ಕಲ್ಮಶವೇ ಇಲ್ಲದ ಊರಿನಲ್ಲಿ ರಾದ್ಧಾಂತ ಆಗುವುದಾದರೂ ಹೇಗೆ?


Team Udayavani, May 24, 2018, 3:38 PM IST

24-may-13.jpg

ಕಲ್ಮಶವೇ ಇಲ್ಲದ ಒಂದು ಊರಿನಲ್ಲಿ ರಾಜಕೀಯದ ಚಹರೆಯಿಂದ ಹಾಗೂ ದನದ ವಿಚಾರದಲ್ಲಿ ಯಾವೆಲ್ಲ ರಾದ್ಧಾಂತ ನಡೆದುಹೋಗುತ್ತದೆ ಎಂಬ ಸಂಗತಿಯನ್ನೇ ಮುಂದಿಟ್ಟುಕೊಂಡು ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ಸಿನೆಮಾವೊಂದು ಸೆಟ್ಟೇರಲು ರೆಡಿಯಾಗಿದೆ. ವಿಶೇಷವೆಂದರೆ 64ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪುರಸ್ಕೃತ ‘ಮದಿಪು’ ಸಿನೆಮಾ ಮಾಡಿದ ಚೇತನ್‌ ಮುಂಡಾಡಿ ಅವರ ನಿರ್ದೇಶನದಲ್ಲಿ ಈಗ ಎರಡನೇ ಸಿನೆಮಾ ಸಿದ್ಧವಾಗಲಿದೆ.

ದನದ ವಿಚಾರ ಕರಾವಳಿಯಲ್ಲಿ ಬಹುದೊಡ್ಡ ರೀತಿಯಲ್ಲಿ ಬೇರೆ ಬೇರೆ ರೀತಿಯ ಆಯಾಮಗಳನ್ನು ಪಡೆಯುತ್ತದೆ. ಇದೇ ಕಾರಣಕ್ಕಾಗಿ ಗ್ರಾಮದೊಳಗಿನ ಅನ್ಯೋನ್ಯ ಸಂಬಂಧಗಳು ಕೂಡ ವಿಪರೀತ ಹಂತ ತಲುಪಿ, ಮನುಷ್ಯತ್ವವನ್ನೇ ಮರೆಯುವ ಸಂದರ್ಭವೂ ಎದುರಾಗಿದ್ದುಂಟು. ಆದರೆ, ಮನುಷ್ಯ ಸಂಬಂಧ ಇಷ್ಟಕ್ಕೆ ಸೀಮಿತವೇ? ಇದರಿಂದ ಹೊರತಾದ ಒಡನಾಟವಿಲ್ಲವೇ? ಈ ಎಲ್ಲ ವಿಚಾರಗಳ ಅಂಶಗಳನ್ನು ಮುಖ್ಯನೆಲೆಯಲ್ಲಿಟ್ಟು ಸಿನೆಮಾ ಮಾಡಲು ಚೇತನ್‌ ಮುಂದಾಗಿದ್ದಾರೆ.

ರಾಜಕೀಯ ಹಾಗೂ ಧರ್ಮದ ವಿಚಾರದಲ್ಲಿ ಗ್ರಾಮವೊಂದು ಯಾವ ಮಟ್ಟಕ್ಕೆ ಬದಲಾಗುತ್ತದೆ ಹಾಗೂ ಹಾಗೆ ಬದಲಾಗುವುದರಿಂದ ಏನು ಸಮಸ್ಯೆ ಎಂಬ ತಾತ್ವಿಕ ನೆಲೆಯಲ್ಲಿಟ್ಟು ಸಿನೆಮಾ ಮಾಡಲಿದ್ದಾರೆ. ಸಮಾಜದ ತಪ್ಪನ್ನು ಸಮಾಜಕ್ಕೆ ಹೇಳುವ, ಆ ಮೂಲಕ ಸಮಾಜದಲ್ಲಿ ಬದಲಾವಣೆಯ ಆಶಯ ಕಾಣುವುದೇ ಈ ಸಿನೆಮಾದ ಉದ್ದೇಶ ಎನ್ನುತ್ತಾರೆ ಚೇತನ್‌.

