ಮಾದಕ ವ್ಯಸನಿಗಳಿಗೆ ಜೀವನ ಪಾಠ!

ಎರಡು ವರ್ಷಗಳಲ್ಲಿ 50ಕ್ಕೂ ಹೆಚ್ಚು ವ್ಯಸನಮುಕ್ತರ ಯಶೋಗಾಥೆ

Team Udayavani, May 5, 2019, 6:00 AM IST

Durgs

ಸಾಂದರ್ಭಿಕ ಚಿತ್ರ.

ಮಹಾನಗರ: “ಅವರೆಲ್ಲ ಮಾದಕ ವ್ಯಸನಕ್ಕೆ ಬಲಿಯಾಗಿ ದುರಂತ ಬದುಕು ಕಾಣುವ ಹಂತದಲ್ಲಿ ಅವರಿದ್ದರು. ಆದರೀಗ ವ್ಯಸನ ಮುಕ್ತರಾಗಿ ಸುಂದರ ಜೀವನ ಸಾಗಿಸುತ್ತಿದ್ದಾರೆ. ಅಷ್ಟೇ ಅಲ್ಲ, ವ್ಯಸನಿಗಳನ್ನು ಕರೆದು ಮನಃ
ಪರಿವರ್ತನೆಗೊಳಿಸಿ ವ್ಯಸನಮುಕ್ತರಾಗಿಸುವಲ್ಲಿ ಶ್ರಮಿಸುತ್ತಿದ್ದಾರೆ’.


ಮಾದಕ ವ್ಯಸನಿಗಳಾಗಿದ್ದವರೇ ವ್ಯಸನ ಮುಕ್ತರಾಗಿ ಯಶಸ್ವಿ ಜೀವನ ನಡೆಸು ವುದರೊಂದಿಗೆ ಮಾದಕ ವಸ್ತುಗಳ ದಾಸರಾ ಗದಂತೆ ವ್ಯಸನಿಗಳಿಗೆ ಜಾಗೃತಿ ಮೂಡಿ ಸುತ್ತಿರುವ ಯಶೋಗಾಥೆ ಇದು. ಇದೇ ಯಶಸ್ಸಿನ ಕಥೆಯಡಿ ಎರಡು ವರ್ಷ ಗಳಲ್ಲಿ ನಗರದಲ್ಲಿ 50ಕ್ಕೂ ಹೆಚ್ಚು ಮಂದಿ ವ್ಯಸನದಿಂದ ಮುಕ್ತರಾಗಿ ಬದುಕು ನಿರ್ಮಿಸುವಲ್ಲಿ ತೊಡಗಿಸಿಕೊಂಡಿದ್ದಾರೆ.

ನಾರ್ಕೋಟಿಕ್ಸ್‌ ಅನಾನಿಮಸ್‌ ಎಂಬ ಹೆಸರಿನಡಿ ಈ ಜಾಗೃತಿ ಕಾರ್ಯ ನಡೆ ಯುತ್ತಿದ್ದು, ನಗರದಲ್ಲಿ 2 ವರ್ಷಗಳ ಹಿಂದೆ ಆರಂಭ ವಾಗಿದೆ. ನೆಟ್‌ವರ್ಕ್‌ನಡಿ ತೊಡಗಿಸಿ ಕೊಂಡಿರುವ 12 ಮಂದಿ ಸ್ವತಃ ವ್ಯಸನ ಮುಕ್ತರಾಗಿದ್ದು ಪ್ರಸ್ತುತ ವ್ಯಸನಮುಕ್ತ ಸಮಾಜ ನಿರ್ಮಾ ಣಕ್ಕೆ ಸ್ವಯಂ ಸ್ಫೂರ್ತಿ ಯಿಂದ ತೊಡಗಿಸಿ ಕೊಂಡಿದ್ದಾರೆ.

1953ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಆರಂಭವಾದ ನಾರ್ಕೋಟಿಕ್‌ ಅನಾನಿ ಮಸ್‌ ತಂಡವು ಭಾರತಾದ್ಯಂತ ವಿವಿಧ ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಒಂದು ಕಾಲದಲ್ಲಿ ಮಾದಕದ್ರವ್ಯ ವ್ಯಸನಕ್ಕೆ ಒಳಗಾಗಿ ಹೊರ ಬಂದವರು ಈ ತಂಡ ಕಟ್ಟಿಕೊಂಡು ಇತರರನ್ನು ಆ ಚಟದಿಂದ ಎಳೆದು ತರುವಲ್ಲಿ ಶ್ರಮಿಸುತ್ತಿದ್ದಾರೆ.

