ಮನೆ ನಿರ್ಮಾಣದ ಬಹುತೇಕ ಕೆಲಸ ಒಬ್ಬರೇ ಮುಗಿಸಿದರು!


Team Udayavani, Nov 16, 2018, 11:09 AM IST

16-november-4.gif

ಸವಣೂರು: ಸವಣೂರು ಗ್ರಾಮದ ಮಾಂತೂರು ನಿವಾಸಿ ಫಾರೂಕ್‌ ಅವರು ಒಬ್ಬಂಟಿಯಾಗಿ ತನ್ನ ಮನೆಯ ಶೇ. 75ರಷ್ಟು ಕೆಲಸಕಾರ್ಯಗಳನ್ನು ತಾನೊಬ್ಬನೇ ಮಾಡಿ ಮುಗಿಸಿದ್ದಾರೆ. ಮನೆಯ ತಾರಸಿ ಹೊರತುಪಡಿಸಿ ಅಡಿಪಾಯದಿಂದ ಹಿಡಿದು ಗೋಡೆ ಕಟ್ಟಿ, ಸಾರಣೆಯ ತನಕದ ಕೆಲಸವನ್ನು ಯಾರ ನೆರವು ಇಲ್ಲದೆ ಏಕಾಂಗಿಯಾಗಿ ಮಾಡಿದ್ದಾರೆ. ಮರ ಕೊಯ್ಯುವ ಯಂತ್ರದ ಆಪರೇಟರ್‌ ಆಗಿ ವೃತ್ತಿ ನಿರ್ವಹಿಸುತ್ತಿರುವ ಫಾರೂಕ್‌ ಸಕಲ ಕಲಾ ವಲ್ಲಭರು ಎಂದರೆ ತಪ್ಪಾಗಲಾರದು.

ಮನೆಯ ಎಲೆಕ್ಟ್ರೀಶಿಯನ್‌, ಅಡುಗೆ, ಪೈಂಟಿಂಗ್‌, ಪ್ಲಂಬಿಂಗ್‌, ಸಾರಣೆ ಮೊದಲಾದ ರೀತಿಯ ಕೆಲಸಗಳಲ್ಲಿ ಪರಿಣಿತಿ ಪಡೆದಿರುವ ಅವರು ತಮ್ಮ ಕಲಾ ಚಟುವಟಿಕೆಗಳಿಂದಲೂ ಸಾಕಷ್ಟು ಪ್ರಖ್ಯಾತಿ ಗಳಿಸಿದ್ದಾರೆ. ಪ್ರತೀ ವರ್ಷ ಈದ್‌ ಮೀಲಾದ್‌ ಮೆರವಣಿಗೆಗೆ ತನ್ನ ದ್ವಿಚಕ್ರ ವಾಹನವನ್ನು ವಿಭಿನ್ನ ಶೈಲಿಯಲ್ಲಿ ಸಿಂಗರಿಸುವ ಅವರ ಚಾಕಚಕ್ಯತೆ ಗ್ರಾಮದಲ್ಲಿ ಗಮನ ಸೆಳೆದಿದೆ.

ಸುಲಭದ ಮಾತೇ ಅಲ್ಲ
ಸರಕಾರದ ಯೋಜನೆಯ ಸಹಕಾರದೊಂದಿಗೆ ನಿರ್ಮಿಸುತ್ತಿರುವ ಮನೆ ಇದಾಗಿದೆ. ಏಳು ಅಡಿ ಆಳದ ತಳಪಾಯಕ್ಕೆ ಲೋಡುಗಟ್ಟಲೆ ಕಾಡು ಕಲ್ಲುಗಳನ್ನು ಒಬ್ಬನೇ ತುಂಬಿದ್ದಾರೆ. ಮಣ್ಣು ಬೆರೆಸಿ ಓರಣವಾಗಿ ಜೋಡಿಸಿ, ಅದರ ಮೇಲೆ ಕೆಂಪು ಕಲ್ಲಿನ ಪಂಚಾಂಗವನ್ನೂ ಫಾರೂಕ್‌ ಒಬ್ಬರೇ ನಿರ್ಮಿಸಿದ್ದಾರೆ. ಅನಂತರ ಸಂಪೂರ್ಣ ಗೋಡೆಯನ್ನು ಕಟ್ಟಿದ್ದಾರೆ. ಅವರೇ ಮೇಸ್ತ್ರಿ. ಅವರೇ ಹೆಲ್ಪರ್‌. ಕಿಟಕಿ ಮತ್ತು ದಾರಂದಗಳನ್ನು ಇರಿಸುವಾಗ ಮಾತ್ರ ನಾಲ್ಕು ಮಂದಿ ಕೆಲಸಗಾರರ ಸಹಾಯವನ್ನು ಪಡೆದುಕೊಂಡಿದ್ದಾರಂತೆ.

ತಾರಸಿಯ ಕೆಲಸವನ್ನು ಸೆಂಟ್ರಿಂಗ್‌ ಕೆಲಸದವರಿಂದ ಮಾಡಿಸಿದ್ದಾರೆ. ಈಗ ಮನೆಯ ಮುಕ್ಕಾಲು ಭಾಗದಷ್ಟು ಕೆಲಸ ಪೂರ್ಣಗೊಂಡಿದ್ದು, ಇನ್ನುಳಿದ ಕೊನೆಯ ಹಂತದ ಕೆಲಸಗಳು ಬಾಕಿ ಇವೆ. ಅವುಗಳನ್ನೂ ಕೂಡಾ ತಾನೊಬ್ಬನೇ ಮಾಡಿ ಮುಗಿಸುತ್ತೇನೆ ಎನ್ನುತ್ತಾರೆ ಫಾರೂಕ್‌. 

ಆತ್ಮವಿಶ್ವಾಸ ಇದೆ
ನನ್ನ ಕನಸಿನ ಮನೆಯ ಗಾರೆ, ವಯರಿಂಗ್‌, ಪ್ಲಂಬಿಂಗ್‌, ಪೈಂಟಿಂಗ್‌ ಕೆಲಸಗಳನ್ನು ತಾನೊಬ್ಬನೇ ಮುಗಿಸಬಲ್ಲೆ ಎನ್ನುವ ಆತ್ಮವಿಶ್ವಾಸ ನನಗಿದೆ. ಇಲ್ಲಿಯ ತನಕ ಸುಮಾರು 3.60 ಲ.ರೂ. ವ್ಯಯಿಸಿದ್ದೇನೆ. ತನ್ನ ಒಂಟಿ ದುಡಿಮೆಯ ಮೂಲಕ ಕೆಲಸಗಾರರಿಗೆ ಕೊಡಬೇಕಾಗಿದ್ದ 3 ಲಕ್ಷ ರೂ.ನಷ್ಟು ಹಣ ಉಳಿತಾಯವಾಗಿದೆ.
– ಫಾರೂಕ್‌,
ಮನೆ ನಿರ್ಮಿಸುತ್ತಿರುವವರು

ಪ್ರವೀಣ್‌ ಚೆನ್ನಾವರ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾಣೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewq-ewq

Yadgir; ಮೇ.1 ರಂದು ಕಾಂಗ್ರೆಸ್ ನಾಯಕರ ಸಮಾಗಮ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.