14ರಿಂದ ರಂಗಧ್ವನಿ-ರಾಷ್ಟ್ರೀಯ ನಾಟಕೋತ್ಸವ


Team Udayavani, Mar 12, 2020, 3:32 PM IST

huballi-tdy-3

ಧಾರವಾಡ: ಇಲ್ಲಿಯ ರಂಗಾಯಣ ವತಿಯಿಂದ ಮಾ.15ರಿಂದ ಮಾ.19ರವರೆಗೆ ರಂಗಾಯಣ ಆವರಣದ ನಾಲ್ಕು ವೇದಿಕೆಗಳಲ್ಲಿ ರಂಗಧ್ವನಿ, ರಾಷ್ಟ್ರೀಯ ನಾಟಕೋತ್ಸವ, ರಂಗಭೂಮಿ ಸಾಹಿತ್ಯ, ವಿಮರ್ಶೆ ಹಾಗೂ ವಿನ್ಯಾಸ ಕುರಿತು ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀರಂಗ ವೇದಿಕೆ, ಯಲ್ಲೂಬಾಯಿ ಗುಳೇದಗುಡ್ಡ ವೇದಿಕೆ, ಡಾ|ಬಸವರಾಜ ಮಲ್ಲಶೆಟ್ಟಿ ವೇದಿಕೆ ಹಾಗೂ ಸಿ.ಜಿ.ಕೆ. ವೇದಿಕೆಯಲ್ಲಿ ವಿವಿಧ ಕಾರ್ಯಕ್ರಮ ನಡೆಯಲಿವೆ. ಶಿಲ್ಪಕಲಾ ಶಿಬಿರ ಮಾ.14ರಂದು ಸಮಾರೋಪ ಆಗಲಿದ್ದು, ಉಳಿದಂತೆ ಬೀದಿ ನಾಟಕ, ಪುಸ್ತಕ ಪ್ರದರ್ಶನ ಸೇರಿ ಪ್ರತಿ ದಿನ ಸಂಜೆ 7:00 ಗಂಟೆಗೆ ಬಹುಭಾಷೆ ನಾಟಕ ಪ್ರದರ್ಶನ ನಡೆಯಲಿದೆ ಎಂದರು.

ಮಾ.18ರಂದು ಬೆಳಿಗ್ಗೆ 10:30 ಗಂಟೆಗೆ ಡಾ|ಬಾಳಣ್ಣ ಶೀಗಿಹಳ್ಳಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದು, ಡಾ|ಸಿದ್ಧಲಿಂಗ ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಡಾ| ಬಿ.ಆರ್‌.ಪೊಲೀಸ್‌ ಪಾಟೀಲ, ಶ್ರೀಧರ ಹೆಗಡೆ ಭಾಗವಹಿಸಲಿದ್ದು, 12:00 ಗಂಟೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಶಿಲ್ಪವನ ಅನಾವರಣಗೊಳಿಸುವರು. 12:15 ಗಂಟೆಗೆ “ರಂಗಭೂಮಿಯಲ್ಲಿ ಭಾರತೀಯತೆ’ ಬಗ್ಗೆ ಮೈಸೂರಿನ ಶ್ರೀನಿವಾಸ(ಪಾಪು) ವಿಷಯ ಮಂಡಿಸಲಿದ್ದಾರೆ. ಅಂದು ಸಂಜೆ 4:30 ಗಂಟೆಗೆ ಡಾ| ಪಾಂಡುರಂಗ ಪಾಟೀಲ ಜಾನಪದ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಸೇರಿದಂತೆ ಗಣ್ಯರು ಪಾಲ್ಗೊಳ್ಳಲಿದ್ದಾರೆ. ವಿವಿಧ ತಂಡಗಳಿಂದ ಜಾನಪದ ಕಲಾ ಪ್ರದರ್ಶನ ನಡೆಯಲಿದೆ ಎಂದರು.