ನಗರದಲ್ಲಿಯೂ ಕೆಲವು ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವುದಲ್ಲದೆ, ತಿಂಗಳಲ್ಲಿ ಎರಡು ದಿನ ವ್ಯಸನಿಗಳಿಗೆಂದೇ ಸಭೆ ನಡೆಸುತ್ತಾರೆ. ತಾವು ಮಾದಕ ದ್ರವ್ಯ ವ್ಯಸನಕ್ಕೊಳಗಾದ ಸಂದರ್ಭ ಅನುಭವಿಸಿದ ಕಷ್ಟ, ಅದರಿಂದ ಆಶ್ರಯಿಸಿದ ಕುಟುಂಬ ಮಂದಿಗಾದ ತೊಂದರೆಯನ್ನು ಭಾವನಾತ್ಮಕವಾಗಿ ತಿಳಿಸುವ ಮೂಲಕ ವ್ಯಸನಮುಕ್ತಾಗುವಂತೆ ವಿವಿಧ ಹಂತಗಳಲ್ಲಿ ಮನಃಪರಿವರ್ತನೆಗೆ ಪ್ರೇರೇಪಿಸಲಾಗುತ್ತದೆ. ಹೀಗೆ ದೊರಕಿದ ಪ್ರೇರಣೆಯಿಂದಾಗಿ ನಗರದಲ್ಲಿ ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಿಗಳು ಸಹಿತ ಐವತ್ತಕ್ಕೂ ಹೆಚ್ಚು ಮಂದಿ ವ್ಯಸನಮುಕ್ತರಾಗಿದ್ದಾರೆ. ವ್ಯಸನಮುಕ್ತರಾಗಿ ಜಾಗೃತಿ ಮೂಡಿಸುತ್ತಿರುವ ಮಂದಿ ಸೋದ್ಯೋಗ, ಇತರ ಉದ್ಯೋಗಗಳಲ್ಲಿ ತೊಡಗಿಸಿಕೊಂಡು ಕೈತುಂಬ ಸಂಬಳ ಪಡೆಯುತ್ತಿದ್ದಾರೆ ಎನ್ನುತ್ತಾರೆ ವ್ಯಸನಮುಕ್ತರಾಗಿ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡ ವ್ಯಕ್ತಿಯೊಬ್ಬರು.

ಕಾಲೇಜಿನಲ್ಲಿ ಡ್ರಗ್ಸ್‌ ಚಟಕ್ಕೆ ಬಲಿಯಾದೆ
ಜಾಗೃತಿ ಮೂಡಿಸುತ್ತಿರುವ ಹೆಸರು ಹೇಳಲಿಚ್ಛಿಸದ ಯುವಕನೋರ್ವ ಹೇಳುವ ಪ್ರಕಾರ, ತಾನು ಕಾಲೇಜು ಹಂತದಲ್ಲಿ ಡ್ರಗ್ಸ್‌ ಚಟಕ್ಕೆ ಬಲಿಯಾದೆ. ನಶೆ, ಗಮ್ಮತ್ತಿಗೋಸ್ಕರ ಸೇವನೆ ಮಾಡುತ್ತಿದ್ದದ್ದು ಚಟವಾಗಿ ಬೆಳೆಯಿತು. ಅದರಿಂದ ಹೊರಬರಲಾರದೆ ತುಂಬ ನರಕ ಅನುಭವಿಸಿದ್ದೆ. ಕೊನೆಗೆ ನಾರ್ಕೋಟಿಕ್‌ ಅನಾ ನಿಮಸ್‌ ಸಂಪರ್ಕ ಬೆಳೆದು, ಇಲ್ಲಿ ಸೇರಿಕೊಂಡೆ. ಅನಂತರ ಮನಃಪರಿವರ್ತನೆಯಾಗಿ ಈಗ ಯಶಸ್ವಿ ಜೀವನ ನಡೆಸುತ್ತಿದ್ದೇನೆ. ಜತೆಗೆ ವ್ಯಸನಿಗಳ ಮನಃ ಪರಿವರ್ತಿ ಸುವುದರಲ್ಲಿ ತೊಡಗಿಸಿಕೊಂಡಿದ್ದೇನೆ ಎನ್ನುತ್ತಾರೆ.

