ರಸ್ತೆ ಗುಂಡಿ: ನಿರಂತರ ವಾಟ್ಸ್ಆ್ಯಪ್ ದೂರು
Team Udayavani, Jul 19, 2018, 1:56 PM IST
ಉಡುಪಿ/ಮಂಗಳೂರು: ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆ ಸಮಸ್ಯೆ, ಹೊಂಡಗಳ ಬಗ್ಗೆ ವಾಟ್ಸ್ಆ್ಯಪ್ ಮೂಲಕ ದೂರು ನೀಡಲು ಅವಕಾಶ ಕಲ್ಪಿಸಿದ ಬಳಿಕ ನಿರಂತರ ದೂರುಗಳು ದಾಖಲಾಗುತ್ತಿವೆ. ಈ ದೂರುಗಳಿಗೆ ಅಧಿಕಾರಿಗಳು ಸ್ಪಂದನೆಯನ್ನೂ ನೀಡುತ್ತಿದ್ದಾರೆ. ಮಂಗಳೂರಿನಲ್ಲಿ ಹೆಚ್ಚಿನ ಕರೆಗಳು ಮಹಾನಗರ ಪಾಲಿಕೆಗೆ ಸಂಬಂಧ ಪಟ್ಟಿದ್ದಾಗಿವೆ. ರಸ್ತೆ ಗುಂಡಿಗಳ ಫೋಟೋ ಕಳುಹಿಸಿದ ಸ್ಥಳಗಳಿಗೆ ಅಧಿಕಾರಿಗಳು ಖುದ್ದು ತೆರಳಿ ಸಮಸ್ಯೆ ಇತ್ಯರ್ಥಕ್ಕೆ ಗನ ಹರಿಸಿದ್ದಾರೆ.
ಉಡುಪಿ ವಿಭಾಗದಲ್ಲಿ ಅಧಿಕಾರಿಗಳಿಗೆ ಬುಧವಾರ 20ರಷ್ಟು ಫೋಟೋ ಸಂದೇಶಗಳು ಬಂದಿವೆ. ನಾಲ್ಕು ಕರೆಗಳು ಬಂದಿವೆ. ಈ ದೂರುಗಳ ಅನ್ವಯ ವಿಭಾಗೀಯ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ತತ್ಕ್ಷಣ ಮಾಹಿತಿ ನೀಡಲಾಗಿದೆ. ಲೋಕೋಪಯೋಗಿ ಅಲ್ಲದ ರಸ್ತೆಗಳ ಬಗ್ಗೆಯೂ ದೂರುಗಳು ಬಂದಿದ್ದು ಪಂಚಾಯತ್, ಸ್ಥಳೀಯಾಡಳಿತಗಳಿಗೆ ಮಾಹಿತಿ ನೀಡಲಾಗಿದೆ. ಬುಧವಾರ ಕರೆಗಳ ಸಂಖ್ಯೆ ಕಡಿಮೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇನ್ನು ಕುಂದಾಪುರ ಭಾಗದಲ್ಲೂ ಹಲವು ದೂರುಗಳು ಬಂದಿದ್ದು, ಇವುಗಳಲ್ಲಿ ಎರಡು ಕಾರ್ಕಳ ಭಾಗದ್ದಾಗಿದ್ದು ಅಲ್ಲಿನವರ ಗಮನಕ್ಕೆ ತರಲಾಗಿದೆ. ದೂರುಗಳಲ್ಲಿ ಅನೇಕ ಜಿ.ಪಂ. ರಸ್ತೆಗಳದಾಗಿದ್ದವು. ಇಂತಹ ದೂರುಗಳನ್ನು ಅವರಿಗೇ ಸಲ್ಲಿಸಿದರೆ ಉತ್ತಮ ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ಕಾರ್ಕಳ ಉಪವಿಭಾಗದಲ್ಲಿ 14 ದೂರುಗಳು ಬಂದಿದ್ದು 2 ಲೋಕೋಪಯೋಗಿ ಇಲಾಖೆಗೆ ಸಂಬಂಧ ಪಟ್ಟವು. ಇತರ 12 ಬೇರೆ ಇಲಾಖೆಯದ್ದಾಗಿವೆ.
ಪುತ್ತೂರಿನಲ್ಲಿ 3 ವರ್ಷದಿಂದ ಈ ವ್ಯವಸ್ಥೆ
ಪುತ್ತೂರು ತಾಲೂಕಿನಲ್ಲಿ ಲೋಕೋಪಯೋಗಿ ರಸ್ತೆಗಳ ಬಗ್ಗೆ ಗಮನ ಕೊಡಲು ಈ ಹಿಂದೆಯೇ ಗ್ರೂಪ್ ಒಂದನ್ನು ಮಾಡಲಾಗಿದ್ದು ಸಕ್ರಿಯವಾಗಿದೆ. ಈಗ ಇಲಾಖೆ ಸೂಚನೆ ಮೇರೆಗೆ ಮತ್ತೆ ಹೊಸ ವಾಟ್ಸ್ಆ್ಯಪ್ ವ್ಯವಸ್ಥೆ ಮಾಡ ಲಾಗಿದ್ದು ಒಂದು ದೂರಷ್ಟೇ ಬಂದಿದೆ. “ಕಳೆದ ಮೂರು ವರ್ಷಗಳಿಂದ ನಮ್ಮಲ್ಲಿ ಗ್ರೂಪ್ ಸಕ್ರಿಯವಾಗಿದೆ. ಇಲಾಖೆಯ ಸ್ಪಂದನೆಯೂ ಇದೆ. ಹೊಸ ಖಾತೆಗೆ 7 ದೂರು ಬಂದಿದ್ದರೂ ಇಲಾಖೆಗೆ ಸಂಬಂಧಿಸಿದ್ದು 1 ಮಾತ್ರ. ಉಳಿ
ದವು ಬೇರೆ ವ್ಯಾಪ್ತಿಗೆ ಸೇರಿದ್ದು’ ಎಂದು ಪಿಡಬ್ಲೂಡಿ ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತ ಪ್ರಮೋದ್ ಕುಮಾರ್ ಕೆ.ಕೆ. ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ ಕಾರ್ಯಕರ್ತರ ಘರ್ಷಣೆ…
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
ದೇಶದ ಭದ್ರತೆ, ಅಭಿವೃದ್ಧಿ, ಆರ್ಥಿಕತೆಗಾಗಿ ಮೋದಿ ಬೆಂಬಲಿಸಲು ಕೋಟ ಗೆಲ್ಲಿಸಿ:ಕಿಶೋರ್ಕುಮಾರ್
Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ
Singapore ಏರ್ ಲೈನ್ಸ್ ಪೈಲಟ್ ನಂತೆ ಪೋಸ್ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!
Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