‘ವಿಶ್ವದಲ್ಲಿ ಶೇ. 30ರಷ್ಟು ಜನ ಹಸಿವೆಯಿಂದಿದ್ದಾರೆ’
Team Udayavani, Oct 17, 2018, 12:22 PM IST
ಕೊಡಿಯಾಲಬೈಲ್: ಆರ್ಥಿಕತೆಯು ಕುಸಿದಾಗ ಕೃಷಿ ಉತ್ಪಾದನೆಯು ಕುಂಠಿತವಾಗುತ್ತದೆ. ಆಹಾರ ಕೊರತೆಯಿಂದಾಗಿ ಜಗತ್ತಿನಲ್ಲಿ 30 ಪ್ರತಿಶತ ಜನರು ಹಸಿವೆಯಿಂದ ಬಳಲುತ್ತಿದ್ದಾರೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ಕಲಿಕೆಯನ್ನು ಮುಂದುವರಿಸಬೇಕು ಮತ್ತು ಜನರನ್ನು ಹಸಿವು ಮುಕ್ತರನ್ನಾಗಿಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಮಾಜಿ ಮುಖ್ಯಸ್ಥ ಪ್ರೊ| ಶಾಮಸುಂದರ್ ಬಿ.ಎ. ಹೇಳಿದರು.
ಸಂತ ಅಲೋಶಿಯಸ್ ಕಾಲೇಜಿನ ಸ್ನಾತಕೋತ್ತರ ಆಹಾರ ವಿಜ್ಞಾನ ಕಲಿಕಾ ಮತ್ತು ಸಂಶೋಧನ ವಿಭಾಗದ ವತಿಯಿಂದ ಆಹಾರ ಸಂಸ್ಕರಣೆ ಮತ್ತು ತಾಂತ್ರಿಕ ವಿಭಾಗದ ಸಹಯೋಗದೊಂದಿಗೆ ಕಾಲೇಜಿನ ರಾಬರ್ಟ್ ಸಿಕ್ವೇರಾ ಸಭಾಂಗಣದಲ್ಲಿ ನಡೆದ ವಿಶ್ವ ಆಹಾರ ದಿನಾಚರಣೆಯಲ್ಲಿ ಅವರು ಮಾತನಾಡಿದರು. 1951ರಲ್ಲಿ ಆಹಾರ ಉತ್ಪಾದನೆಯು 50 ಮಿಲಿಯ ಟನ್ಳಾಗಿತ್ತು. ಆದರೆ ಈಗ 285 ಮಿಲಿಯ ಟನ್ಗಳಾಗಿದೆ. ಭಾರತವು ಹಾಲು, ಸೆಣಬು ಮತ್ತು ಅಕ್ಕಿಯ ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ ಮತ್ತು ಸಕ್ಕರೆ, ಗೋಧಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ ಎಂದರು.
ಕುಲಸಚಿವ ಡಾ| ಎ.ಎಂ. ನರಹರಿ, ಸಸ್ಯಶಾಸ್ತ್ರ ಲ್ಯಾಬ್ನ ನಿರ್ದೇಶಕ, ಡಾ| ಲಿಯೋ ಡಿ’ಸೋಜಾ, ಡಿಡಿಯು ಕೌಶಲ ಕೇಂದ್ರದ ನಿರ್ದೇಶಕ ಡಾ| ರಿಚರ್ಡ್ ಗೊನ್ಸಾಲ್ವಿಸ್, ಆಹಾರ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ| ರಾಘವೇಂದ್ರ, ಉಪನ್ಯಾಸಕ ಡಾ| ಆದರ್ಶ್ ಗೌಡ, ಸಂಯೋಜಕಿ ಶಿಲ್ಪ ಲೇಖಾ ಉಪಸ್ಥಿತರಿದ್ದರು. ಡಾ| ರಿಚರ್ಡ್ ಗೊನ್ಸಾಲ್ವಿಸ್ ಸ್ವಾಗತಿಸಿ, ಡಾನಿಲ್ಲಾ ಎ. ಚೈನ್ ಪರಿಚಯಿಸಿ, ನಮ್ರಾ ನಿರೂಪಿಸಿದರು.
ಹಸಿವು ನೀಗಿಸಲು ಯತ್ನಿಸಿ
ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಂಶುಪಾಲ ಡಾ| ಪ್ರವೀಣ್ ಮಾರ್ಟಿಸ್ ಮಾತನಾಡಿ, ವಿಜ್ಞಾನಿಗಳ ಅಭೂತಪೂರ್ವ ಸಂಶೋಧನೆಯಿಂದ ಆಹಾರ ಉತ್ಪಾದನೆ ಯಲ್ಲಿ ಏರಿಕೆಯಾಗಿದೆ. ಆದರೂ ಒಟ್ಟು ಜನಸಂಖ್ಯೆಯ ಶೇ.30ರಷ್ಟು ಜನರು ಹಸಿವೆಯಿಂದ ಬಳಲುತ್ತಿದ್ದಾರೆ. ಹಲವಾರು ಕಡೆಗಳಲ್ಲಿ ಆಹಾರವು ನಿರುಪಯೋಗವಾಗುತ್ತಿದ್ದು, ಅಗತ್ಯವಿದ್ದರಿಗೆ ಆಹಾರವು ಸಿಗುತ್ತಿಲ್ಲ. ನಾವು ಅಂತಹವರಿಗೆ ಆಹಾರವನ್ನು ತಲುಪಿಸುವ ಕಾರ್ಯವನ್ನು ಮಾಡಿ ಜನರ ಹಸಿವನ್ನು ನೀಗಿಸುವಲ್ಲಿ ಪ್ರಯತ್ನಿಸಬೇಕು ಎಂದರು.
ವಿಚಾರ ಗೋಷ್ಠಿ
ಬಳಿಕ ನಡೆದ ಗೋಷ್ಠಿಯಲ್ಲಿ ಎಂ. ಅಣ್ಣಪ್ಪ ಪೈ ‘ಆಹಾರ ಉದ್ಯಮದ ಉದ್ಯಮಶೀಲತೆ, ಹಸಿವು ಮುಕ್ತ ಜಗತ್ತಿಗೆ ಆಹಾರ ಉದ್ಯಮದ ಕೊಡುಗೆಗಳು’ ಹಾಗೂ ತಿಪಟೂರಿನ ಮುಕುಂದ ನಾಯ್ಡು ‘ಬೆಣ್ಣೆ ತಯಾರಿಕಾ ಕೌಶಲ ವಿಜ್ಞಾನದ ಜೊತೆ ಕಲೆ’ ಎಂಬ ವಿಷಯಗಳಲ್ಲಿ ಮಾತನಾಡಿದರು. ಮುಕುಂದ ನಾಯ್ಡು ಅವರು ಬೆಣ್ಣೆ ತಯಾರಿಕೆಯ ಪ್ರಾತ್ಯಕ್ಷಿಕೆಯನ್ನು ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
Yadagiri: ದೇಶದಲ್ಲಿ ಕಾಂಗ್ರೆಸ್ ನೆಲ ಕಚ್ಚಿದೆ: ಯತ್ನಾಳ ಟೀಕೆ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