ತೋಡು ದಾಟಲು ಮರದ ಸಂಕವೇ ಗತಿ


Team Udayavani, Jun 14, 2018, 11:18 AM IST

14-june-4.jpg

ಕಂದಾವರ : ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಕೌಡೂರಿನಲ್ಲಿ ತೋಡು ಮಳೆಗಾಲದಲ್ಲಿ ಉಕ್ಕಿ ಹರಿಯುತ್ತಿದ್ದು, ಈ ತೋಡಿಗೆ ಸರಿಯಾದ ಸೇತುವೆ ಇಲ್ಲದೆ ಅಪಾಯ ಕಾರಿಯಾದ ಅಡಿಕೆ ಮರದ ಸಂಕದ ಮೇಲೆ ಮಕ್ಕಳು, ಗ್ರಾಮಸ್ಥರು ನಡೆದು ಹೋಗಬೇಕಿದೆ. ಒಂದೆಡೆ ದುರ್ಗಮವಾದ ರಸ್ತೆ ಮತ್ತೂಂದೆಡೆ ಅಪಾಯಕಾರಿ ಸಂಕದಿಂದ ಗ್ರಾಮಸ್ಥರು ಭಯದಿಂದಲೇ ಸಂಚರಿಸಬೇಕಾಗಿದೆ.

ಕೌಡೂರು ಶ್ರೀ ಕಾಲಭೈರವೇಶ್ವರ ದೇವಸ್ಥಾನದ ಬಳಿ ಇರುವ ಈ ತೋಡು ಗಂಜಿಮಠ, ಸೂರಲ್ಪಾಡಿ, ಕಿನ್ನಿಕಂಬಳ, ಕೌಡೂರು, ಮೂಡುಕರೆ, ಕಂದಾವರವಾಗಿ ಗುರುಪುರ ನದಿಯನ್ನು ಸೇರುತ್ತದೆ. 

ಹಲವು ವರ್ಷಗಳ ಬೇಡಿಕೆ
ಈ ತೋಡಿಗೆ ಕಾಲುಸಂಕ ಅಥವಾ ಕಿರು ಸೇತುವೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರು ಹಲವು ಬಾರಿ ಗ್ರಾಮ ಸಭೆಯಲ್ಲಿ ಮನವಿ ಮಾಡಿದ್ದಾರೆ. ಆದರೆ ಈ ತನಕ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಅಂಗನವಾಡಿ ಕೇಂದ್ರ ಹಾಗೂ ಕೌಡೂರು ಸೈಟ್‌ ಮನೆಗಳಿಗೆ ಇದು ಹತ್ತಿರದ ದಾರಿಯಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಸುಮಾರು 30 ಮಕ್ಕಳಿದ್ದಾರೆ. ಅವರಿಗೂ ಈ ಸಂಕವೇ ಗತಿ. ಈ ಭಾಗದಲ್ಲಿರುವ ಸುಮಾರು 20 ಮನೆಗಳಿಗೆ ಈ ಕಾಲುಸಂಕ ಮುಖ್ಯ ಸಂಪರ್ಕ ಸಾಧನವಾಗಿದೆ. ಇಲ್ಲವಾದರೆ ಸುತ್ತು ಬಳಸಿ ರಸ್ತೆ ಮೂಲಕ ಬರಬೇಕಿದ್ದು, ಆ ರಸ್ತೆಯೂ ಕೆಸರುಮಯವಾಗಿದೆ.

ಅಪಾಯಕಾರಿ
ಮಳೆಗಾಲದಲ್ಲಿ ಈ ತೋಡಿನಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ಈ ಸಂಕದಲ್ಲಿ ಹಾದು ಹೋಗುವ ಅಂಗನವಾಡಿ ಮಕ್ಕಳು ನಿತ್ಯವೂ ಅಪಾಯ ಎದುರಿಸಬೇಕಾಗುತ್ತದೆ. ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ದಿನನಿತ್ಯ ಮಕ್ಕಳನ್ನು ಇಲ್ಲಿ ನಿಂತು ನಿಗಾ ವಹಿಸಿ ಆವರನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಹಾದುಹೋಗಲು ಸಹಕರಿಸಬೇಕಾಗುತ್ತದೆ.

