ಇಂದು ವಿಧಾನ ಪರಿಷತ್ ಚುನಾವಣೆ: ಮಂಗಳೂರು ತಾಲೂಕಿನ 40 ಕೇಂದ್ರದಲ್ಲಿ ಮತದಾನ
Team Udayavani, Dec 10, 2021, 3:10 AM IST
ಮಹಾನಗರ: ವಿಧಾನ ಪರಿಷತ್ ಚುನಾವಣೆ ಶುಕ್ರವಾರ ನಡೆಯಲಿದ್ದು, ಪಾಲಿಕೆ ಸಹಿತ ತಾಲೂಕು ವ್ಯಾಪ್ತಿಯ 40 ಮತದಾನ ಕೇಂದ್ರಗಳಲ್ಲಿ ಸರ್ವ ತಯಾರಿ ನಡೆಸಲಾಗಿದೆ.
ಮತದಾನ ಹಿನ್ನೆಲೆಯಲ್ಲಿ ಪೂರ್ವಭಾವಿ ಯಾಗಿ ಗುರುವಾರ ಮಸ್ಟರಿಂಗ್ ಕೇಂದ್ರ ಗಳಿಂದ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ-ಸಿಬಂದಿ, ಭದ್ರತಾ ಸಿಬಂದಿ ಸಹಿತ ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವವರು ತಮಗೆ ನಿಯೋಜಿಸಿರುವ ಮತಗಟ್ಟೆಗಳಿಗೆ ಚುನಾವಣ ಆಯೋಗ ನಿಗದಿಪಡಿಸಿದ ವಾಹನಗಳಲ್ಲಿ ತೆರಳಿದರು.
ಮಸ್ಟರಿಂಗ್ ಕೇಂದ್ರಗಳಲ್ಲಿ ಮತಪೆಟ್ಟಿಗೆ, ಮತಪತ್ರ, ಚುನಾವಣೆ ಸಾಮಗ್ರಿಗಳನ್ನು ನೀಡಿ ಪೊಲೀಸ್ ಭದ್ರತೆಯೊಂದಿಗೆ ಕಳುಹಿಸಿ ಕೊಡಲಾಯಿತು. ಇದಲ್ಲದೆ ಭದ್ರತೆಗೆ ಪೊಲೀಸ್ ಸಿಬಂದಿ, ಕೊರೊನಾ ಮುನ್ನೆಚ್ಚರಿಕೆ ಕ್ರಮವಾಗಿ ಆಶಾ ಕಾರ್ಯಕರ್ತೆಯರು ಕೂಡ ಜತೆಗಿದ್ದರು.
ಮಂಗಳೂರು ತಾಲೂಕಿನಲ್ಲಿ 37 ಗ್ರಾಮ ಪಂಚಾಯತ್ಗಳಲ್ಲಿ ಮತದಾನಕ್ಕೆ ಸಿದ್ಧತೆ ನಡೆಸಲಾಗಿದೆ. ಜತೆಗೆ ಮಂಗಳೂರು ಮಹಾನಗರ ಪಾಲಿಕೆ, ಉಳ್ಳಾಲ ಪುರಸಭೆ, ಮೂಲ್ಕಿ ಪುರಸಭೆಗಳಲ್ಲಿ ಮತದಾನ ನಡೆಯಲಿದೆ. ಮತದಾನ ಸಾಂಗವಾಗಿ ನೆರವೇರಿಸುವ ಸಂಬಂಧ ಒಟ್ಟು 48 ಮತಗಟ್ಟೆ ಅಧಿಕಾರಿಗಳು, 48 ಇತರ ಅಧಿಕಾರಿಗಳು, 48 ಚುನಾವಣೆ ವೀಕ್ಷಕರು ಹಾಗೂ 48 ಡಿ ಗ್ರೂಫ್ ನೌಕರರನ್ನು ನಿಯೋಜಿಸಲಾಗಿದೆ.
ಮತದಾನ ಹಿನ್ನೆಲೆಯಲ್ಲಿ ಮಂಗ ಳೂರು ತಾಲೂಕು ವ್ಯಾಪ್ತಿಗೆ 12 ಮ್ಯಾಕ್ಸಿ ಕ್ಯಾಬ್, 8 ಜೀಪು ಹಾಗೂ 1 ಹೆಚ್ಚುವರಿ ವಾಹನ ಸೇರಿದಂತೆ 21 ವಾಹನಗಳನ್ನು ಬಳಸಲಾಗುತ್ತದೆ. ಚುನಾವಣೆ ಹಿನ್ನೆಲೆ ಯಲ್ಲಿ ಗರಿಷ್ಠ ಭದ್ರತೆ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಪ್ರತಿಯೊಂದು ಮತಗಟ್ಟೆಗೆ ಪೊಲೀಸ್ ಸಿಬಂದಿ ನಿಯೋಜಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