ಇನ್ನೂ ಇಳಿಯದ ಈರುಳ್ಳಿ ಬೆಲೆ ಇನ್ನಷ್ಟು ಏರಿಕೆ ಸಂಭವ?
Team Udayavani, Nov 27, 2019, 6:00 AM IST
ಮಂಗಳೂರು/ ಉಡುಪಿ: ಈರುಳ್ಳಿ ಬೆಲೆ ಮಂಗಳವಾರ 110 ರೂ.ಗಳಲ್ಲಿ ಸ್ಥಿರವಾಗಿತ್ತು. ಮತ್ತಷ್ಟು ಬೆಲೆಯೇರಿಕೆ ಆಗಿಲ್ಲ ಎನ್ನುವುದೇ ಗ್ರಾಹಕರಿಗೆ ಸಮಾಧಾನದ ಸಂಗತಿ. ಸೋಮವಾರ ಈರುಳ್ಳಿ ಬೆಲೆ 110 ರೂ.ಗೆ ಏರಿತ್ತು. ಈರುಳ್ಳಿ (ಹಳೆಯ) ಕೆ.ಜಿ.ಗೆ 80 ರೂ ಇದ್ದುದು ರವಿವಾರ 90ರಿಂದ 96ಕ್ಕೇರಿತ್ತು. ಹೊಸತಕ್ಕೆ 70 ರೂ. ಇದ್ದುದು 90 ರೂ. ಮತ್ತು ಸಣ್ಣವಕ್ಕೆ 50 ರೂ.ಗಳಿಂದ 60 ರೂ.ಗೆ ಏರಿಕೆಯಾಗಿತ್ತು. ಮಂಗಳವಾರ ಈ ಬೆಲೆ ಸ್ಥಿರವಾಗಿತ್ತು.
ಪಂಜಾಬ್, ಪುಣೆ ಮತ್ತು ಶಿವಮೊಗ್ಗ ಭಾಗದಿಂದ ಮಂಗಳೂರಿಗೆ ಈರುಳ್ಳಿ ಪೂರೈಕೆಯಾಗುತ್ತಿದ್ದು, ಅಲ್ಲಿ ಭಾರೀ ಮಳೆಯಾಗಿ ಬೆಳೆ ಹಾನಿಯಾಗಿದೆ. ಇದರಿಂದಾಗಿ ಸರಬರಾಜಿನಲ್ಲಿ ಕೊರತೆ ಉಂಟಾಗಿ ಬೆಲೆ ಏರಿಕೆಯಾಗಿದೆ. ಬೆಲೆ ಇಳಿಕೆಯಾಗುವ ಬಗ್ಗೆ ಈವರೆಗೆ ಮಾಹಿತಿ ಇಲ್ಲ ಎಂಬುದಾಗಿ ಮಂಗಳೂರು ಮಾರುಕಟ್ಟೆ ವ್ಯಾಪಾರಿಗಳು ತಿಳಿಸಿದ್ದಾರೆ.
ಉಡುಪಿಯಲ್ಲಿ ಹಿಂದೆ 50 ರೂ.ಗೆ ಮಾರಾಟವಾಗುತ್ತಿದ್ದ ಈರುಳ್ಳಿ ಒಂದೇ ವಾರದಲ್ಲಿ 100 ರೂ.ಗೆ ಏರಿದೆ. ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 100 ರೂ. ಇದ್ದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ 110 ರೂ. ದಾಟಿದೆ. ಜಿಲ್ಲೆಗೆ ಪಂಜಾಬ್, ಪುಣೆ ಮತ್ತು ಶಿವಮೊಗ್ಗ ಭಾಗದಿಂದ ಆಮದಾಗುತ್ತದೆ.
ಹಳೆಯ ಈರುಳ್ಳಿ ಕೆ.ಜಿ.ಗೆ 100 ರೂ.ನಿಂದ 110 ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಹೊಸ ಈರುಳ್ಳಿಗೆ 90 ರೂ. ಇದೆ. ಪೂರೈಕೆ ಕಡಿಮೆಯಿರುವುದರಿಂದ ಮುಂದಿನ ದಿನಗಳಲ್ಲಿ ಬೆಲೆ 150 ರೂ. ತಲುಪುವ ಸಾಧ್ಯತೆಯಿದೆ ಎಂದು ಉಡುಪಿಯ ಸಣ್ಣ ವ್ಯಾಪಾರಿ ಅಬೂಬಕ್ಕರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
MUST WATCH
ಹೊಸ ಸೇರ್ಪಡೆ
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್