ವಿದ್ಯಾರ್ಥಿಗಳೇ ಹೆಚ್ಚು!
ದುರಂತವೆಂದರೆ, ಈ ತಂಡ ನಡೆಸುವ ಮಾದಕದ್ರವ್ಯ ವಿರುದ್ಧ ಜಾಗೃತಿ ಸಭೆಗೆ ಬರುವ ಬಹುತೇಕರು ಕಾಲೇಜು ವಿದ್ಯಾರ್ಥಿಗಳೇ. ಸ್ನೇಹಿತರ ಸಹವಾಸ, ನಶೆಗಾಗಿ, ಓದುವ ಒತ್ತಡ ಮುಂತಾದವುಗಳಿಂದಾಗಿ ತೆಗೆದುಕೊಳ್ಳುವುದಾಗಿ ಹೇಳುತ್ತಾರೆ. ಆದರೆ, ಅದರಿಂದಾಗುವ ಅನಾಹುತಗಳ ಬಗ್ಗೆ ಅವರಿಗೆ ಅರಿವಿರುವುದಿಲ್ಲ. ಪೋಷಕರ ಒತ್ತಾಯಕ್ಕೆ ಮಣಿದೋ, ಸ್ವಯಂ ಆಸಕ್ತಿಯಿಂದಲೋ ನಾರ್ಕೋಟಿಕ್‌ ಅನಾನಿಮಸ್‌ ಸಭೆಗೆ ಹಾಜರಾಗುತ್ತಾರೆ. ಅಂತಹವರಿಗೆ ನಮ್ಮದೇ ಜೀವನದಲ್ಲಿ ನಡೆದ ಕೆಟ್ಟ ಅನುಭವಗಳನ್ನು ವಿವರಿಸಿ ಮನಃ ಪರಿವರ್ತನೆ ಮಾಡುತ್ತೇವೆ. ಮುಕ್ತ ಸಂವಾದ (ಪೋಷಕರು, ಹಿತೈಷಿಗಳ ಜತೆಗೆ) ಮತ್ತು ವೈಯಕ್ತಿಕ ಸಂವಾದಗಳನ್ನು ನಡೆಸಿ ಅವರನ್ನು ಮಾದಕ ವ್ಯಸನದಿಂದ ಎಳೆದು ತರುವ ಪ್ರಯತ್ನ ಮಾಡುತ್ತೇವೆ. ಎಲ್ಲರನ್ನು ಪರಿವರ್ತಿಸಲು ಸಾಧ್ಯವಾಗದಿದ್ದರೂ ಬಹುತೇಕರು ಅರ್ಥೈಸಿಕೊಂಡು ಮಾದಕ ವ್ಯಸನದಿಂದ ಹೊರಬರುತ್ತಾರೆ ಎನ್ನುತ್ತಾರವರು.

12 ಹಂತದ ಕಾರ್ಯಕ್ರಮ
ಸಂಸ್ಥೆಗೆ ಆಗಮಿಸುವವರನ್ನು ಮಾದಕವ್ಯಸನ ಮುಕ್ತಗೊಳಿಸುವುದಕ್ಕಾಗಿ ಒಟ್ಟು 12 ಹಂತದ ಕಾರ್ಯಕ್ರಮಗಳಿರುತ್ತವೆ. ಎಡಿಕ್ಟ್ ಹಂತದಲ್ಲಿ ವ್ಯಸನಮುಕ್ತರಾದವರಿಂದ ವ್ಯಸನಿಗಳಿಗೆ ಜೀವನಪಾಠ, ಎರಡನೇ ಹಂತದಲ್ಲಿ ವ್ಯಸನದಿಂದಾಗುವ ಅನಾಹುತಗಳ ಬಗ್ಗೆ ತಿಳಿದುಕೊಳ್ಳಲು ಪುಸ್ತಕಗಳನ್ನು ಓದಿಸಲಾಗುತ್ತದೆ. ಬಳಿಕ ವ್ಯಸನಕ್ಕೊಳಗಾದವರೊಂದಿಗೆ ವೈಯಕ್ತಿಕ ಸಂವಾದ, ಸಭೆ ನಡೆಸುವ ಇತರರು ಮತ್ತು ವ್ಯಸನಿಗಳ ನಡುವೆ ಮುಕ್ತ ಸಂವಾದ ಸಹಿತ ವಿವಿಧ ಹಂತಗಳಲ್ಲಿ ಕಾರ್ಯಕ್ರಮ ನಡೆಯುತ್ತದೆ.

ಡ್ರಗ್‌ ವ್ಯಸನಿಗಳಾಗುತ್ತಿರುವ
ಮಹಿಳೆಯರು!
ಡ್ರಗ್ಸ್‌ ತೆಗೆದುಕೊಳ್ಳುವುದರಲ್ಲಿ ಪುರುಷರಷ್ಟೇ ಅಲ್ಲದೆ, ಮಹಿಳೆಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಾರ್ಕೋಟಿಕ್‌ ಅನಾನಿಮಸ್‌ ಸದಸ್ಯರ ಅನುಭವದ ಪ್ರಕಾರ, ಶೇ. 60ರಷ್ಟು ಪುರುಷರು ಮಾದಕದ್ರವ್ಯಗಳ ದಾಸರಾದರೆ, ಶೇ. 40ರಷ್ಟು ಮಹಿಳೆಯರು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ.

-  ಧನ್ಯಾ ಬಾಳೆಕಜೆ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.