ಉಪ ನೋಂದಣಾಧಿಕಾರಿ ಕಚೇರಿ: ಅಪಾಯಕಾರಿ ಮರಗಳ ತೆರವು
Team Udayavani, May 30, 2018, 12:27 PM IST
ಪುತ್ತೂರು : ಪುತ್ತೂರು ಉಪ ನೋಂದಣಾಧಿಕಾರಿ ಕಚೇರಿ ಕಾಂಪೌಂಡ್ ಒಳಗೆ ಶುಕ್ರವಾರ ರಾತ್ರಿಯ ಗಾಳಿ ಮಳೆಗೆ ಬುಡದಿಂದ ಕಿತ್ತು ವಾಲಿಕೊಂಡಿದ್ದ ಬೃಹತ್ ಗಾತ್ರದ ಮರಗಳನ್ನು ಅರಣ್ಯ ಇಲಾಖೆಯ ಸೂಚನೆಯಂತೆ ಮಂಗಳವಾರ ಬೆಳಗ್ಗೆ ಕಾರ್ಮಿಕರು ತೆರವುಗೊಳಿಸಿದರು.
ಉಪನೋಂದಣಾಧಿಕಾರಿ ಕಚೇರಿ ಆವರಣದ ಒಳಗಡೆಯ ವಿಸ್ತಾರವಾದ ಜಾಗದಲ್ಲಿ ದೊಡ್ಡ ಗಾತ್ರದ ಹಲವು ಮೇ ಫ್ಲವರ್ ಜಾತಿಯ ಮರಗಳಿದ್ದು, ಅದರಲ್ಲಿ ಕಚೇರಿ ಗೇಟಿನ ಬಳಿಯಿಂದ ಮರವೊಂದು ಬುಡ ಸಮೇತ ಕಿತ್ತು ಮತ್ತೂಂದು ಬೃಹತ್ ಗಾತ್ರದ ಮರಕ್ಕೆ ವಾಲಿಕೊಂಡಿತ್ತು. ಈ ಕಾರಣದಿಂದ ಎರಡೂ ಮರಗಳು ಪತ್ರಿಕಾಭವನ ಕಟ್ಟಡದ ಮೇಲೆ ಬಾಗಿದ್ದವು.
ದಿನಂಪ್ರತಿ ನೂರಾರು ಮಂದಿ ಓಡಾಡುವ ಸ್ಥಳವಾಗಿದ್ದರಿಂದ ಮರವನ್ನು ತತ್ಕ್ಷಣ ತೆರವು ಗೊಳಿಸಲು ಕ್ರಮ ಕೈಗೊಳ್ಳುವಂತೆ ಉಪನೋಂದ ಣಾಧಿಕಾರಿ ನಗರಸಭೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಮುಖೇನ ಮನವಿ ಮಾಡಿದ್ದರು. ಸೂಕ್ಷ್ಮ ರೀತಿಯ ಕಾರ್ಯಾಚರಣೆ ಮೂಲಕ ಮರವನ್ನು ತೆಗೆಯಬೇಕಾದ ಕಾರಣ ನಾಲ್ಕು ದಿನಗಳ ಬಳಿಕ ನುರಿತ ಕಾರ್ಮಿಕರ ಮೂಲಕ ತೆರವುಗೊ ಳಿಸಲಾಗಿದೆ. ಆ ಮೂಲಕ ಅಪಾಯವನ್ನು ದೂರ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ
Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ
Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