ಕಾಮಗಾರಿ ಅಪೂರ್ಣ; ಅನುಷ್ಠಾನವಾಗದ ಯೋಜನೆ 


Team Udayavani, Mar 3, 2019, 4:51 AM IST

3-march-2.jpg

ವೇಣೂರು: ಗ್ರಾಮೀಣ ಭಾಗದ ಅಲ್ಲಲ್ಲಿ ತೆರೆಯಲಾದ ಕಾಯಿನ್‌ ಬೂತ್‌ ಶುದ್ಧ ಕುಡಿಯುವ ನೀರಿನ ಘಟಕಗಳು ನಿರ್ಮಾಣ ಆಗಿ ಸರಿಸುಮಾರು 20 ತಿಂಗಳು ಕಳೆದರೂ ಜನತೆಗೆ ಉಪಯೋಗಕ್ಕೆ ಬಂದಿಲ್ಲ.

ರಾಜ್ಯ ಹೆದ್ದಾರಿಯ ಕುಕ್ಕೇಡಿಯಲ್ಲಿರುವ ಘಟಕವೊಂದು ಕಾರ್ಯಾಚರಿಸುತ್ತಿದ್ದರೆ, ಕೆಲವೆಡೆ ಕಾಮಗಾರಿಗಳೂ ಅಪೂರ್ಣವಾಗಿವೆ. ಕಾಯಿನ್‌ ಬೂತ್‌ ಅನ್ನು ಅಳವಡಿಸಿಲ್ಲ, ನೀರಿನ ಸಂಪರ್ಕ ನೀಡಲಾಗಿಲ್ಲ. ಈ ಎಲ್ಲ ಅವ್ಯವಸ್ಥೆಯಿಂದ ಸಾರ್ವಜನಿಕರ ಹಣ ಪೋಲಾಗಿದೆ.

ದ.ಕ. ಜಿ.ಪಂ.ನ ನೀರು ಮತ್ತು ನೈರ್ಮಲೀಕರಣ ವಿಭಾಗವು ಕಳೆದ ಮಾರ್ಚ್‌ ತಿಂಗಳಲ್ಲಿ ಕಾಯಿನ್‌ ಬೂತ್‌ ಮೂಲಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅನುಷ್ಠಾನಕ್ಕೆ ತಂದಿದೆ. ದ.ಕ. ಜಿಲ್ಲೆಯಲ್ಲಿ 148 ಕಡೆ ಇಂತಹ ಬೂತ್‌ ಅಳವಡಿಸಲು ಸರಕಾರ 12.58 ಕೋಟಿ ರೂ. ಖರ್ಚು ಮಾಡಿದೆ. ಬೆಳ್ತಂಗಡಿ ತಾಲೂಕಿನ 13 ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಈ ಘಟಕಗಳನ್ನು ಪ್ರಾಯೋಗಿಕವಾಗಿ ತೆರೆದು ವಿಸ್ತರಿಸಲಾಗಿದೆ. ವೇಣೂರು ಹೋಬಳಿಯಲ್ಲಿಯೇ 9ಕ್ಕೂ ಅಧಿಕ ಬೂತ್‌ ಗಳನ್ನು ನಿರ್ಮಿಸಲಾಗಿದ್ದು, ವೇಣೂರು ಹೋಬಳಿಯ ಒಂದೆರಡು ಘಟಕ ಹೊರತುಪಡಿಸಿ ಉಳಿದೆಲ್ಲವೂ ಉಪಯೋಗಕ್ಕೆ ಬಾರದಾಗಿವೆ.

 ಕಾಯಿನ್‌ ಹಾಕಬೇಕು
ಘಟಕದಲ್ಲಿ ಕಾಯಿನ್‌ ಬೂತ್‌ಗೆ 1 ರೂ. ಕಾಯಿನ್‌ ಹಾಕಿ ಬಟನ್‌ ಒತ್ತಿದಾಗ 10 ಲೀ. ನೀರು ಬರುತ್ತದೆ. ಮತ್ತೆ ನೀರು ಬೇಕಾದರೆ ಮತ್ತೆ 1 ಕಾಯಿನ್‌ ಹಾಕುವಂತೆ ಯೋಜನೆ ರೂಪಿಸಲಾಗಿತ್ತು. ಗ್ರಾಮೀಣ ಭಾಗದಲ್ಲಿ ಬೂತ್‌ ಗಳು ತ್ವರಿತಗತಿಯಲ್ಲಿ ತಲೆಎತ್ತಿವೆ. ಅದಕ್ಕೆ ಶುದ್ಧೀಕರಣ ಯಂತ್ರ, ನೀರಿನ ಸಂಪರ್ಕ ವ್ಯವಸ್ಥೆಯೇ ಇನ್ನೂ ಆಗಿಲ್ಲ. ಕೆಲವೆಡೆ ಕಾರ್ಯಾರಂಭಗೊಂಡಿ ದ್ದರೂ ತಾಂತ್ರಿಕ ದೋಷ ದಿಂದ ಸ್ಥಗಿತಗೊಂಡಿವೆ. ಮತ್ತೆ ದುರಸ್ತಿಗೊಳ್ಳದ ಬೂತ್‌ಗಳು ಇದೀಗ ಪಾಳುಬಿದ್ದಿವೆ.

