ದಾನಿಗಳ ನೆರವು: ಮಾದರಿ ನವಜೀವನ ಅಂಗನವಾಡಿ ಕೇಂದ್ರ ಉದ್ಘಾಟನೆಗೆ ಸಿದ್ಧ


Team Udayavani, Dec 23, 2018, 10:58 AM IST

23-december-5.gif

ಬಂಟ್ವಾಳ : ರಾಷ್ಟ್ರದಲ್ಲಿ ಗರಿಷ್ಠ ಸಂಖ್ಯೆಗಳ ಅಂಗನವಾಡಿ ಕೇಂದ್ರವನ್ನು ಹೊಂದಿರುವ ತಾಲೂಕು ಬಂಟ್ವಾಳ. ಇದೀಗ ಅದೇ ಸಾಲಿಗೆ ಸೇರುವ ಇನ್ನೊಂದು ದಾಖಲೆಯೂ ಬಂಟ್ವಾಳ ತಾಲೂಕು ನರಿಕೊಂಬು ಗ್ರಾಮದ ನವಜೀವನ ಅಂಗನವಾಡಿ ಕೇಂದ್ರಕ್ಕೆ ಸಲ್ಲುತ್ತದೆ.

ಸುಮಾರು 18.50 ಲಕ್ಷ ರೂ. ವೆಚ್ಚದಿಂದ ನಿರ್ಮಾಣ ಆಗಿರುವ ಈ ಅಂಗನವಾಡಿ ಕೇಂದ್ರ ದಾನಿಗಳ ಸಹಯೋಗದಲ್ಲಿ 6 ಸಿಲಿಂಗ್‌ ಫ್ಯಾನ್‌, ಒಂದೂವರೆ ಟನ್‌ ತೂಕದ 2 ಎ.ಸಿ. ಯಂತ್ರಗಳು, ಧ್ವಜಸ್ತಂಭ, ಕಿಟಿಕಿ ಬಾಗಿಲಿನ ಕರ್ಟನ್‌, ಟ್ಯೂಬ್‌ಲೈಟ್‌, ಎಲ್‌ಇಡಿ ಬಲ್ಬ್, ನೇತ್ರಾವತಿ ನರ್ಸರಿ ಅವರಿಂದ ಉಚಿತ ಹಸುರೀಕರಣ, ಗೋಡೆ ಪಟ್ಟಿ ಫಿನಿಶ್‌ ಮಾಡಲಾಗಿದೆ. ಎನ್‌ಆರ್‌ಜಿ ಯೋಜನೆಯಲ್ಲಿ ನಿರ್ಮಿತ ಜಿಲ್ಲೆಯ ಪ್ರಥಮ ಅಂಗನವಾಡಿ ಎಂಬ ಕೀರ್ತಿಯೂ ನರಿಕೊಂಬು ಗ್ರಾಮಕ್ಕೆ ಸಲ್ಲುತ್ತದೆ.

ಹವಾನಿಯಂತ್ರಿತ ಸೌಲಭ್ಯ
ಸುಸಜ್ಜಿತ ಈ ಅಂಗನವಾಡಿ ಡಿ. 24 ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳ ಸಾಧನೆಯ ಸಾಕಾರವಾಗಿ ಮೂಡಿಬಂದಿದೆ. ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 560 ಅಂಗನವಾಡಿ ಕೇಂದ್ರಗಳಿವೆ. ಇದನ್ನು ಆಡಳಿತಾತ್ಮಕವಾಗಿ ವಿಟ್ಲ ಮತ್ತು ಬಂಟ್ವಾಳ ಎಂದು ವಿಭಾಗಿಸಿದ್ದು, ಬಂಟ್ವಾಳ ವಿಭಾಗದಲ್ಲಿ 331, ವಿಟ್ಲ ವಿಭಾಗದಲ್ಲಿ 229 ಅಂಗನವಾಡಿಗಳಿವೆ. ಬಂಟ್ವಾಳ ವಿಭಾಗದಲ್ಲಿ ಶಂಭೂರು ಗ್ರಾಮದ ಶಂಭೂರು ಅಂಗನವಾಡಿ ಮತ್ತು ರಾಯಿ ಗ್ರಾಮದ ಗಾಡಿಪಲ್ಕೆ ಅಂಗನವಾಡಿ ಸರಕಾರದ ಅನುದಾನದಲ್ಲಿ ಹವಾನಿಯಂತ್ರಿತ ಸೌಲಭ್ಯ ಹೊಂದಿದೆ. ಇದೀಗ 3ನೆಯದಾಗಿ ನವಜೀವನ ಅಂಗನವಾಡಿ ಜನತೆಯ ಸಹಭಾಗಿತ್ವದಲ್ಲಿ ಹವಾ ನಿಯಂತ್ರಿತ ಸೌಲಭ್ಯ ಹೊಂದಿದೆ.