ಅಂದು ಸಂಜೆ 7:00 ಗಂಟೆಗೆ ನಡೆಯುವ ರಾಷ್ಟ್ರೀಯ ನಾಟಕೋತ್ಸವಕ್ಕೆ ಸಚಿವ ಸಿ.ಟಿ.ರವಿ ಚಾಲನೆ ನೀಡಲಿದ್ದು, ಶಾಸಕ ಅರವಿಂದ ಬೆಲ್ಲದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ, ಶಾಸಕ ಅಮೃತ ದೇಸಾಯಿ, ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಟಿ.ಎಸ್‌.ನಾಗಾಭರಣ ಪಾಲ್ಗೊಳ್ಳಲಿದ್ದಾರೆ. 7:30 ಗಂಟೆಗೆ ಮೈಸೂರಿನ ನಟನಾ ತಂಡ “ಕೆಂಪು ಕಣಗಲೆ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಮಾ.16ರಂದು ಬೆಳಿಗ್ಗೆ 10:30 ಗಂಟೆಗೆ “ರಂಗಸಾಹಿತ್ಯ’ ವಿಚಾರ ಸಂಕಿರಣಕ್ಕೆ ಪರಿಸರವಾದಿ ಶಂಕರ ಕುಂಬಿ ಚಾಲನೆ ನೀಡಲಿದ್ದು, ಜಾನಪದ ಕಥನಗಳನ್ನು ರಂಗಕ್ಕೆ ಅಳವಡಿಸುವ ಬಗ್ಗೆ ನಾಟಕಕಾರ ಹೂಲಿ ಶೇಖರ ವಿಷಯ ಮಂಡಿಸುವರು.

ರಂಗ ಸಮಾಜ ಸದಸ್ಯ ಸಿದ್ಧರಾಮ ಹಿಪ್ಪರಗಿ, ಕೃಷ್ಣಾ ಜವಳಿ ವಿಷಯ ವಿಸ್ತರಣೆ ಮಾಡಲಿದ್ದು, ಆಕಾಶವಾಣಿಯ ನಿವೃತ್ತ ನಿರ್ದೇಶಕ ಸಿ.ಯು.ಬೆಳ್ಳಕ್ಕಿ ಸಂವಾದ ನಡೆಸಲಿದ್ದಾರೆ. ಮಧ್ಯಾಹ್ನ 12:15 ಗಂಟೆಗೆ ರಂಗಸಾಹಿತ್ಯ; ಮಹಿಳೆ-ರಂಗಭಾಷೆ ಬಗ್ಗೆ ಕಾತ್ಯಾಯಣಿ ಕುಂಜಿಬೆಟ್ಟ ವಿಷಯ ಮಂಡಿಸಲಿದ್ದು, ಡಾ|ಅಮೃತ ಮಡಿವಾಳ, ಶ್ರೀಹರಿ ಧೂಪದ ವಿಷಯ ಮಂಡಿಸಲಿದ್ದಾರೆ. ಡಾ|ಶರಭೇಂದ್ರ ಸ್ವಾಮಿ ಬಿ.ಎಂ ಸಂವಾದ ನಡೆಸುವರು. ಮಧ್ಯಾಹ್ನ 3:00 ಗಂಟೆಗೆ ಬಳ್ಳಾರಿ ರಾಮಕ್ಕ ಮತ್ತು ತಂಡದಿಂದ “ಬುರ್ರಕಥಾ’ ಪ್ರಾತ್ಯಕ್ಷಿಕೆ ನಡೆಯಲಿದ್ದು, ಜೋಗಿಲು ಸಿದ್ಧರಾಜು ವಿಶ್ಲೇಷಣೆ ಮಾಡಲಿದ್ದಾರೆಂದು ತಿಳಿಸಿದರು.

