ಬಯಲಾಟ ಮೂಲೆಗುಂಪಾಗಲು ವಿದ್ಯಾವಂತರೇ ಕಾರಣ


Team Udayavani, Jul 15, 2017, 3:10 PM IST

15-DV-1.jpg

ದಾವಣಗೆರೆ: ಯಕ್ಷಗಾನ ಕಲೆ ಉಳಿದು, ಬೆಳೆಯುತ್ತಿರುವುದಕ್ಕೇ ವಿದ್ಯಾವಂತರು ಕಾರಣಾದರೆ, ಬಯಲಾಟ ಮೂಲೆ ಗುಂಪಾಗಲೂ ಸಹ ಅವರೇ ಕಾರಣ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ| ಮಲ್ಲಿಕಾರ್ಜುನ ಕಲಮರಹಳ್ಳಿ ಅಭಿಪ್ರಾಯಪಟ್ಟಿದ್ದಾರೆ.

ಶುಕ್ರವಾರ ಕುವೆಂಪು ಕನ್ನಡ ಭವನದಲ್ಲಿ ಯಕ್ಷಗಾನ ಬಯಲಾಟ ಕಲಾ ಸಂಭ್ರಮದಲ್ಲಿ ಸಮಾರೋಪ ನುಡಿಗಳನ್ನಾಡಿದ ಅವರು,
ಕರಾವಳಿ ಭಾಗದಲ್ಲಿ ವಿದ್ಯೆ ಕಲಿತು ಸುಶಿಕ್ಷಿತರಾದವರು ಯಕ್ಷಗಾನವನ್ನು ಪ್ರೀತಿಸಿದರು. ಜೊತೆಗೆ ಅದನ್ನು ತಾವೂ ಸಹ ಅಭ್ಯಾಸ ಮಾಡಿಕೊಂಡು ಬಂದರು. ಇದರಿಂದ ಕಲೆ ಉಳಿದಿದ್ದು ಮಾತ್ರವಲ್ಲ, ಒಂದು ಹೊಸ ಮೌಲ್ಯ ಕಂಡುಕೊಂಡಿತು. ಆದರೆ, ಬಯಲಾಟದ
ವಿಷಯದಲ್ಲಿ ಇದು ವ್ಯತಿರಿಕ್ತವಾಯಿತು ಎಂದರು.

ಉತ್ತರ ಕರ್ನಾಟಕದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದ ಬಯಲಾಟ ಇತರೆ ಭಾಗಗಳಲ್ಲಿ ಹರಡಿಕೊಳ್ಳುತ್ತಿತ್ತು. ಆದರೆ, ಅಲ್ಲಿನ ಗ್ರಾಮೀಣ
ಯುವ ಜನಾಂಗ ನಗರಕ್ಕೆ ಬಂದು ವಿದ್ಯಾಭ್ಯಾಸ ಕಲಿತ ನಂತರ ಆ ಕಲೆಗೆ ಪ್ರಾಮುಖ್ಯತೆ ಕೊಡಲಿಲ್ಲ. ಇದರಿಂದ ಆ ಕಲೆಗಿದ್ದ ಆರಾಧಕರ ಸಂಖ್ಯೆ ಕಡಮೆಯಾಗುತ್ತಾ ಬಂದಿತು. ಈಗಲೂ ಕೆಲ ನಡು, ಇಳಿ ವಯಸ್ಸಿನವರು ಈ ಬಯಲಾಟದ ಬಗ್ಗೆ ಅಭಿಮಾನ ಹೊಂದಿದ್ದಾರೆ. ಅವರಿಂದಲೇ ಕಲೆ ಇನ್ನೂ ಉಳಿದುಕೊಂಡಿದೆ ಎಂದು ಹೇಳಿದರು.