 8.50 ಲಕ್ಷ ರೂ. ವೆಚ್ಚ
ಪ್ರತೀ ಶುದ್ಧ ನೀರಿನ ಘಟಕಕ್ಕೆ 8.50 ಲಕ್ಷ ರೂ. ವೆಚ್ಚ ಮಾಡಲಾಗಿದ್ದು, ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗದೆ ಯೋಜನೆ ವಿಫಲವಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಗ್ರಾಮೀಣ ಭಾಗದ ಅಲ್ಲಲ್ಲಿ ಬಣ್ಣ ಹೊತ್ತ ಬೂತ್‌ಗಳಷ್ಟೇ ಕಾಣಸಿಗುತ್ತಿದ್ದು, 2016ರ ಬೇಸಗೆ ಕಾಲದ ಮೊದಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಹಲವು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳದೆ ಹಣ ಪೋಲಾಗಿದೆ.

ಮೇ 2ನೇ ವಾರದಲ್ಲಿ ಗುತ್ತಿಗೆ 
ಶುದ್ಧ ಕುಡಿಯುವ ಘಟಕದ ನಿರ್ಮಾಣಕ್ಕೆ ಪಾನ್‌ ಏಷ್ಯಾ ವರ್ಲ್ಡ್ ವೆಬ್‌ ಬೆಂಗಳೂರು ಅವರಿಗೆ ಗುತ್ತಿಗೆ ನೀಡಲಾಗಿ, 2016ರಲ್ಲೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ ಅವರು ಕಾಮಗಾರಿ ವಿಳಂಬ ಹಾಗೂ ಟೆಂಡರ್‌ ನಿಯಮ ಪಾಲಿಸಿಲ್ಲ. ಏಳೆಂಟು ಬಾರಿ ನೋಟಿಸು ಜಾರಿ ಮಾಡಲಾಗಿತ್ತು. 2018ರ ಮಾರ್ಚ್ ನಲ್ಲಿ ಅವರ ಟೆಂಡರ್‌ ಒಪ್ಪಂದ ರದ್ದು ಮಾಡಲಾಗಿದೆ. ಚುನಾವಣೆ ಎದುರಾದ ಕಾರಣ ಮರು ಟೆಂಡರು ಕರೆಯಲು ವಿಳಂಬವಾಯಿತು. ಈಗ ಮತ್ತೆ ರೀ ಎಸ್ಟಿಮೇಟ್‌ ಮಾಡಲಾಗಿದ್ದು, ಟೆಂಡರ್‌ಗೆ ಆದೇಶ ಬಂದಿದೆ. ಅದರಲ್ಲಿನ ಗೊಂದಲಗಳಿಗೆ ಸ್ಪಷ್ಟೀಕರಣ ಪಡೆದು, ಮುಂದಿನ 2 ತಿಂಗಳು ಟೆಂಡರ್‌ ಪ್ರಕ್ರಿಯೆ ಇದ್ದು, ಏಜೆನ್ಸಿ ಆಯ್ಕೆ ಮಾಡಿ ಮೇ 2ನೇ ವಾರದಲ್ಲಿ ಗುತ್ತಿಗೆ ನೀಡಲಾಗುವುದು ಎಂದು ಜಿ.ಪಂ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ವಿಭಾಗೀಯ ಸ. ಎಂಜಿನಿಯರ್‌ ಗೋಪಿ ತಿಳಿಸಿದ್ದಾರೆ.

 3 ಘಟಕಗಳ ಕಾಮಗಾರಿ ಅಪೂರ್ಣ
ನಮ್ಮ ಗ್ರಾ.ಪಂ. ವ್ಯಾಪ್ತಿಯಲ್ಲಿ 4 ಘಟಕಗಳನ್ನು ಸ್ಥಾಪಿಸಲಾಗಿದೆ. 3 ಘಟಕಗಳ ಕಾಮಗಾರಿ ಪೂರ್ಣವಾಗಿಲ್ಲ. ವೇಣೂರು ಪೇಟೆಯಲ್ಲಿರುವ ಘಟಕದ ಕಾಮಗಾರಿ ಪೂರ್ಣಗೊಂಡು ಕಾರ್ಯಾರಂಭಗೊಂಡಿತ್ತು. ಆದರೆ ಬಳಿಕದ ದಿನಗಳಲ್ಲಿ ಕಾಯಿನ್‌ ಬೂತ್‌ನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ದುರಸ್ತಿಗಾಗಿ ಕಾಯಿನ್‌ ಹಾಕುವ ಯಂತ್ರವನ್ನು ಕೊಂಡೊಯ್ದಿದ್ದಾರೆ.
– ಕೆ. ವೆಂಕಟಕೃಷ್ಣರಾಜ,
ಪಿಡಿಒ, ವೇಣೂರು ಗ್ರಾ.ಪಂ.

ಪದ್ಮನಾಭ ವೇಣೂರು

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.