ಅಂದು 4:30 ಗಂಟೆಗೆ ಜಾನಪದ ನೃತ್ಯ, ಹೆಜ್ಜೆ ಮಜಲು, ಭರತ ನಾಟ್ಯ ಜಾನಪದ ಕಲೆಗಳ ಪ್ರದರ್ಶನ, 6:30 ಗಂಟೆಗೆ ಎಸ್‌ಪಿ ವರ್ತಿಕ ಕಟಿಯಾರ್‌ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, ಪಾಲಿಕೆ ಆಯುಕ್ತ

ಸುರೇಶ ಇಟ್ನಾಳ್‌, ಎಂಜನಿಯರ್‌ ಡಾ|ವಿರೂಪಾಕ್ಷಪ್ಪ ಯಮಕನಮರಡಿ, ಬಿ.ವಿ.ರಾಜಾರಾಂ ಭಾಗವಹಿಸಲಿದ್ದಾರೆ. ಸಂಜೆ 7:30 ಗಂಟೆಗೆ ಏಕರಂಗ ಥೀಯಟರ್‌ ತಂಡ “ನಟ ಸಾಮ್ರಾಟ’ ನಾಟಕ ಪ್ರಸ್ತುತ ಪಡಿಸಲಿದೆ ಎಂದರು.

ಮಾ.17ರ ಬೆಳಿಗ್ಗೆ 10:00 ಗಂಟೆಗೆ ರಂಗ ವಿನ್ಯಾಸ ವಿಚಾರ ಸಂಕಿರಣಕ್ಕೆ ಅಲೋಕ ಚಟರ್ಜಿ ಚಾಲನೆ ನೀಡಲಿದ್ದು, ಪ್ರಾಚಾರ್ಯ ಕೆ.ಪಿ.ಅಶ್ವಥ ನಾರಾಯಣ ವಿಷಯ ಮಂಡಿಸಲಿದ್ದಾರೆ. ಬೆಂಗಳೂರು ರಂಗಾಯಣ ನಿರ್ದೇಶಕ ಚನ್ನಕೇಶವ, ಪತ್ರಕರ್ತ ಬಸವರಾಜ ಹೊಂಗಲ ವಿಷಯ ವಿಸ್ತರಿಸುವರು. ಸಾಹಿತಿ ಪ್ರಜ್ಞಾ ಮತ್ತಿಹಳ್ಳಿ ಸಂವಾದ ನಡೆಸಲಿದ್ದು, ಸಂಜೆ 4:30 ಗಂಟೆಗೆ ಜಾನಪದ ಕಲಾ ಪ್ರದರ್ಶನ ನಡೆಯಲಿವೆ. ಅಂದು ಸಂಜೆ 6:30 ಗಂಟೆಗೆ ಡಿಸಿ ದೀಪಾ ಚೋಳನ್‌ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದು, 7:30 ಗಂಟೆಗೆ ದಯಾದೃಷ್ಟಿ ರಂಗವಿನಾಯಕ ರಂಗ ಮಂಡಳಿ “ಪಾರ್ಕ್‌'(ಹಿಂದಿ), 8:30 ಗಂಟೆಗೆ ಅರ್ಣವ ಆರ್ಟ್ಸ್ ಟ್ರಸ್ಟ್‌ ತಂಡ ‘ಟು ಕಿಲ್‌ ಆರ್‌ ನಾಟ್‌ ಟು ಕಿಲ್‌’ ನಾಟಕ ಪಸ್ತುತ ಪಡಿಸಲಿವೆ. ಪ್ರತಿನಿತ್ಯ ಬೆಳಿಗ್ಗೆ 10:00 ರಿಂದ 10:30ರವರೆಗೆ ರಂಗ ಗೀತೆಗಳ ಪ್ರದರ್ಶನ ನಡೆಯಲಿವೆ ಎಂದು ತಿಳಿಸಿದರು.

