ಗಡಿಪಿಲ: ದ್ವಿಚಕ್ರ ವಾಹನ ಸವಾರರ ಜೀವ ತಿನ್ನುವ ರೈಲ್ವೆ ಕಂಬಿ
Team Udayavani, Jun 4, 2018, 2:57 PM IST
ನರಿಮೊಗರು : ಕಾಣಿಯೂರು- ಮಂಜೇಶ್ವರ ಹೆದ್ದಾರಿಯ ಮಧ್ಯೆ ನರಿ ಮೊಗರು ಸಮೀಪದ ಗಡಿಪಿಲ ಉದ್ದ ಮಜಲು ಎಂಬಲ್ಲಿ ರೈಲ್ವೇ ಕಂಬಿಗಳು ದ್ವಿಚಕ್ರ ವಾಹನ ಸವಾರರಿಗೆ ಮೃತ್ಯು ಪಾಶವಾಗಿ ಪರಿಣಮಿಸುತ್ತಿವೆ. ಈ ಹಿಂದೆ ರಸ್ತೆ ಕಿರಿದಾಗಿದ್ದ ಸಂದರ್ಭದಲ್ಲಿ ಸಣ್ಣ ಅಂತರವಿರುವ ರೈಲ್ವೇ ಕಂಬಿ ಗಳನ್ನು ಹಾಕಲಾಗಿತ್ತು. ಆದರೆ ಈಗ ರಸ್ತೆ ಅಭಿ ವೃದ್ಧಿಗೊಂಡಿದ್ದು, ಹೊಸ ರಸ್ತೆಗೆ ಅನುಗುಣವಾಗಿ ಕಂಬಿಗಳನ್ನೂ ಹಾಕಲಾಗಿದೆ.
ಅಪಾಯಕಾರಿ ಕಂಬಿ ಪ್ರಾಣಕ್ಕೆ ಸಂಚಕಾರ
ರಸ್ತೆ ಕಿರಿದಾಗಿದ್ದ ಸಂದರ್ಭದಲ್ಲಿ ಹಾಕಲಾಗಿದ್ದ ಕಂಬಿಗಳನ್ನು ತೆರವುಗೊಳಿಸದೆ ಹಾಗೆಯೇ ಬಿಡಲಾಗಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಈ ಕಂಬಿಗಳಿಗೆ ಹಲವು ಬಾರಿ ದ್ವಿಚಕ್ರ ವಾಹನಗಳು ಡಿಕ್ಕಿಯಾಗಿ ವಾಹನ ಸವಾರರು ಗಾಯಗೊಂಡ ನಿದರ್ಶನಗಳಿವೆ. ಈ ಅಪಾಯಕಾರಿ ರೈಲ್ವೇ ಕಂಬಿಗೆ ಕೆಲ ದಿನಗಳ ಹಿಂದೆ ಪುತ್ತೂರು ಅಂಚೆ ಇಲಾಖೆಯ ನೌಕರ ಕಾಣಿಯೂರಿನ ಚನಿಯ ಯಾನೆ ಸತೀಶ್ ಎಂಬವರ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡಿದ್ದರು. ಕೆಲ ವರ್ಷಗಳ ಹಿಂದೆ ನವವಿವಾಹಿತರೊಬ್ಬರು ಇದೇ ಅಪಾಯಕಾರಿ ಕಂಬಿಗೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದು ಪ್ರಾಣ ಕಳೆದುಕೊಂಡಿದ್ದರು. ಹಲವು ವಾಹನ ಸವಾರರು ಇದೇ ಸ್ತಳದಲ್ಲಿ ಅಪಘಾತಕ್ಕೀಡಾಗಿದ್ದಾರೆ.
ತೆರವಿಗೆ ಆಗ್ರಹ
ರಸ್ತೆ ವಿಸ್ತರಣೆಯಾಗಿದ್ದರೂ ಈ ಹಿಂದೆ ಅಳವಡಿಸಲಾಗಿದ್ದ ಕಂಬಿಯನ್ನು ತೆರವುಗೊಳಿಸದ ಕಾರಣ ಅಪಘಾತಗಳಾಗಿ, ಅಮಾಯಕರ ಜೀವಗಳು ಬಲಿಯಾಗುತ್ತಿವೆ. ರಸ್ತೆ ಅಂಚಿನಲ್ಲೇ ಇರುವ ಈ ಕಂಬಿಗಳನ್ನು ಕೂಡಲೇ ತೆರವುಗೊಳಿಸುವ ಕೆಲಸ ಮಾಡಬೇಕು ಎಂದು ಸವಣೂರು ಗ್ರಾಮ ಪಂಚಾಯತ್ನ ಸದಸ್ಯ ಸತೀಶ್ ಗೌಡ ಅಂಗಡಿಮೂಲೆ ಆಗ್ರಹಿಸಿದ್ದಾರೆ.
ಇಲಾಖೆ ಗಮನ ಹರಿಸಲಿ
ಇದೇ ರೀತಿ ಬೆದ್ರಾಳ ಎಂಬಲ್ಲಿಯೂ ರಸ್ತೆಯ ಮೇಲ್ಭಾಗದಲ್ಲಿ ರೈಲ್ವೆ ಹಳಿಯಿದೆ. ಅಲ್ಲಿ ರಸ್ತೆ ಅಭಿವೃದ್ಧಿ ಸಂದರ್ಭದಲ್ಲಿ ಹಳೆಯ ಕಂಬಿಗಳನ್ನು ತೆರವುಗೊಳಿಸಿ ನೂತನ ರಸ್ತೆಗೆ ಅನುಗುಣವಾಗಿ ಹೊಸ ಕಂಬಿ ಅಳವಡಿಸಲಾಗಿದೆ. ಆದರೆ ಗಡಿಪಿಲದಲ್ಲಿ ಹಳೆಯ ಕಂಬಿಗಳನ್ನು ತೆರವುಗೊಳಿಸಿಲ್ಲ. ಈ ಕುರಿತು ರೈಲ್ವೇ ಇಲಾಖೆಯವರು ಗಮನ ಹರಿಸಬೇಕು ಎಂದು ಪುತ್ತೂರಿನ ಕ್ಯಾಂಪ್ಕೋ ಉದ್ಯೋಗಿ ವೀರಮಂಗಲದ ರವೀಂದ್ರ ಕೈಲಾಜೆ ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ
Road Mishap; ಬೈಕ್-ಪಿಕ್ ಅಪ್ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು
Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!
Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ
Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