ವಿಟ್ಲ: ಬಿಸಿಲ ಬೇಗೆಗೆ ಬಾನಿಗೆ ಚಪ್ಪರ


Team Udayavani, Apr 14, 2018, 12:03 PM IST

14-April-8.jpg

ವಿಟ್ಲ : ದಿನದಿನವೂ ಬಿಸಿಲ ಬೇಗೆ ಜಾಸ್ತಿಯಾಗುತ್ತಿದೆ. ತಾಪಮಾನ 40 ಡಿಗ್ರಿ ಯನ್ನೇರಿದೆ. ಪೇಟೆಯಲ್ಲಿ ನಾಗರಿಕರು ಓಡಾಡು ವುದೇ ಕಷ್ಟವಾಗಿದೆ. ವ್ಯಾಪಾರಿಗಳೂ ಬಿಸಿಲ ಬೇಗೆಯಿಂದ ಬಸವಳಿದಿದ್ದು, ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡು ಕೊಂಡಿದ್ದಾರೆ.

ನೆರಳು ನೀಡಿದ ವ್ಯಾಪಾರಿಗಳು ಸಂಕಷ್ಟವನ್ನು ಎದುರಿಸಲು ವಿಟ್ಲದಲ್ಲಿ ರಸ್ತೆಯ ಎರಡು ಬದಿಯ ವ್ಯಾಪಾರಿಗಳು ಒಗ್ಗಟ್ಟಾಗಿ ಬಾನಿಗೆ ಚಪ್ಪರ ಹಾಕಿದರೆ ಹೇಗೆ ಎಂದು ಯೋಚಿಸಿ, ಕಾರ್ಯರೂಪಕ್ಕೆ ಇಳಿದಿದ್ದಾರೆ. ತಕ್ಕಮಟ್ಟಿಗೆ ಇದು ಉತ್ತಮ ಮತ್ತು ತಾತ್ಕಾಲಿಕ ಉಪಾಯವಾಗಿದ್ದು, ವ್ಯಾಪಾರಿಗಳು ಮತ್ತು ಪಾದಚಾರಿಗಳು ಸ್ವಲ್ಪ ಹೊತ್ತು ತಂಪಾದ ಅನುಭವ ಪಡೆಯುತ್ತಿದ್ದಾರೆ. 

ರಸ್ತೆಯ ಮೇಲೆ ಚಪ್ಪರ
ವಿಟ್ಲ ಜಂಕ್ಷನ್‌ ಬಳಿ ಶಾಲಾ ರಸ್ತೆಗೆ ಚಪ್ಪರ ಹಾಕಲಾಗಿದೆ. ಈ ಚಪ್ಪರವನ್ನು ಬಟ್ಟೆ ಮೂಲಕ ನಿರ್ಮಿಸಲಾಗಿದೆ. ಸಾಮಾನ್ಯವಾಗಿ ಈ ಬಟ್ಟೆಯನ್ನು ನರ್ಸರಿಗಳಲ್ಲಿ ಬಳಸುತ್ತಾರೆ. ಶಾಮಿಯಾನ ಸಂಸ್ಥೆಗಳು ಶೇಡ್‌ ನೆಟ್‌ ಅಥವಾ ಗಾರ್ಡನ್‌ ನೆಟ್‌ ಎಂದು ಕರೆಯುತ್ತಾರೆ. 10 ಅಥವಾ 20 ಅಡಿ ಅಗಲದ ಈ ಬಟ್ಟೆ ಸುಮಾರು 150, 200 ಅಡಿ ಉದ್ದವಿರುತ್ತದೆ. ಇದನ್ನು ಖರೀದಿಸಿದ ವಿಟ್ಲ ಜಂಕ್ಷನ್‌ ಬಳಿಯ ವ್ಯಾಪಾರಿಗಳು ರಸ್ತೆ ಮೇಲೆ ಒಂದು ಬದಿಯ ಕಟ್ಟಡದಿಂದ ಇನ್ನೊಂದು ಬದಿಯ ಕಟ್ಟಡಕ್ಕೆ ಕಟ್ಟಿದ್ದಾರೆ. ಒಂದು ಕಟ್ಟಡದಿಂದ ಇನ್ನೊಂದು ಕಟ್ಟಡಕ್ಕೆ ಸುಮಾರು 40 ಅಡಿ ಉದ್ದದ ಶೇಡ್‌ ನೆಟ್‌ ಬಳಸಿದ್ದಾರೆ. ಇದನ್ನು ನಾಲ್ಕು ಸಾಲುಗಳಲ್ಲಿ ಜೋಡಿಸಿದ್ದಾರೆ. ಸಾಕಷ್ಟು ಎತ್ತರದಲ್ಲಿರುವುದರಿಂದ ಯಾವುದೇ ವಾಹನ ಸಂಚಾರಕ್ಕೂ ಅಡ್ಡಿಯಾಗುವುದಿಲ್ಲ. ವ್ಯಾಪಾರಿಗಳು ಒಟ್ಟು ರೂ. 3-4 ಸಾವಿರ ರೂ. ಖರ್ಚು ಭರಿಸಿದ್ದಾರೆ.

