ನಕ್ಷತ್ರಗಳಿಂದ ಕಂಗೊಳಿಸುತ್ತಿದೆ ಮಾರುಕಟ್ಟೆ 


Team Udayavani, Dec 17, 2018, 11:50 AM IST

17-december-4.gif

ಬೆಳ್ತಂಗಡಿ : ಇದೀಗ ಮಾರುಕಟ್ಟೆಯಲ್ಲಿ ಕ್ರಿಸ್ಮಸ್‌ ಹಬ್ಬದ ಅಂಗವಾಗಿ ವೈವಿಧ್ಯಮಯ ನಕ್ಷತ್ರ (ಸ್ಟಾರ್‌)ಗಳು ಸಹಿತ ಇತರ ಆಲಂಕಾರಿಕ ವಸ್ತುಗಳು ಲಗ್ಗೆ ಇಟ್ಟಿವೆ. ಜತೆಗೆ ಕ್ರಿಸ್ಮಸ್‌ ಖರೀದಿಯ ಭರಾಟೆಯೂ ಆರಂಭಗೊಂಡಿದೆ. ಕ್ರೈಸ್ತರ ಪ್ರಮುಖ ಹಬ್ಬ ಕ್ರಿಸ್ಮಸ್‌ಗೆ ಪ್ರತಿ ಮನೆಯ ಮುಂದೆಯೂ ಬಣ್ಣ ಬಣ್ಣದ ನಕ್ಷತ್ರಗಳು ಸಾಮಾನ್ಯವಾಗಿದ್ದು, ಜತೆಗೆ ಅಂಗಳದಲ್ಲಿ ಗೋದಲಿಯೂ ಪ್ರಮುಖ ಸ್ಥಾನ ಪಡೆಯುತ್ತಿದೆ. ಹಬ್ಬಕ್ಕೆ ಕೆಲವು ದಿನಗಳ ಮುಂಚೆಯೇ ಅವುಗಳನ್ನು ಸಿದ್ಧಪಡಿಸಿ, ಮೊಳಕೆ ಬರುವಂತಹ ಕೆಲವೊಂದು ಧಾನ್ಯಗಳನ್ನೂ ಹಾಕಿರುತ್ತಾರೆ. ಅಂತಹ ಗೋದಲಿಗಳ ಅಲಂಕಾರಕ್ಕೆ ಬಳಸುವ ಪರಿಕರ (ಕ್ರಿಬ್‌)ಗಳು ಕೂಡ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿವೆ. ಬೆಳ್ತಂಗಡಿಯ ಬಹುತೇಕ ಫ್ಯಾನ್ಸಿ ಅಂಗಡಿಗಳು ಬಣ್ಣ ಬಣ್ಣದ ನಕ್ಷತ್ರಗಳಿಂದ ತುಂಬಿಹೋಗಿವೆ. ಈಗಾಗಲೇ ಬಹುತೇಕ ಮಂದಿ ನಕ್ಷತ್ರಗಳನ್ನು ಖರೀದಿಸಿದ್ದು, ಕ್ರಿಸ್ಮಸ್‌ ಹಿಂದಿನ ದಿನದವರೆಗೂ ವ್ಯಾಪಾರ ಜೋರಾಗಿಯೇ ನಡೆಯುತ್ತದೆ ಎಂದು ವರ್ತಕರು ಅಭಿಪ್ರಾಯಿಸುತ್ತಾರೆ.

ಕ್ರಿಸ್ಮಸ್‌ ಟ್ರಿ
ಈ ಹಬ್ಬದ ಸಂದರ್ಭದಲ್ಲಿ ಕ್ರಿಸ್ಮಸ್‌ ಟ್ರಿಗಳಿಗೂ ವಿಶೇಷ ಬೇಡಿಕೆ ಇದೆ. ಅದಕ್ಕಾಗಿಯೇ ಗಿಡದಂತಹ ವಿನ್ಯಾಸಗಳು ಕೂಡ ಮಾರುಕಟ್ಟೆಯಲ್ಲಿವೆ. ಅದರ ಅಂದವನ್ನು ಹೆಚ್ಚಿಸುವ ಬಾಲ್‌ಗ‌ಳ ಗೊಂಚಲು, ಬೆಲ್‌ಗ‌ಳ ಗೊಂಚಲು, ಸಣ್ಣ ಸಣ್ಣ ಸ್ಟಾರ್‌ಗಳು ಕೂಡ ಮಾರುಕಟ್ಟೆಯಲ್ಲಿ ಸಿಗುತ್ತಿವೆ.