ನಾಳೆ ಉದ್ಘಾಟನೆ 
ನವಜೀವನ ಅಂಗನವಾಡಿ ಕೇಂದ್ರವನ್ನು ಡಿ. 24ರಂದು ಬೆಳಗ್ಗೆ 10.30 ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಉದ್ಘಾಟಿಸಲಿದ್ಧಾರೆ. ಶಾಸಕ ರಾಜೇಶ ನಾೖಕ್‌ ಉಳಿಪ್ಪಾಡಿಗುತ್ತು ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಗ್ರಾ.ಪಂ. ಅಧ್ಯಕ್ಷ ಯಶೋದರ ಕರ್ಬೆಟ್ಟು ಅಧ್ಯಕ್ಷತೆ ವಹಿಸುವರು ಎಂದು ಅಧ್ಯಕ್ಷ ರವೀಂದ್ರ ಸಪಲ್ಯ ತಿಳಿಸಿದ್ದಾರೆ.

ಹೂಗಿಡಗಳು, ಬಣ್ಣಬಣ್ಣದ ಚಿತ್ತಾರ 
ಸುಸಜ್ಜಿತ ಕಟ್ಟಡದ ಸುತ್ತಲೂ ಆವರಣ ಗೋಡೆ, ಒಳಾಂಗಣದಲ್ಲಿ ಸೆಲ್ಫ್, ವರಾಂಡದಲ್ಲಿ ಸುವಾಸನೆ ಬೀರುವ ಹೂಗಿಡಗಳಿಂದ ಅಲಂಕೃತವಾಗಿದೆ. ಗೋಡೆಗಳಲ್ಲಿ ಬಣ್ಣಬಣ್ಣಗಳ ಚಿತ್ತಾರಗಳನ್ನು ಕಣ್ಮನ ಸೆಳೆಯುವಂತೆ ನಿರ್ಮಿಸುವ ಮೂಲಕ ಹೊಸ ಮಾದರಿಯನ್ನು ಸೃಷ್ಟಿಸಲಾಗಿದೆ. ವಿಸ್ತಾರವಾದ ಒಳಾಂಗಣ, ಹೊರಾಂಗಣ, ಭೋಜನಾಲಯ, ದಾಸ್ತಾನು ಕೊಠಡಿ, ಆಧುನಿಕ ಮಾದರಿ ಅಡುಗೆ ಕೋಣೆ, ಸ್ನಾನಗೃಹ, ಆಂಗ್ಲ ಮಾದರಿ ಮತ್ತು ಸ್ಥಳೀಯ ಮಾದರಿ ಶೌಚಾಲಯ ಮತ್ತಿತರ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಕಟ್ಟಡವು ಐದು ಸೆಂಟ್ಸ್‌ನಲ್ಲಿ 1,180 ಚ. ಅ. ವಿಸ್ತೀರ್ಣ ಹೊಂದಿದೆ., ಅಂಗಳಕ್ಕೆ ಸಂಪೂರ್ಣ ಇಂಟರ್‌ ಲಾಕ್‌ ಅಳವಡಿಕೆ ಮಾಡಲಾಗಿದೆ. ಗೋಡೆಯಲ್ಲಿ ವಿವಿಧ ಅಲಂಕಾರಿಕ ಭಿತ್ತಿಚಿತ್ರಗಳನ್ನು ರಚಿಸಲಾಗಿದೆ. 1991ರಲ್ಲಿ ಇಲ್ಲಿನ ನವಜೀವನ ವ್ಯಾಯಾಮ ಶಾಲೆಯಲ್ಲಿ ಅಂಗನವಾಡಿ ಕೇಂದ್ರ ಆರಂಭವಾಗಿತ್ತು, ಹಾಗಾಗಿ ಇದಕ್ಕೆ ನವಜೀವನ ಅಂಗನವಾಡಿ ಕೇಂದ್ರ ಎಂದೇ ಪುನರ್‌ ನಾಮಕರಣ ಮಾಡಲಾಗಿದೆ.