12ರಿಂದ 3ರವರೆಗೆ ಕಷ್ಟ
ಮಧ್ಯಾಹ್ನ 12 ಗಂಟೆಗೆ ಬಿಸಿಲ ಬೇಗೆ ಜಾಸ್ತಿಯಾಗಿ, 3 ಗಂಟೆ ವರೆಗೂ ಇರುತ್ತದೆ. ಧಗೆ ಏರುವ ಈ ಹೊತ್ತಲ್ಲಿ ವ್ಯಾಪಾರಿಗಳಿಗೆ ಹಾಗೂ ಬರುವ ಗ್ರಾಹಕರಿಗೂ ಕಷ್ಟ. ಇದಕ್ಕೆ ವ್ಯಾಪಾರಿಗಳ ಈ ಉಪಾಯ ಸ್ವಲ್ಪ ಮಟ್ಟಿನ ಪ್ರಯೋಜನ ನೀಡಿದೆ.

ಆರ್‌ಸಿಸಿಸ್ಲ್ಯಾಬ್ ನಲ್ಲಿ ಶೇಡ್‌ನೆಟ್‌
ಆರ್‌ಸಿಸಿ ಮನೆಗಳಲ್ಲಿ ಬಿಸಿಲ ಉರಿ, ಸೆಕೆ ಜಾಸ್ತಿ. ಇದನ್ನು ತಡೆಯಲು ಅನೇಕ ಮಂದಿ ತಮ್ಮ ಮನೆಯ ಆರ್‌ಸಿಸಿ ಸ್ಲ್ಯಾಬ್ ಮೇಲೆ ಶೇಡ್‌ನೆಟ್‌ ಬಳಸಿ ಚಪ್ಪರ ಹಾಕುತ್ತಿದ್ದಾರೆ.

ಮೂರು ಮಳೆ ಬಿದ್ದರೂ ಬಿಸಿಬಿಸಿ
ಎಪ್ರಿಲ್‌ ತಿಂಗಳಲ್ಲಿ ವಿಟ್ಲ ಪರಿಸರದಲ್ಲಿ ಒಟ್ಟು ಮೂರು ಮಳೆ ಬಿದ್ದಿದೆ. ಪ್ರಥಮ ಮಳೆ ಒಂದೂವರೆ ಗಂಟೆ ಕಾಲ ಸುರಿದಿದ್ದರೆ, ಆಮೇಲಿನ ಎರಡೂ ಮಳೆಗಳೂ ಪ್ರಯೋಜನಕಾರಿಯಾಗಿದ್ದವು. ಮೂರು ಮಳೆ ಬಿದ್ದರೂ ಬಿಸಿ ಬಿಸಿ ವಾತಾವರಣವಿದೆ.

ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.