ಕರ್ಣಾಟಕ ಬ್ಯಾಂಕ್ 6,800 ಕೋ.ರೂ. ಕೃಷಿ ಮುಂಗಡ ಗುರಿ
Team Udayavani, Jul 20, 2017, 7:20 AM IST
ಮಂಗಳೂರು: ಕರ್ಣಾಟಕ ಬ್ಯಾಂಕ್ ಪ್ರಸಕ್ತ ಆರ್ಥಿಕ ವರ್ಷದಲ್ಲಿ 6,800 ಕೋಟಿ ರೂ. ಕೃಷಿ ಮುಂಗಡದ ಗುರಿ ಇರಿಸಿಕೊಂಡಿದೆ ಎಂದು ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್. ತಿಳಿಸಿದರು. ಬುಧವಾರ ಇಲ್ಲಿ ಜರಗಿದ ಬ್ಯಾಂಕಿನ ಕೃಷಿ ವ್ಯವಹಾರ ಸಮ್ಮೇಳನದಲ್ಲಿ ಅವರು ಆಶಯ ಭಾಷಣ ಮಾಡಿದರು.
ಈಗಾಗಲೇ ಶೇ. 18ರ ಕೃಷಿ ಮುಂಗಡ ಗುರಿಯನ್ನು ಬ್ಯಾಂಕ್ ಸಾಧಿಸಿದೆ. ಬಿಕ್ಕಟ್ಟಿನ ಸಂದರ್ಭದಲ್ಲಿ ಕೃಷಿಕರು- ರೈತರಿಗೆ ಸಕಾಲಿಕ ನೆರವು ಅಗತ್ಯವಿದೆ. ಬ್ಯಾಂಕಿನ ಅಧಿಕಾರಿಗಳು ಈ ಬಗ್ಗೆ ತತ್ಕ್ಷಣ ಸ್ಪಂದಿಸುವಂತೆ ಮಹಾಬಲೇಶ್ವರ ಅವರು ಸಲಹೆ ನೀಡಿದರು. ಕೃಷಿಕರು ದೇಶಕ್ಕೆ ಆಹಾರ ಭದ್ರತೆಯನ್ನು ಒದಗಿಸುವವರಾದ್ದರಿಂದ ಅವರ ಹಿತರಕ್ಷಣೆ ಆದ್ಯತೆಯ ಕಾರ್ಯ ಎಂದರು.
ಕೃಷಿ ಮುಂಗಡ, ಕೃಷಿ ಸಂಸ್ಕರಣ ಘಟಕ ಸಹಿತ ಗೋದಾಮು ಸೌಲಭ್ಯ. ಬಿತ್ತನೆ- ಸಾಗಾಟ, ಯಾಂತ್ರಿಕ ಕೃಷಿಗಾರಿಕೆಗೂ ಮುಂಗಡ ನೀಡಬೇಕೆಂದು ಹೇಳಿದರು. ಮಹಾಪ್ರಬಂಧಕ ಮುರಲೀಧರ ಕೃಷ್ಣ ರಾವ್ ಅವರು ಕೃಷಿ ಮುಂಗಡದ ಬಗ್ಗೆ ಮಾರ್ಗದರ್ಶನವಿತ್ತರು.
ಮುಖ್ಯ ಮಹಾಪ್ರಬಂಧಕ ರಾಘವೇಂದ್ರ ಭಟ್ ಎಂ., ಮಹಾಪ್ರಬಂಧಕರಾದ ಚಂದ್ರಶೇಖರ ರಾವ್ ಬಿ., ಸುಭಾಶ್ಚಂದ್ರ ಪುರಾಣಿಕ್, ಬಾಲಚಂದ್ರ ವೈ. ವಿ., ನಾಗರಾಜ ರಾವ್ ಬಿ. ಉಪಸ್ಥಿತರಿದ್ದರು. ಉಪಮಹಾಪ್ರಬಂಧಕ ವಿಜಯ ಶಂಕರ್ ರೈ ಕೆ.ವಿ. ಸ್ವಾಗತಿಸಿದರು. ಮುಖ್ಯ ಪ್ರಬಂಧಕ ವಿಜಯ್ ರಾಘವೇಂದ್ರ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
LS Polls: ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ: ರಾಘವೇಂದ್ರ
Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ
Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