ಯಕ್ಷಗಾನ ಬಯಲಾಟ ಅಕಾಡೆಮಿ ಯಕ್ಷಗಾನಕ್ಕೆ ಮಾತ್ರ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತದೆ ಎಂಬ ಆರೋಪ ಇತ್ತು. ಇದೀಗ
ಎರಡೂ ಬೇರೆ ಬೇರೆ ಆಗುತ್ತಿವೆ. ಎರಡೂ ಕಲೆಗಳಿಗೆ ಸಮಾನ ಪ್ರಾಮುಖ್ಯತೆ ಕೊಡಬೇಕು ಎಂಬುದು ಇದರ ಹಿಂದಿನ ಸದುದ್ದೇಶ.
ಆದರೆ, ಅಕಾಡೆಮಿ ಬೇರೆ ಆದ ನಂತರ ಕಲೆಯ ಪ್ರಸರಣ ಪ್ರಮಾಣ ಕಡಮೆಯಾಗಬಾರದು. ಯಕ್ಷಗಾನ ಕೇವಲ ದಕ್ಷಿಣ ಕರ್ನಾಟಕಕ್ಕೆ,
ಬಯಲಾಟ ಕೇವಲ ಉತ್ತರ ಕರ್ನಾಟಕಕ್ಕೆ ಎಂಬಂತೆ ಆಗಬಾರದು. ಎರಡೂ ಕಲೆಗಳನ್ನೂ ಎಲ್ಲಾ ಕಡೆ ಪಸರಿಸುವಂತಹ ಕೆಲಸವನ್ನು
ಅಕಾಡೆಮಿಗಳು ಮಾಡಬೇಕು ಎಂದು ಅವರು ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಬಾರಿಕೇರ ಕರಿಯಪ್ಪ, ಯಕ್ಷಗಾನ ಬಯಲಾಟ ಕಲಾವಿದರ ಸಂಘದ ಅಧ್ಯಕ್ಷ ಎನ್‌.ಎಸ್‌. ರಾಜು, ಯಕ್ಷಗಾನ
ಬಯಲಾಟ ಅಕಾಡೆಮಿಯ ರಿಜಿಸ್ಟಾರ್‌ ಎಸ್‌. ಎಚ್‌. ಶಿವರುದ್ರಪ್ಪ, ಅಕಾಡೆಮಿ ಸದಸ್ಯ ಡಾ| ಬಿ.ಎಂ. ಗುರುನಾಥ್‌ ವೇದಿಕೆಯಲ್ಲಿದ್ದರು.
ವೇದಿಕೆ ಕಾರ್ಯಕ್ರಮದ ನಂತರ ಬೆಳಗಾವಿಯ ಶಿವಲಿಂಗಪ್ಪ ಮತ್ತು ತಂಡದವರು ಸಣ್ಣಾಟ, ಸಾಲಿಗ್ರಾಮ ಗಣೇಶ್‌ ಶೆಣೈ ಮತ್ತು
ತಂಡ ಗದಾಯುದ್ಧ ಯಕ್ಷಗಾನ ಪ್ರಸಂಗ, ದಾವಣಗೆರೆಯ ಹನುಮಂತಾಚಾರ್‌ ಮತ್ತು ತಂಡ ದೇವಧೂತ ಪ್ರಸಂಗ ಬಯಲಾಟ
ಪ್ರಸ್ತುತ ಪಡಿಸಿತು.

