ಕುಸಿಯುವ ಹಂತದಲ್ಲಿ ಸರಕಾರಿ ಬಾವಿ
Team Udayavani, Jul 25, 2018, 12:21 PM IST
ಬೆಳ್ತಂಗಡಿ : ವಿಪರೀತ ಮಳೆಯಿಂದಾಗಿ ಮುಂಡಾಜೆ ಗ್ರಾಮದ ಕಾಂತ್ ಪಾಲುನಲ್ಲಿರುವ ಸರಕಾರಿ ಬಾವಿಯ ಕಟ್ಟೆ ಕುಸಿಯುವ ಹಂತದಲ್ಲಿದ್ದು, ಮುಂಜಾಗ್ರತ ಕ್ರಮವಾಗಿ ಮುಂಡಾಜೆ ಗ್ರಾಮ ಪಂಚಾಯತ್ನವರು ಬಾವಿಯಿಂದ ನೀರು ಸೇದುವುದನ್ನು ನಿಷೇಧಿಸಿ ಸೂಚನಾ ಫಲಕವನ್ನು ಅಳವಡಿಸಿದ್ದಾರೆ.
ಬಾವಿಯ ಸುತ್ತಲು ಮಣ್ಣು ಕುಸಿಯುವ ಸ್ಥಿತಿಯಲ್ಲಿದೆ. ಪರಿಸರದವರು ಈ ಬಾವಿಯ ನೀರನ್ನು ಆಶ್ರಯಿಸಿದ್ದರು. ಜತೆಗೆ ನಳ್ಳಿ ನೀರಿನ ಸಂಪರ್ಕವೂ ಇರುವುದರಿಂದ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗಿಲ್ಲ. ಮಳೆಗಾಲ ಮುಗಿದ ಬಳಿಕ ಸೂಕ್ತ ನಿರ್ವಹಣೆಯನ್ನು ಮಾಡಬೇಕಾಗಿದ್ದು, ಅಲ್ಲಿಯವರೆಗೆ ಯಾರೂ ಬಾವಿಯ ಬಳಿಗೆ ತೆರಳದಂತೆ ಸೂಚನಾ ಫಲಕ ಹಾಕಲಾಗಿದೆ.