ಅಂದಹಾಗೆ ಈ ಸಿನೆಮಾದಲ್ಲಿ ಹೊಸ ಮುಖಗಳಿಗೆ ವಿಶೇಷ ಒತ್ತು ನೀಡಲಾಗುತ್ತದೆ. ಹೆಚ್ಚಾ ಕಡಿಮೆ ಮುಂದಿನ ತಿಂಗಳು ಈ ಸಿನೆಮಾ ಶೂಟಿಂಗ್‌ ಆರಂಭಿಸಲಿದೆ. ಗ್ರಾಮಾಂತರ ಭಾಗದ ಶಿಶಿಲ ವ್ಯಾಪ್ತಿಯಲ್ಲಿ ಸುಮಾರು 15 ದಿನ ಶೂಟಿಂಗ್‌ ನಡೆಯಲಿದೆ. ನಿರ್ಮಾಪಕರು ಯಾರು ಎಂಬುದು ಇನ್ನೂ ಫಿಕ್ಸ್‌ ಆಗಿಲ್ಲ. ತಾಂತ್ರಿಕವಾಗಿ ಚಿತ್ರವನ್ನು ಶ್ರೀಮಂತಿಕೆಯಿಂದ ತರಲು ನಿರ್ಧರಿಸಲಾಗಿದೆ.

ಈ ಸಿನೆಮಾದ ಇನ್ನೊಂದು ವಿಶೇಷವೆಂಬಂತೆ, ಇಲ್ಲಿ ಎಲ್ಲ ಭಾಷೆಗಳು ಕೂಡ ಇವೆ. ಹವ್ಯಕ ಕನ್ನಡವಿದೆ. ಕೊರಗ ಸಮಾಜದ ಭಾಷೆಯಿದೆ. ಬ್ಯಾರಿ ಭಾಷೆಯಿದೆ. ನಾಡ ತುಳುವಿದೆ. ಕನ್ನಡವೂ ಇದೆ. ಹೀಗಾಗಿ ಎಲ್ಲ ಭಾಷಿಗರು ಒಪ್ಪುವ ರೀತಿಯ ಸಿನೆಮಾವಾಗಿ ಹೊಸ ಸಿನೆಮಾ ಮೂಡಿಬರಲಿದೆ. ಸದ್ಯಕ್ಕೆ ಸಿನೆಮಾಕ್ಕೆ ಟೈಟಲ್‌ ಫಿಕ್ಸ್‌ ಮಾಡಿಲ್ಲ. ಒಂದು ವಾರದ ಒಳಗೆ ಟೈಟಲ್‌ ಅಂತಿಮಗೊಳ್ಳಲಿದೆ. ರಿಯಾಲಿಟಿ ಕಥೆಯನ್ನೇ ಇಟ್ಟುಕೊಂಡಿರುವ ಕಾರಣದಿಂದ ಈ ಸಿನೆಮಾ ವಿಭಿನ್ನ ನೆಲೆಯಲ್ಲಿ ಮೂಡಿಬರುವ ಸಾಧ್ಯತೆ ಇದೆ.

 ದಿನೇಶ್‌ ಇರಾ

ಟಾಪ್ ನ್ಯೂಸ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

ಪ್ರಜ್ವಲ್ ಪ್ರಕರಣವನ್ನು ವೈಯಕ್ತಿಕ ಎಂದ ಅಮಿತ್ ಶಾ ಕ್ಷಮೆ ಕೇಳಬೇಕು: ಸುಪ್ರಿಯಾ ಶ್ರಿನೇಟ್

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

Siddaramaiah ಚುನಾವಣೆ ನಂತರ ನಮ್ಮೊಂದಿಗೆ ಬರುತ್ತಾರೆ: ರಮೇಶ ಜಾರಕಿಹೊಳಿ

6-

Modi ಒಬ್ಬ ಸುಳ್ಳುಗಾರ: ಸಚಿವ ಸಂತೋಷ್ ಲಾಡ್ ಆರೋಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.