ದಿಕ್ಸೂಚಿಯಾದ ಸಮ್ಮೇಳನ ನುಡಿಬೇರು ಗಟ್ಟಿಯಾಗಲಿ


Team Udayavani, Jan 7, 2019, 12:30 AM IST

190106kpn94.jpg

ಪ್ರತಿವರ್ಷ ನುಡಿಜಾತ್ರೆ ಘಟಿಸುವುದು ನಾಡಿನ ಅತ್ಯಂತ ಸಹಜ ಕ್ರಿಯೆ. ಅದರಿಂದ ನಾಡಿಗೆ- ನುಡಿಗೆ ದಕ್ಕಿದ್ದೇನು ಎನ್ನುವ ಪ್ರಶ್ನೆಯೊಂದು ಮಾತ್ರ ಆ ಸಮ್ಮೇಳನ ರೂಪುಗೊಳ್ಳುವ ಮೊದಲು ಮತ್ತು ನಂತರವೂ ಕಾಡುವಂಥದ್ದು. ಆದರೆ, ಈ ಬಾರಿಯ 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿಂದಿನ ಎಲ್ಲ ಸಮ್ಮೇಳನಗಳಿಗಿಂತ ಭಿನ್ನ ನಿಲುವನ್ನು ತಳೆಯಿತು. ಭಾಷೆಯ ಬೆಳವಣಿಗೆಗೆ ಹಲವು ಕಿಂಡಿಗಳನ್ನು ತೆರೆದಿಟ್ಟು, ಭವಿಷ್ಯದ ಸಮ್ಮೇಳನಗಳಿಗೆ ದಿಕ್ಸೂಚಿ ತೋರಿರುವುದು ಸ್ತುತ್ಯರ್ಹ.

ಸಮ್ಮೇಳನ ಅಧ್ಯಕ್ಷೀಯ ಭಾಷಣದಲ್ಲಿ ಕನ್ನಡದ ಮೂಲ ಸಮಸ್ಯೆಯನ್ನು ಸೂಕ್ಷ್ಮವಾಗಿ ಶೋಧಿಸಲಾಗಿದೆ. ಅಲ್ಲಿ ಹತ್ತಾರು ಸಮಸ್ಯೆಗಳನ್ನು ಪ್ರಸ್ತಾಪಿಸದೇ, ಗಂಭೀರ ಸ್ವರೂಪದ ಒಂದೇ ಸಮಸ್ಯೆಗೆ ಚಿಕಿತ್ಸೆ ನೀಡುವುದು ಸದ್ಯದ ಮಟ್ಟಿಗೆ ಅನಿವಾರ್ಯ ಎಂಬ ಧ್ವನಿಯನ್ನು ಅದರಲ್ಲಿ ಸುಸ್ಪಷ್ಟ. ಕನ್ನಡ ಶಾಲೆಯ ಮೇಲಿನ ತಿರಸ್ಕಾರ, ಇಂಗ್ಲಿಷ್‌ ಮಾಧ್ಯಮ ಕಡೆಗಿನ ವಲಸೆಗೆ, ಕನ್ನಡ ಪ್ರಾಥಮಿಕ ಶಾಲಾ ಶಿಕ್ಷಣದ ರಾಷ್ಟ್ರೀಕರಣವೇ ಸೂಕ್ತ ಎನ್ನುವ ಚಿಂತನೆಯನ್ನು ದಶಕಗಳ ಹಿಂದೆಯೇ ಮಾಡಿದ್ದಿದ್ದರೆ, ಇಂದು ಇಷ್ಟೊಂದು ಚಿಂತಿಸಬೇಕಾಗಿರಲಿಲ್ಲ.

ಇಲ್ಲಿಯ ತನಕ ನಡೆದ ಎಲ್ಲ ಸಮ್ಮೇಳನಗಳಲ್ಲೂ ಭಾಷೆಯ ಬೆಳವಣಿಗೆ ಕುರಿತು ಉತ್ತಮ ನಿರ್ಣಯ ಕೈಗೊಂಡಿದ್ದು ಹೌದಾದರೂ, ಅದು ಆಡಳಿತ ಯಂತ್ರದ ಕಿವಿಗೆ ಬೀಳಲಿಲ್ಲ ಎನ್ನುವುದೂ ವಿಪರ್ಯಾಸವೇ. ಪ್ರಸ್ತುತ ಸಮ್ಮೇಳನದ ಧ್ವನಿ ಮುಖ್ಯಮಂತ್ರಿ ಅವರ ಕಿವಿಗೂ ಬಿದ್ದಿರುವುದು, ಆ ಕುರಿತು ಚಿಂತಿಸುವುದಾಗಿ ಅವರು ಹೇಳಿರುವುದು, ಕೇವಲ ಭರವಸೆಯಾಗಿ ಉಳಿಯದೇ, ನಾಡಿಗೆ ಬೆಳಕು ತೋರುವ ಕೆಲಸವಾಗಲಿ ಎಂದು ಆಶಿಸೋಣ.

