ತಿಂಗಳಾಡಿ, ಮಾಡಾವು: ವಿದ್ಯುತ್‌ ಕೈಕೊಟ್ಟರೆ ನೋ ಸಿಗ್ನಲ್‌!


Team Udayavani, Nov 11, 2018, 11:02 AM IST

11-november-5.gif

ಕೆಯ್ಯೂರು: ಪುತ್ತೂರು ತಾಲೂಕಿನಾದ್ಯಂತ ಬಿಎಸ್ಸೆನ್ನೆಲ್‌ ಮೊಬೈಲ್‌ ನೆಟ್‌ವರ್ಕ್‌ ಸಂಪೂರ್ಣ ಹದಗೆಟ್ಟಿದೆ. ಸಮಸ್ಯೆಯನ್ನು ಸರಿಪಡಿಸಲು ನಿಗಮದ ಅಧಿಕಾರಿಗಳು ಸೋತಿದ್ದಾರೆ ಎಂದು ಬಳಕೆದಾರರು ದೂರುತ್ತಿದ್ದಾರೆ. ಟವರ್‌ನಲ್ಲಿ ಸಮಸ್ಯೆಯಾದರೆ ಅಧಿಕಾರಿಗಳಿಗೆ ಆನ್‌ಲೈನ್‌ ಮೂಲಕವೇ ಸಂದೇಶ ಬರುವ ವ್ಯವಸ್ಥೆಯಿದೆ. ಆದರೂ ನೆಟ್‌ ವರ್ಕ್‌ ಸಮಸ್ಯೆ ಸರಿಪಡಿಸಿ ಎಂದು ಗ್ರಾಹಕರು ಎಷ್ಟು ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿದ್ರೆಯಲ್ಲಿರುವಂತಿದೆ.

ವಿದ್ಯುತ್‌ ಕೈಕೊಟ್ಟರೆ!
ಕೆದಂಬಾಡಿ ಗ್ರಾಮದ ತಿಂಗಳಾಡಿ ಮತ್ತು ಕೆಯ್ಯೂರು ಗ್ರಾಮದ ಮಾಡಾವು ಪ್ರದೇಶದಲ್ಲಿ ಸಾವಿರಕ್ಕೂ ಅಧಿಕ ಬಿಎಸ್ಸೆನ್ನೆಲ್‌ ಸಿಮ್‌ ಬಳಕೆದಾರರು ಇದ್ದಾರೆ. ಮಾಡಾವಿನಲ್ಲಿ ಒಂದು ಟವರ್‌ ಇದೆ. ಇದು ಕೆಯ್ಯೂರು ಪ್ರದೇಶಕ್ಕೆ ನೆಟ್‌ ವರ್ಕ್‌ ಒದಗಿಸುತ್ತದೆ. ತಿಂಗಳಾಡಿಯಲ್ಲಿ 10 ಕಿ.ಮೀ. ವ್ಯಾಪ್ತಿಯಲ್ಲಿ ಇರುವುದು ಒಂದೇ ಟವರ್‌. ತಗ್ಗು ಪ್ರದೇಶದಲ್ಲಿ ನಿರ್ಮಿಸಿರುವ ಕಾರಣ ಈ ಟವರ್‌ ನಿಂದ ಒಂದು ಕಿ.ಮೀ.  ದೂರಕ್ಕೂ ನೆಟ್‌ವರ್ಕ್‌ ಸರಿಯಾಗಿ ಸಿಗುವುದಿಲ್ಲ. ಕಳೆದ ಕೆಲವು ತಿಂಗಳಿಂದ ಈ ಎರಡೂ ಟವರ್‌ಗಳಲ್ಲಿ ಬ್ಯಾಟರಿ ಸಮಸ್ಯೆ ಇದೆ. ವಿದ್ಯುತ್‌ ಕೈಕೊಟ್ಟಾಗಲೆಲ್ಲ ಪೂರ್ತಿ ನೆಟ್‌ ವರ್ಕ್‌ ಆಫ್ ಆಗುತ್ತಿತ್ತು. ಈ ಕುರಿತು ಗ್ರಾಹಕರು ಅನೇಕ ಬಾರಿ ಅಧಿಕಾರಿಗಳಿಗೆ ದೂರು ನೀಡಿದ ಬಳಿಕ ತಾತ್ಕಾಲಿಕವಾಗಿ ಸರಿಯಾಗಿತ್ತು. ಕೆಲವು ದಿನಗಳಿಂದ ಮತ್ತೆ ಅದೇ ಸಮಸ್ಯೆ ಕಾಡುತ್ತಿದೆ.

