್ಕಿಗೆ ಬಂದಿದ್ದಾಗ ಭರವಸೆ
ಕಳೆದ ಬಾರಿ ಚುನಾವಣೆಯ ಮೊದಲು ಮೂಲ್ಕಿಗೆ ಆಗಮಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜನರು ತಾಲೂಕು ಪ್ರತಿಕ್ರಿಯೆ ಬಗ್ಗೆ ತಿಳಿಸಿದಾಗ ತಾನು ಮುಖ್ಯಮಂತ್ರಿಯಾದರೆ ಮೂಲ್ಕಿ ತಾಲೂಕು ಮಾಡುವೆ ಎಂಬ ಭರವಸೆ ನೀಡಿದ್ದರು. ಈ ಭರವಸೆಯನ್ನು ಮುಖ್ಯಮಂತ್ರಿಯವರಿಗೆ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಹಾಗೂ ಮೂಲ್ಕಿ ಜೆಡಿಎಸ್‌ ಬ್ಲಾಕ್‌ನ ಅಧ್ಯಕ್ಷ ಜೀವನ್‌ ಶೆಟ್ಟಿ ಮತ್ತು ಇತರ ಪದಾಧಿಕಾರಿಗಳು ಮತ್ತೆ ನೆನಪಿಸಿದಾಗ ಸಪ್ಲಿಮೆಂಟರಿ ಬಜೆಟ್‌ನಲ್ಲಿ ಮೂಲ್ಕಿ ತಾಲೂಕು ಘೋಷಣೆ ಮಾಡುವೆ ಎಂದು ತಿಳಿಸಿದ್ದರು. ಕೊಟ್ಟ ಮಾತಿನಂತೆ ಈಗ ಮೂಲ್ಕಿ ತಾಲೂಕು ಆಗಿ ಪಟ್ಟಿಯಲ್ಲಿ ಸೇರಿಸುವ ಮೂಲಕ ಕುಮಾರಸ್ವಾಮಿ ತಮ್ಮ ಮಾತು ಉಳಿಸಿ ಕೊಂಡಿದ್ದಾರೆ. 

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.