ಈ ನಡುವೆಯೇ ಮಾತೃಭಾಷಾ ರಾಷ್ಟ್ರೀಕರಣ ಕೆಲಸ ಅಷ್ಟೊಂದು ಸಲೀಸೇ? ಎಂಬ ಪ್ರಶ್ನೆಯೂ ಕಾಡುತ್ತದೆ. ಈಗಿನ ಬಹುತೇಕ ಖಾಸಗಿ ವಿದ್ಯಾಸಂಸ್ಥೆಗಳು ರಾಜಕಾರಣಿಗಳ ಅಧಿಪತ್ಯದಲ್ಲೇ ಇರುವುದರಿಂದ, ಸರ್ಕಾರಕ್ಕೆ ಅವರನ್ನೆಲ್ಲ ಓಲೈಸುವುದು ಸವಾಲಿನ ಕೆಲಸವೂ ಆಗಲಿದೆ.

ಇದೆಲ್ಲಕ್ಕಿಂತ ಆಚೆ ಪೋಷಕರ ಮನಃಸ್ಥಿತಿಯನ್ನು ಬದಲಿಸುವ ಕೆಲಸ ಮಹಾನ್‌ ಸವಾಲೇ ಸರಿ. ಎಲ್ಲಿ ಮಾತೃಭಾಷೆಯಲ್ಲಿ ಓದಿದರೆ, ಮಕ್ಕಳು ಹಿಂದೆ ಬೀಳುತ್ತವೋ ಎಂಬ ಭಾವ ಮೇನಿಯಾದಂತೆ ಹಬ್ಬಿರುವುದು ಆತಂಕದ ಸಂಗತಿ. ಕನ್ನಡ ಅನ್ನ ಕೊಡುವ ಭಾಷೆ ಎಂಬುದನ್ನು ಬಿಂಬಿಸುವ ಕೆಲಸಕ್ಕೆ ಅಷ್ಟೇ ಅಗತ್ಯ ತಯಾರಿಗಳನ್ನೂ ಸರ್ಕಾರ ಮಾಡಬೇಕಿದೆ. 

ಸೃಜನಶೀಲತೆ ಎನ್ನುವುದು ಶಿಕ್ಷಣಕ್ಕೂ ದಾಟಬೇಕು ಎನ್ನುವ ಆಶಯ ಸಮ್ಮೇಳನದಿಂದ ಹೊರಬಿದ್ದಿದೆ. ಇದುವರೆಗೆ ಸಾಹಿತ್ಯ ಪರಿಧಿಗಷ್ಟೇ ಆಸ್ತಿಯಂತೆ ಇದ್ದ ಸೃಜನಶೀಲತೆಯನ್ನು ಬರಮಾಡಿಕೊಳ್ಳುವ ಬಗೆಯೆಂತು ಎಂಬುದರ ಹುಡುಕೂಟವೂ ಸಾಹಿತ್ಯ ತಜ್ಞರಿಂದ, ಶೈಕ್ಷಣಿಕ ತಜ್ಞರಿಂದ ಆಗಲೇಬೇಕಿರುವ ಕೆಲಸ.

ಸಮ್ಮೇಳನ ಹೊಮ್ಮಿಸಿದ ಇಷ್ಟೆಲ್ಲ ಆಶಯಗಳನ್ನು ಮಂಕಾಗಿಸುವ ಕೆಲಸವೂ ಆಗಬಾರದು ಎನ್ನುವ ಎಚ್ಚರ ಸರ್ಕಾರಕ್ಕೆ ಬೇಕು. ಭಾಷೆಯ ವಿಚಾರದಲ್ಲಿ ರಾಜಕಾರಣ, ಸ್ವಹಿತಾಸಕ್ತಿಯನ್ನು ದೂರವಿಟ್ಟಾಗ ಮಾತ್ರವೇ ಇಂಥ ಆಶಯಗಳು ಈಡೇರಲು ಸಾಧ್ಯ. ನುಡಿಯ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸ ಆದಷ್ಟು ಬೇಗ ಸಾಗಲಿ ಎಂದು ಹಾರೈಸೋಣ.

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.