ಟಾಪ್ ನ್ಯೂಸ್

Kota Srinivas Poojary; ತೈಲ ದರ ಏರಿಕೆ ಜನ ವಿರೋಧಿ ನಡೆ

Kota Srinivas Poojary; ತೈಲ ದರ ಏರಿಕೆ ಜನ ವಿರೋಧಿ ನಡೆ

Kannada ಮಾತನಾಡಲು ಬಾರದ ಶಿಕ್ಷಣ ಸಚಿವರು : ಭೋಜೇಗೌಡ ಟೀಕೆ

Kannada ಮಾತನಾಡಲು ಬಾರದ ಶಿಕ್ಷಣ ಸಚಿವರು: ಭೋಜೇಗೌಡ ಟೀಕೆ

malpeKasaragod ಚೀಮೇನಿ: ಬಾಲಕರಿಬ್ಬರು ನೀರುಪಾಲು

Kasaragod ಚೀಮೇನಿ: ಬಾಲಕರಿಬ್ಬರು ನೀರುಪಾಲು

1-adsddsad

T20 World Cup;106 ರನ್‌ ಮಾಡಿಯೂ ಗೆಲುವು: ಬಾಂಗ್ಲಾಕ್ಕೆ ಸೂಪರ್‌-8 ಟಿಕೆಟ್‌

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Temples:ಕರಾವಳಿಯ ದೇಗುಲಗಳಲ್ಲಿ ಭಾರೀ ಭಕ್ತ ಸಂದಣಿ

Rain ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

Rain ಕರಾವಳಿಯ ವಿವಿಧೆಡೆ ಸಾಧಾರಣ ಮಳೆ

1-sl

T20 World Cup; ಲಂಕೆಗೆ ಕೊನೆಯಲ್ಲೊಂದು ಸಮಾಧಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

renukaacharya

BJP vs BJP; ಶಾಸಕ ಬಿ.ಪಿ. ಹರೀಶ್ ವಿರುದ್ಧ ಕಿಡಿ ಕಾರಿದ ರೇಣುಕಾಚಾರ್ಯ

ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

Davanagere;ಆಲದಮರ ಕೆಳಗೆ ಶಾಂತವಾಗಿ ಕುಳಿತುಕೊಳ್ಳಲಿ: ಸಿದ್ದೇಶ್ವರ್ ಗೆ ರವೀಂದ್ರನಾಥ್ ಟಾಂಗ್

10-

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

KARADI (2)

Jagalur ; ರೈತನ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ ಮೂರು ಕರಡಿಗಳು

Shamanuru Shivashankarappa

Road ಅಲ್ಲಿ ಹೋಗುವವರು ಕಂಪ್ಲೆಂಟ್ ಕೊಟ್ಟರೆ ಅರೆಸ್ಟಾ?: ಬಿಎಸ್ ವೈ ಪರ ಶಾಮನೂರು

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

Kota Srinivas Poojary; ತೈಲ ದರ ಏರಿಕೆ ಜನ ವಿರೋಧಿ ನಡೆ

Kota Srinivas Poojary; ತೈಲ ದರ ಏರಿಕೆ ಜನ ವಿರೋಧಿ ನಡೆ

1-asddsadasd

ATP Singles Ranking: ಸುಮಿತ್‌ ಜೀವನಶ್ರೇಷ್ಠ 71ನೇ ರ್‍ಯಾಂಕಿಂಗ್‌

Kannada ಮಾತನಾಡಲು ಬಾರದ ಶಿಕ್ಷಣ ಸಚಿವರು : ಭೋಜೇಗೌಡ ಟೀಕೆ

Kannada ಮಾತನಾಡಲು ಬಾರದ ಶಿಕ್ಷಣ ಸಚಿವರು: ಭೋಜೇಗೌಡ ಟೀಕೆ

football

Team India ಫುಟ್‌ಬಾಲ್‌ ಕೋಚ್‌ ಸ್ಟಿಮ್ಯಾಕ್‌ಗೆ ಗೇಟ್‌ಪಾಸ್‌

mಕರಾವಳಿಯಲ್ಲಿ ಸಂಭ್ರಮದ ಬಕ್ರೀದ್‌ ಆಚರಣೆ; ಮಸೀದಿಗಳಲ್ಲಿ ಪ್ರಾರ್ಥನೆ

ಕರಾವಳಿಯಲ್ಲಿ ಸಂಭ್ರಮದ ಬಕ್ರೀದ್‌ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.