ಮಾ.18ರ ಬೆಳಿಗ್ಗೆ 10:30 ಗಂಟೆಗೆ “ರಂಗವಿಮರ್ಶೆ’ ವಿಚಾರ ಸಂಕಿರಣಕ್ಕೆ ಡಾ| ವೀರಣ್ಣ ರಾಜೂರ ಚಾಲನೆ ನೀಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಡಾ| ಲಿಂಗರಾಜ ಅಂಗಡಿ ಅಧ್ಯಕ್ಷತೆ ವಹಿಸುವರು. ರಂಗವಿಮರ್ಶೆ ಪ್ರಸ್ತುತಿ, ಅಂದು-ಇಂದು ಬಗ್ಗೆ ಪತ್ರಕರ್ತ ಬಂಡು ಕುಲಕರ್ಣಿ ವಿಷಯ ಮಂಡಿಸಲಿದ್ದು, ನಟರಾದ ಸುರೇಶ ಕುಲಕರ್ಣಿ, ರವಿ ಕುಲಕರ್ಣಿ ವಿಷಯ ವಿಸ್ತರಿಸುವರು. ಡಾ| ಬಿ.ಎ.ಉಪಾಧ್ಯಾ ಸಂವಾದ ನಡೆಲಿದ್ದಾರೆ.

12:15 ಗಂಟೆಗೆ ನಾಟಕಗಳ ಪ್ರಾಯೋಗಿಕ ವಿಮರ್ಶೆ ಬಗ್ಗೆ ಗುಡಿಹಳ್ಳಿ ನಾಗರಾಜ ವಿಷಯ ಮಂಡಿಸಲಿದ್ದು, ಡಿ.ಎಚ್‌.ಕೋಲಾರ್‌, ಡಾ| ಬಸವರಾಜ ಹೊನ್ನಳ್ಳಿ ವಿಷಯ ವಿಸ್ತರಿಸುವರು. ಆರ್‌. ವೆಂಕಟರಾಜು ಸಂವಾದ ನಡೆಸುವರು. ಮಧ್ಯಾಹ್ನ 3:00ಗಂಟೆಗೆ ಮಲ್ಲಪ್ಪ ಹೊಂಗಲ ತಂಡದಿಂದ ಬೀದಿ ನಾಟಕ ನಡೆಯಲಿದೆ. ಸಂಜೆ 4:30 ಗಂಟೆಗೆ ವಿವಿಧ ಕಲಾ ತಂಡಗಳಿಂದ ಜಾನಪದ ಕಲೆಗಳ ಪ್ರದರ್ಶನ ನಡೆಯಲಿದ್ದು, ಸಂಜೆ 7:00 ಗಂಟೆಗೆ ರಂಗ ವಿಶಾರದ ಥಿಯೇಟರ್‌ “ಬೂಡೆ ನೇ ಕಹಾ'(ಹಿಂದಿ) ನಾಟಕ ಪ್ರದರ್ಶನವಾಗಲಿದೆ ಎಂದರು.

ಮಾ.19ರಂದು ಬೆಳಿಗ್ಗೆ 10:30ಗಂಟೆಗೆ ಸಾಹಿತಿಗಳಾದ ಕೆ.ಎಚ್‌.ನಾಯಕ, ಶಂಕರ ಹಲಗತ್ತಿ, ಹರ್ಷ ಡಂಬಳ ಸಮೀಕ್ಷಕರ ನುಡಿ ವ್ಯಕ್ತಪಡಿಸಲಿದ್ದು, ಮಧ್ಯಾಹ್ನ 3:00 ಗಂಟೆಗೆ ಬೀದಿ ನಾಟಕ ನಡೆಯಲಿದೆ. 4:00 ಗಂಟೆಗೆ ಜಾನಪದ ಕಲಾ ಪ್ರದರ್ಶನ, ಸಮಾರೋಪ ಭಾಷಣ ನಡೆಯಲಿದೆ ಎಂದರು.

ಟಾಪ್ ನ್ಯೂಸ್

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು

Ullal: ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Hubli; ರಾಜಕಾರಣಕ್ಕಾಗಿ ರಾಜ್ಯವನ್ನು ಬಳಸಿಕೊಂಡಿದ್ದೆ ಜೋಶಿ ಸಾಧನೆ: ವಿನಯ ಕುಮಾರ್ ಸೊರಕೆ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

bjp-congress

E.C.ನೋಟಿಸ್‌ಗೆ ಉತ್ತರಿಸಲು ಸಮಯ ಕೇಳಿದ ಬಿಜೆಪಿ, ಕಾಂಗ್ರೆಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.