ಬಡ ಕುಟುಂಬಕ್ಕೆ ಶೌಚಾಲಯ, ಸ್ನಾನಗೃಹ ಹಸ್ತಾಂತರ
Team Udayavani, Apr 14, 2018, 12:11 PM IST
ವಿಟ್ಲ: ಕೊಳ್ನಾಡು ಸಾಲೆತ್ತೂರು ಶ್ರೀರಾಮ್ ಫ್ರೆಂಡ್ಸ್ ವತಿಯಿಂದ ನಿರ್ಮಿಸಲಾದ ಕೊಳ್ನಾಡು ಗ್ರಾಮದ ಪೆರ್ಲದಬೈಲು ದಾರಮ್ಮ ಅವರ ಬಡಕುಟುಂಬಕ್ಕೆ ಶೌಚಾಲಯ ಮತ್ತು ಸ್ನಾನಗೃಹವನ್ನು ಸಂಘದ ಅಧ್ಯಕ್ಷ ವಿಶ್ವನಾಥ ಗೌಡ ಕೆದುಮೂಲೆ ಮತ್ತು ಕಾರ್ಯದರ್ಶಿ ಕರುಣಾಕರ ಲಕ್ಷ್ಮೀಕೋಡಿ ಹಸ್ತಾಂತರಿಸಿದರು.
ದಾರಮ್ಮ ಅವರ ಮನೆಗೆ ರಸ್ತೆ ಇಲ್ಲ. ಶೌಚಾಲಯವಿರಲಿಲ್ಲ. ಸ್ನಾನಗೃಹವೂ ಇರಲಿಲ್ಲ. ಬಡಕುಟುಂಬಕ್ಕೆ ಇವುಗಳನ್ನು ನಿರ್ಮಿಸುವ ಶಕ್ತಿ, ಆರ್ಥಿಕ ಚೈತನ್ಯವೂ ಇರಲಿಲ್ಲ. 1 ಕಿ.ಮೀ. ದೂರದಿಂದ ಸಾಮಗ್ರಿಗಳನ್ನು ಒಯ್ಯುವುದೇ ದೊಡ್ಡ ಸವಾಲಾಗಿತ್ತು. ಕಾಮಗಾರಿ ನಡೆಸಲು ನೀರೂ ಇಲ್ಲ. ಕೊಳ್ನಾಡು ಸಾಲೆತ್ತೂರು ಶ್ರೀರಾಮ್ ಫ್ರೆಂಡ್ಸ್ ಸಂಸ್ಥೆಯ ಯುವಕರು ವೃದ್ಧೆಗೆ ಸುಮಾರು ರೂ. 33,525 ವೆಚ್ಚದಲ್ಲಿ ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಿಕೊಟ್ಟಿದ್ದಾರೆ.
ಶೌಚಾಲಯ ಮತ್ತು ಸ್ನಾನಗೃಹ ನಿರ್ಮಿಸಿಕೊಟ್ಟಿರುವ ಬಗ್ಗೆ ದಾರಮ್ಮ ಅತ್ಯಂತ ಸಂತಸ ವ್ಯಕ್ತಪಡಿಸಿದ್ದಾರೆ. ಯುವಕ ಶ್ಲಾಘನೆಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.