ಆಧುನಿಕ ದಿನಗಳಲ್ಲಿ ಪ್ರತಿಯೊಂದು ವ್ಯವಹಾರವೂ ಮೊಬೈಲ್‌ ಮೂಲಕವೇ ಆಗುತ್ತಿದೆ. ಹಣ ಕಳುಹಿಸುವಲ್ಲಿಂದ ಹಿಡಿದು ದಾಖಲೆಗಳನ್ನು ಸರಿಪಡಿಸುವವರೆಗೆ ಎಲ್ಲದಕ್ಕೂ ಮೊಬೈಲ್‌ ಅವಲಂಬನೆ ಇದೆ. ತಿಂಗಳಾಡಿಯಲ್ಲಿರುವ ಮೊಬೈಲ್‌ ಟವರ್‌ 3ಜಿ ನೆಟ್‌ವರ್ಕ್‌ ಹೊಂದಿದ್ದು, ಗ್ರಾಮೀಣ ಜನರಿಗೆ ಪ್ರಯೋಜನಕಾರಿಯೂ ಆಗಿದೆ. ಆದರೆ, ಎರಡು ತಿಂಗಳಿಂದ ನೆಟ್‌ವರ್ಕ್‌ ಸರಿಯಾಗಿ ಸಿಗದೆ ಹಾಗೂ ವಿದ್ಯುತ್ತಿಲ್ಲದೇ ಇರುವಾಗ ಪೂರ್ತಿಯಾಗಿ ಕೈಕೊಟ್ಟು ತೊಂದರೆಯಾಗುತ್ತಿದೆ.

ಜನರೇಟರ್‌ ಹಾಕುವವರೇ ಇಲ್ಲ!
ಪ್ರತಿಯೊಂದು ಟವರ್‌ಗೂ ಜನರೇಟರ್‌ ವ್ಯವಸ್ಥೆ ಇದೆ. ತಿಂಗಳಾಡಿ, ಮಾಡಾವು ಟವರ್‌ಗೂ ಜನರೇಟರ್‌ ಇದೆ. ಆದರೆ ವಿದ್ಯುತ್‌ ಹೋದಾಗ ಜನರೇಟರ್‌ ಚಾಲೂ ಮಾಡುವವರೇ ಇಲ್ಲ. ತಿಂಗಳಾಡಿ ಟವರ್‌ನಿಂದ 100 ಮೀಟರ್‌ ದೂರದಲ್ಲಿ, ಮಾಡಾವು ಟವರ್‌ನಿಂದ 500 ಮೀಟರ್‌ ದೂರದಲ್ಲಿ ಬಿಎಸ್ಸೆನ್ನೆಲ್‌ ಎಕ್ಸ್‌ಚೇಂಜ್‌ ಕೇಂದ್ರವಿದ್ದರೂ ಅಲ್ಲಿನ ಸಿಬಂದಿಗೆ ಟವರ್‌ನ ಬಗ್ಗೆ ಕಾಳಜಿಯೇ ಇಲ್ಲ ಎನ್ನುವುದು ಗ್ರಾಹಕರ ಆರೋಪ. ಕರೆಂಟ್‌ ಇದ್ದರೆ ನೆಟ್‌ವರ್ಕ್‌, ಇಲ್ಲದಿದ್ದರೆ ಇಲ್ಲ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ. ಹೀಗಾಗಿ, ಗ್ರಾಹಕರು ಅನ್ಯ ಕಂಪೆ‌ನಿಗಳಿಗೆ ಪೋರ್ಟ್‌ ಆಗಲು ಮುಂದಾಗಿದ್ದಾರೆ.

ಸರಿಪಡಿಸುತ್ತಿಲ್ಲ
ವಿದ್ಯುತ್‌ ಕೈಕೊಟ್ಟರೆ ಸಿಗ್ನಲ್‌ ಕೂಡ ಆಫ್ ಆಗುವ ಸಮಸ್ಯೆ ಹಿಂದೊಮ್ಮೆ ಇತ್ತು. ಈಗ ಒಂದು ತಿಂಗಳಿಂದ ಮತ್ತೆ ಸಮಸ್ಯೆಯಾಗುತ್ತಿದೆ. ಟವರ್‌ನಲ್ಲಿರುವ ದೋಷದ ಕುರಿತು ಅಧಿಕಾರಿಗಳಿಗೆ ನಾವು ಹೇಳಬೇಕಾಗಿಲ್ಲ. ಅವರಿಗೆ ತಾನಾಗಿಯೇ ತಿಳಿಯುತ್ತದೆ. ಆದರೂ ಸರಿಪಡಿಸುತ್ತಿಲ್ಲ.
– ರಫೀಕ್‌ ನಂಜೆ
ವ್ಯಾಪಾರಿ

ಗೋಪಾಲಕೃಷ್ಣ ಸಂತೋಷ್‌ನಗರ 

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.