ಕೌಡೂರು ರಸ್ತೆ ಕೆಸರುಮಯ
ಈ ಪ್ರದೇಶದ ರಸ್ತೆ ಕೆಸರುಮಯವಾಗಿದ್ದು, ಈ ರಸ್ತೆಯಲ್ಲಿ ಕೌಡೂರು ಸೈಟ್‌ಗೆ ಹೋಗುವುದು ಕಷ್ಟಕರವಾಗಿದೆ. ಈ ರಸ್ತೆಯನ್ನು ಜೇಸಿಬಿಯ ಮೂಲಕ ಸರಿಪಡಿಸುವ ಕಾರ್ಯ ನಡೆಯುತ್ತಿದೆ. 

ಕಾಲು ಸೇತುವೆಯ ಬೇಡಿಕೆ ಬಂದಿಲ್ಲ
ಕೌಡೂರು ತೋಡಿಗೆ ಕಾಲು ಸೇತುವೆಯ ಬೇಡಿಕೆ ಬಂದಿಲ್ಲ. ಗ್ರಾಮಸ್ಥರು ಮನವಿ ಮಾಡಿದ್ದಲ್ಲಿ ಕಾಲು ಸೇತುವೆಗೆ ಕ್ರಮ ತೆಗೆದುಕೊಳ್ಳಲಾಗುವುದು. ನರೇಗಾ ಯೋಜನೆಯಡಿಯಲ್ಲಿ ಕಾಲು ಸೇತುವೆ ನಿರ್ಮಾಣ ಮಾಡಲು ಅವಕಾಶವಿದೆ.
– ರೋಹಿಣಿ, ಗ್ರಾಮ
ಪಂಚಾಯತ್‌ ಅಭಿವೃದ್ಧಿ ಅಧಿಕಾರಿ, ಕಂದಾವರ 

ನಾಲ್ಕು ಅಡಿಕೆ ಮರ ಬೇಕು
ಕಿರು ಸೇತುವೆಗೆ ಪಂಚಾಯತ್‌ ಸ್ಪಂದಿಸದ ಕಾರಣ ಕಂದಾವರ ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಪ್ರಕಾಶ್‌ ರೈ ಅವರ ನೇತೃತ್ವದಲ್ಲಿ, ಫ್ರೆಂಡ್‌ ಕ್ರಿಕೆಟರ್ ಕೌಡೂರು ಮತ್ತು ಗ್ರಾಮಸ್ಥರಿಂದ ಅಡಿಕೆ ಮರದ ಸಂಕ ಹಾಕಲಾಗಿದೆ. ತೋಡು 22ಅಡಿ ಅಗಲ ಇದ್ದು ಸುಮಾರು 27 ಅಡಿ ಉದ್ದವಿರುವ ಅಡಿಕೆ ಮರವನ್ನು ಹುಡುಕಿ ತಂದು ಇಲ್ಲಿನ ತೋಡಿಗೆ ಅಡ್ಡ ಹಾಕಬೇಕಾಗುತ್ತದೆ. ಕಡಿಮೆ ಪಕ್ಷ ನಾಲ್ಕು ಅಡಿಕೆ ಮರ ಅಡ್ಡಕ್ಕೆ ಹಾಕಬೇಕಾಗುತ್ತದೆ. ಹಾದು ಹೋಗುವಾಗ ಸಮತೋಲನಕ್ಕಾಗಿ ಕೈ ಹಿಡಿ ಯಲು ಬೇಕಾದ ಮರವನ್ನು ಅಡ್ಡ ಕಟ್ಟಬೇಕಾಗುತ್ತದೆ.
– ಯಶವಂತ, ಸ್ಥಳೀಯ

ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.