3 ದಶಕಗಳ ಹಿಂದಿನ ಅಂಗನವಾಡಿಯನ್ನು ಸಂಪೂರ್ಣ ಪುನರ್‌ ನಿರ್ಮಿಸಿ ಸರ್ವ ಸೌಲಭ್ಯದೊಂದಿಗೆ ವಿಶೇಷವಾದ ಮಾದರಿಯಲ್ಲಿ ನಿರ್ಮಾಣ ಆಗಿದೆ. ಮೂಲ ಸೌಲಭ್ಯ ಒದಗಿಸಲಾಗಿದೆ.
ರವೀಂದ್ರ ಸಪಲ್ಯ,
  ಅಧ್ಯಕ್ಷರು, ಬಾಲ ವಿಕಾಸ ಸಮಿತಿ

ಮುಂದಿನ ಕ್ರಿಯಾ ಯೋಜನೆಯಲ್ಲಿ ತಾ.ಪಂ. ಅಧ್ಯಕ್ಷ -ಉಪಾಧ್ಯಕ್ಷರ ವತಿಯಿಂದ ಅನುದಾನ ಒದಗಿಸಲು ಆಡಳಿತವು ಚರ್ಚಿಸಿ ತೀರ್ಮಾನಿಸುವುದು.
– ಅಬ್ಟಾಸ್‌ ಅಲಿ
ಉಪಾಧ್ಯಕ್ಷರು, ತಾ.ಪಂ. ಬಂಟ್ವಾಳ 

ಸರ್ವರ ಸಹಕಾರ
2017ರ ಸೆ. 9ರಂದು ಶಿಲಾನ್ಯಾಸ ಮಾಡಲಾಗಿತ್ತು. ಗುತ್ತಿಗೆದಾರ ಶೈಲೇಶ್‌ ಕುಚ್ಚಿಗುಡ್ಡೆ ಗುತ್ತಿಗೆ ನಿರ್ವಹಿಸಿದ್ದರು. 5 ಲಕ್ಷ ರೂ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 3 ಲಕ್ಷ ರೂ., ಸತ್ಯದೇವತಾ ಚಾರಿಟೆಬಲ್‌ ಟ್ರಸ್ಟ್‌ ನಿಂದ 30 ಸಾವಿರ ರೂ. ದೇಣಿಗೆ, ವಿವಿಧ ಜನಪ್ರತಿನಿಧಿಗಳ ಭರವಸೆಯಂತೆ ಉಳಿಕೆ 10. 50 ಲಕ್ಷ ರೂ. ವೆಚ್ಚವನ್ನು ಮಾಡಲಾಗಿದೆ. ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ ಅವರು ಅನುದಾನ ಒದಗಿಸುವ ಭರವಸೆ ನೀಡಿದ್ದಾರೆ.
– ಯಶೋದರ ಕರ್ಬೆಟ್ಟು
ಅಧ್ಯಕ್ಷರು, ನರಿಕೊಂಬು ಗ್ರಾ.ಪಂ.

ವಿಶೇಷ ವರದಿ 

ಟಾಪ್ ನ್ಯೂಸ್

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.