ಆಲಂಕಾರಿಕ ವಸ್ತುಗಳು
ಇದರ ಜತೆಗೆ ವಿವಿಧ ಲೈಟಿಂಗ್‌ಗಳು ಕೂಡ ವಿಶೇಷ ಮೆರುಗನ್ನು ಪಡೆದಿದೆ. ಮೇರಿ ಕ್ರಿಸ್ಮಸ್‌ ಎಂಬ ವಿನ್ಯಾಸಗಳು, ಎಲೆಕ್ಟ್ರಾನಿಕ್‌ ನಕ್ಷತ್ರಗಳು ಹೀಗೆ ಹತ್ತಾರು ಬಗೆಯ ಆಲಂಕಾರಿಕ ವಸ್ತುಗಳಿಗೆ ಕ್ರಿಸ್ಮಸ್‌ ಸಂದರ್ಭ ಬೇಡಿಕೆ ಇದ್ದು, ಡಿಸೆಂಬರ್‌ ತಿಂಗಳ ಆರಂಭದಲ್ಲೇ ಅವುಗಳು ಮಾರುಕಟ್ಟೆಯನ್ನು ಪ್ರವೇಶಿಸಿವೆ. ಒಂದು ಮನೆಯ ಮುಂದೆ ಹತ್ತಾರು ವಿನ್ಯಾಸದ ನಕ್ಷತ್ರಗಳನ್ನು ಬಳಸುವುದರಿಂದ ಮಾರುಕಟ್ಟೆಯಲೂ ವಿಶೇಷ ಬೇಡಿಕೆಯನ್ನು ಪಡೆಯುತ್ತದೆ. ಮಾರುಕಟ್ಟೆಗಳಲ್ಲಿ ಅದನ್ನು ಅಚ್ಚುಕಟ್ಟಾಗಿ ಜೋಡಿಸಿರುವುದನ್ನೇ ಕಂಡು ಸಾಕಷ್ಟು ಮಂದಿ ಖರೀದಿಗೆ ಮುಂದಾಗುತ್ತಾರೆ.

100 ರೂ.ನಿಂದ ಆರಂಭ
ಸಾಮಾನ್ಯವಾಗಿ ಮನೆಗಳಲ್ಲಿ ಜೋತು ಹಾಕುವಂತಹ ನಕ್ಷತ್ರಗಳು ಬೆಳ್ತಂಗಡಿಯ ಮಾರುಕಟ್ಟೆಯಲ್ಲಿ 100 ರೂ.ನಿಂದ ಆರಂಭಗೊಂಡರೆ, 400 ರೂ.ಗಳ ವರೆಗಿನ ನಕ್ಷತ್ರಗಳಿಗೂ ಇಲ್ಲಿ ಬೇಡಿಕೆ ಇದೆ. ಜತೆಗೆ ಸಣ್ಣ ಸಣ್ಣ ಸ್ಟಾರ್‌ಗಳೂ ಲಭ್ಯವಿವೆ. ಪ್ರತಿ ಅಂಗಡಿಗಳಲ್ಲೂ ಸುಮಾರು 50ಕ್ಕೂ ಅಧಿಕ ವಿನ್ಯಾಸಗಳ ನಕ್ಷತ್ರಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಇದರ ಜತೆಗೆ ಸಾಂತಾಕ್ಲಾಸ್‌ ಟೋಪಿ, ಮುಖವಾಡಗಳು ಲಭ್ಯವಿದ್ದು, ಉತ್ತಮ ಬೇಡಿಕೆಯಲ್ಲಿವೆ.

ಖರೀದಿ ಭರಾಟೆ ಆರಂಭ
ಕ್ರಿಸ್ಮಸ್‌ ಸಂದರ್ಭ ನಕ್ಷತ್ರಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಡಿಸೆಂಬರ್‌ ಆರಂಭದಲ್ಲೇ ನಕ್ಷತ್ರಗಳನ್ನು ತರಿಸುತ್ತೇವೆ. ಈಗಾಗಲೇ ಹಬ್ಬದ ಖರೀದಿಯ ಭರಾಟೆ ಆರಂಭಗೊಂಡಿದೆ. ನಕ್ಷತ್ರಗಳ ಜತೆಗೆ ಕ್ರಿಸ್ಮಸ್‌ ಟ್ರಿ, ಕ್ರಿಬ್‌, ಸಾಂತಾಕ್ಲಾಸ್‌ ಟೋಪಿ, ಮುಖವಾಡಗಳಿಗೂ ಹೆಚ್ಚಿನ ಬೇಡಿಕೆ ಇದೆ.
– ಗೋಪಾಲಕೃಷ್ಣ ಭಟ್‌
ಫ್ಯಾನ್ಸಿ ಉದ್ಯಮಿ, ಬೆಳ್ತಂಗಡಿ

‡ ಕಿರಣ್‌ ಸರಪಾಡಿ

ಟಾಪ್ ನ್ಯೂಸ್

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ

Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

Pen Drive ಹಗರಣದ ನಡುವೆ ರಾಜ್ಯದ ಎರಡನೇ ಹಂತದ ಬಹಿರಂಗ ಪ್ರಚಾರ ಅಂತ್ಯ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

Arun Shahapur ಸೋಲಿನ ಭೀತಿಯಿಂದ ಜಿಗಜಿಣಗಿ ವಿರುದ್ಧ ಆಲಗೂರ ಅಪಪ್ರಚಾರ

ಯತ್ನಾಳ್ ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.